ರಾಮ್​ಗೆ ಸೀತೆ ಹೇಳಿಯೇ ಬಿಟ್ಟಳು ಸಿಹಿ ಹುಟ್ಟಿನ ರಹಸ್ಯ? ಅಷ್ಟರಲ್ಲೇ ನಡೆಯಿತು ಅವಾಂತರ...

By Suvarna NewsFirst Published Mar 28, 2024, 12:40 PM IST
Highlights

ಸಿಹಿ ಹುಟ್ಟಿನ ರಹಸ್ಯವನ್ನು ರಾಮ್​ಗೆ ಸೀತಾ ಹೇಳುತ್ತಿದ್ದಂತೆಯೇ ಅಲ್ಲಿ ಚಾಂದನಿಯ ಎಂಟ್ರಿಯಾಗಿದೆ. ಚಾಂದನಿಗೆ ಎಲ್ಲಾ ವಿಷಯ ತಿಳಿದು ಬಿಟ್ಟಿತಾ?
 

ಸೀತಾ- ರಾಮ ಕಲ್ಯಾಣ ಇನ್ನೇನು ಆಗುತ್ತಿದೆ ಎಂದು ಪ್ರೇಕ್ಷಕರು ಖುಷಿ ಪಡುವ ಹೊತ್ತಿನಲ್ಲಿಯೇ ಏನೇನೋ ಸಮಸ್ಯೆಗಳು ನಡೆಯುತ್ತಲೇ ಇವೆ. ಅತ್ತ ರಾಮ್​ನ ಚಿಕ್ಕಮ್ಮ ತಾತನ ಎದುರು ಚಾಂದನಿ ಮತ್ತು ರಾಮ್​ನ ಮದುವೆಯ ಬಗ್ಗೆ ಮಾತನಾಡಿದ್ದಾಳೆ. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪ ಹುಡುಕುವುದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ತಾತನೂ ಅದಕ್ಕೆ ಸಮ್ಮತಿ ಸೂಚಿಸಿದಂತೆ ತೋರುತ್ತಿದೆ. ಚಿಕ್ಕಮ್ಮಗೆ ಸೀತಾ ಮತ್ತು ರಾಮ್​ ಪ್ರೀತಿ ಮಾಡುತ್ತಿರುವ ವಿಷಯ ತಿಳಿದಿದ್ದರೂ, ಅದನ್ನು ತಪ್ಪಿಸುವುದಕ್ಕಾಗಿ ಕುತಂತ್ರ ರೂಪಿಸುತ್ತಿದ್ದಾಳೆ. ಆದರೆ ಸೀತಾ-ರಾಮರ ಲವ್​ ಸ್ಟೋರಿ ಏನೋ ಶುರುವಾಗಿಬಿಟ್ಟಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್​ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್​ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್​ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ.  

