BBK7: 'ಗೆದ್ದರೆ ಎಲ್ಲವನ್ನು ಉತ್ತರ ಕರ್ನಾಟಕ ಸಂತ್ರಸ್ತರಿಗೆ ನೀಡ್ತೇನೆ’ ಸ್ವಾಮೀಜಿ ಘೋಷಣೆ

Published : Oct 13, 2019, 09:05 PM ISTUpdated : Oct 13, 2019, 09:26 PM IST
BBK7: 'ಗೆದ್ದರೆ ಎಲ್ಲವನ್ನು ಉತ್ತರ ಕರ್ನಾಟಕ ಸಂತ್ರಸ್ತರಿಗೆ ನೀಡ್ತೇನೆ’ ಸ್ವಾಮೀಜಿ ಘೋಷಣೆ

ಸಾರಾಂಶ

ಬಿಗ್ ಬಾಸ್ ಕನ್ನಡಕ್ಕೆ ಅದ್ದೂರಿ ಆರಂಭ/ ಮ ನೆ ಒಳ ಸೇರಿದ ಘಟಾನುಘಟಿಗಳು/ ರವಿ ಬೆಳಗೆರೆ, ಜೈಜಗದೀಶ್ ಮನೆ ಒಳಗಿದ್ದಾರೆ/ ಕಿರುತೆರೆ ಕಲಾವಿದೆಯರ ಸಂಗಮ

ಬಿಗ್ ಬಾಸ್ ಮನೆಗೆ ಒಬ್ಬರಾದ ಮೇಲೆ ಒಬ್ಬರು ಅಚ್ಚರಿ ಸ್ಪರ್ದಿಗಳ ಪ್ರವೇಶ ಆಗುತ್ತಿದೆ.  ಹಾವೇರಿಯ ಅಗಡಿ ಗ್ರಾಮದ ಅಕ್ಕಿ ಮಠದ ಗುರಲಿಂಗ ಸ್ವಾಮೀಜಿ ಬಿಗ್ ಬಾಸ್ ಸೀಸನ್ 7ರ ಕಂಟೆಸ್ಟೆಂಟ್ ಆಗಿ ಮನೆ ಪ್ರವೇಶ ಮಾಡಿದ್ದು ನೂರು ದಿನದಲ್ಲಿ ನೂರು ಮನಸ್ಸುಗಳನ್ನು ಬದಲು ಮಾಡುತ್ತೇನೆ ಎಂದಿದ್ದಾರೆ.

ಹಾವೇರಿಯಲ್ಲಿ ಲಕ್ಷ ಸಸಿ ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದ ಈ ಸ್ವಾಮೀಜಿ ಲಿಮ್ಕಾ ಅವಾರ್ಡ್ಸ್ ಪಡೆದಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬಿಗ್ ಬಾಸ್ ನಲ್ಲಿ ಒಂದು ವೇಳೆ ಹಣ ಗೆದ್ದರೆ ಅದೆಲ್ಲವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಕಲ್ಯಾಣಕ್ಕೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.

ಯಾರಿಗೂ ಗೊತ್ತಿರದ ರಹಸ್ಯ ಬಿಚ್ಚಿಟ್ಟ ರವಿ ಬೆಳಗೆರೆ

ಹಿರಿಯ ನಟ ಜೈಜಗದೀಶ್ ಸಹ ಮನೆ ಒಳಗೆ ಪ ್ರವೇಶ ಮಾಡಿ ಸ್ನೇಹಿತ ರವಿ ಬೆಳಗೆರೆ ಅವರ ಕೈ ಕುಲುಕಿದ್ದಾರೆ. ಸ್ಯಾಂಡಲ್ ವುಡ್, ಕಿರುತೆರೆ, ಗಾಯಕರು, ನೃತ್ಯಗಾರ್ತಿ ಹೀಗೆ ಒಬ್ಬೊಬ್ಬಬ್ಬರಾಗಿ ಮನೆ ಒಳಗೆ ಸೇರಿದ್ದಾರೆ. ಕಿನ್ನರಿ ಧಾರಾವಾಹಿಯ ಮೂಲಕ ಮನ ಗೆದ್ದ ರಾಯಲ್ ಶೆಟ್ಟಿ [ಭೂಮಿ ಶೆಟ್ಟಿ] ಸಹ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!
ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!