ಇದರ ನಡುವೆಯೇ ಸಿಹಿಗೂ ತಮ್ಮ ಪ್ರೀತಿ, ಮದುವೆಯ ವಿಷಯ ತಿಳಿಸಿಯಾಗಿದೆ. ಈಗೇನಿದ್ದರೂ ರಾಮ್​ ತನ್ನ ಮನೆಯವರಿಗೆ ವಿಷಯ ತಿಳಿಸಬೇಕಿದೆ. ಅಷ್ಟಕ್ಕೂ ತಾತನಿಗೆ ಸೀತಾ ಒಂದು ಮಗುವಿನ ತಾಯಿ ಎನ್ನುವ ವಿಷಯ ಗೊತ್ತಿಲ್ಲ. ಅದೇ ಯೋಚನೆ ಸೀತಾಗೆ ಕೂಡ. ಮದುವೆಯ ವಿಷಯ ಎತ್ತುತ್ತಿದ್ದಂತೆಯೇ,  ಪ್ರೀತಿಯ ನಡುವೆಯೇ ಸೀತಾಗೆ ಹಿಂದಿನ ಕಥೆಯ ಬಗ್ಗೆ ಟೆನ್ಷನ್​ ಶುರುವಾಗಿದೆ. ನಾನು ಇದನ್ನು ಮುಚ್ಚಿಡಬಾರದು ಎಂದುಕೊಂಡಿದ್ದಾಳೆ. ಸಂಪೂರ್ಣ ಕಥೆ ಕೇಳಿದ ಮೇಲೆ ರಾಮ್​ ನನ್ನನ್ನು ಒಪ್ಪಿಕೊಳ್ತಾನಾ ಎನ್ನುವುದೂ ಆಕೆಗೆ ಸಂದೇಹ ಶುರುವಾಗಿದೆ. ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು? ಅವಳದ್ದು ನಿಜವಾಗಿಯೂ ಮದ್ವೆಯಾಗಿದ್ಯಾ? ಗಂಡ ಬಿಟ್ಟಿದ್ದಾಳಾ ಅಥ್ವಾ ಗಂಡನೇ ಇಲ್ವಾ? ಸಿಹಿ ಸೀತಾಳ ಸ್ವಂತ ಮಗಳು ಹೌದಾ? ಎಷ್ಟೊಂದು ಪ್ರಶ್ನೆಗಳು ವೀಕ್ಷರನ್ನು ಕಾಡುತ್ತಿವೆ. ಇದರ ಮಧ್ಯೆಯೇ, ಕೆಲ ಎಪಿಸೋಡ್​ ಹಿಂದೆ ಬೈಕ್​ನಲ್ಲಿ ಬಂದಾತನೊಬ್ಬ ಸಿಹಿಯನ್ನು ಕಿಡ್ನಾಪ್​ ಮಾಡಿದ್ದ. ಸೀತಾಳ ಮೇಲೆ ದಾಳಿ ಮಾಡಲು ನೋಡಿದ್ದ. ರಾಮ್​ನನ್ನು ಇರಿದಿದ್ದ. ಹಾಗಿದ್ದರೆ ಅವನಿಗೂ ಸೀತಾಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಸೀತಾರಾಮ ಸೀರಿಯಲ್​ ಫ್ಯಾನ್​ಗಳನ್ನು ಕಾಡುತ್ತಿದೆ.

ಠುಮಕ... ಠುಮಕ... ಹಾಡಿಗೆ ಸುಧಾರಾಣಿ ಭರ್ಜರಿ ಸ್ಟೆಪ್​: ನಿಮ್ಮ ಲೆವೆಲ್ಲೇ ಬೇರೆ ಬಿಡಿ ಮೇಡಂ ಎಂದ ಫ್ಯಾನ್ಸ್​

ಇದೀಗ, ಸಿಹಿ ಕೂಡ ನನ್ನ ಮಗಳೇ ಎಂದು ರಾಮ್​ ಹೇಳಿದ್ದಾನೆ. ಆದರೆ ಸಿಹಿಯ ಹುಟ್ಟಿನ ರಹಸ್ಯದ ಬಗ್ಗೆ ನಿಮಗೆ ಹೇಳಲೇಬೇಕು ಎಂದು ಸೀತಾ ಹಠ ಮಾಡಿದ್ದಾಳೆ. ರೆಸ್ಟೋರೆಂಟ್​ ಒಂದರಲ್ಲಿ ಹಿಂದಿನ ಘಟನೆಗಳ ಕುರಿತು ಸೀತಾ ಹೇಳುತ್ತಿರುವಾಗಲೇ, ಇವರಿಬ್ಬರೂ ಹೋಗಿದ್ದನ್ನು ನೋಡಿ ಹಿಂಬಾಲಿಸಿಕೊಂಡು ಬಂದಿರುವ ಚಾಂದನಿ ಅಷ್ಟರಲ್ಲಿಯೇ ಎಂಟ್ರಿ ಕೊಟ್ಟಿದ್ದಾಳೆ. ಸಿಹಿಯ ಹುಟ್ಟಿನ ಗುಟ್ಟು ಚಾಂದನಿಗೆ ಗೊತ್ತಾಗತ್ತಾ ಎನ್ನುವ ಮೂಲಕ ಜೀ ಕನ್ನಡ ವಾಹಿನಿ ಪ್ರೊಮೋ ರಿಲೀಸ್​ ಮಾಡಿದೆ. ಹಾಗಿದ್ದರೆ ಸಿಹಿ ಯಾರು? ಅವಳ ಹುಟ್ಟಿನ ಗುಟ್ಟೇನು? ಇದು ಚಾಂದನಿಗೆ ತಿಳಿದರೆ ಮುಂದೇನು ಎನ್ನುವ ಟೆನ್ಷನ್​ ವೀಕ್ಷಕರಿಗೆ ಶುರುವಾಗಿದೆ. 

ಅಂದಹಾಗೆ ಇಲ್ಲಿಯವರೆಗೆ ಸೀತಾ-ರಾಮ ಲವ್​ ಸ್ಟೋರಿ ಕುರಿತು ಹೇಳುವುದಾದರೆ,  ರಾಮ ಸೀತಾಳನ್ನು ಲವ್ ಮಾಡುತ್ತಿದ್ದರೂ, ಇದನ್ನು  ಮನೆಯಲ್ಲಿ ಇದನ್ನು ಹೇಳುವ ಧೈರ್ಯವಿರಲಿಲ್ಲ ರಾಮ್​ಗೆ. ಅದೇ ಇನ್ನೊಂದೆಡೆ, ಹಿಂದಿನ ಪ್ರೀತಿ ಪ್ರೇಮ ಎಲ್ಲವನ್ನೂ ಮರೆತು ನಾನು ಹೇಳುವ ಹುಡುಗಿಯ ಜೊತೆ ಮದ್ವೆಯಾಗು ಎಂದು ತಾತ ಹೇಳಿದ್ದರು. ಇದನ್ನು ಕೇಳಿ ರಾಮ್​ಗೆ ಆಕಾಶವೇ ಬಿದ್ದ ಅನುಭವವಾಗಿತ್ತು. ಹಿಂದಿನ ಪ್ರೇಯಸಿಯನ್ನು ಮರೆತು ಸೀತಾಳ ಜೊತೆ ಬದುಕು ಕಟ್ಟಿಕೊಳ್ಳಲು ಕಾಯುತ್ತಿದ್ದ ರಾಮ್​ಗೆ ತಾತನ ಮುಂದೆ ಏನು ಹೇಳಬೇಕೋ ತಿಳಿದಿರಲಿಲ್ಲ.  ಏಕೆಂದರೆ ಸೀತಾ ಇದುವರೆಗೆ ತನ್ನನ್ನು ಒಪ್ಪಿಕೊಂಡಿರುವ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಮನಸ್ಸಿನಲ್ಲಿಯೇ ರಾಮ್​ನನ್ನು ಪ್ರೀತಿಸುತ್ತಿದ್ದರೂ ಸೀತಾ, ಇದನ್ನು ರಾಮ್​ಗೆ ಹೇಳಿರಲಿಲ್ಲ. ಹೀಗಿರುವಾಗ ರಾಮ್​ ಬೆಟ್ಟದ ಮೇಲೆ ಹೋಗಿದ್ದ. ಇದು ಸೀತಾಳಿಗೆ ತಿಳಿದು ಆತ ಸಾಯಲು ಹೊರಟ ಎಂದುಕೊಂಡು ಓಡಿಹೋಗಿ ರಾಮ್​ನನ್ನು ತಬ್ಬಿಕೊಂಡಿದ್ದಳು. ರಾಮ್​ ಕೂಡ ಬಂದು ನೀವು ನನ್ನನ್ನು ಪ್ರೀತಿಸ್ತಿದ್ದೀರಾ ಎಂದು ಕೇಳಿದಾಗ ಕೊನೆಗೂ ಸೀತಾ ರಾಮ್​ನನ್ನು ತಬ್ಬಿಕೊಂಡು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ.  

ಕೊನೆಗೂ ರಣಚಂಡಿ ಅವತಾರ ಎತ್ತಿದ ಭಾಗ್ಯ: ಕನ್ನಿಕಾ ಮಿಸ್​ಗೆ ಶಿಕ್ಷೆ ಆಗತ್ತಾ, ಅಥ್ವಾ..?

click me!