ಬಿಗ್​ಬಾಸ್​ನಲ್ಲಿ ಮುದ್ದೆಗಾಗಿ ಗುದ್ದಾಟ! ಗ್ಯಾಸ್​ ಖಾಲಿಯಾಗಿ ಪರದಾಟ: ಪ್ರತಾಪ್​ ಮೇಲೆ ಮುಗಿಬಿದ್ದ ವಿನಯ್​

Published : Dec 15, 2023, 12:46 PM IST
ಬಿಗ್​ಬಾಸ್​ನಲ್ಲಿ ಮುದ್ದೆಗಾಗಿ ಗುದ್ದಾಟ! ಗ್ಯಾಸ್​ ಖಾಲಿಯಾಗಿ ಪರದಾಟ: ಪ್ರತಾಪ್​ ಮೇಲೆ ಮುಗಿಬಿದ್ದ ವಿನಯ್​

ಸಾರಾಂಶ

ಬಿಗ್​ಬಾಸ್​ ಮನೆಯಲ್ಲಿ ಮುದ್ದೆ ಮಾಡುವ ಸಮಯದಲ್ಲಿಯೇ ಗ್ಯಾಸ್​ ಖಾಲಿ ಆಗಿದೆ. ಇದಕ್ಕಾಗಿ ಹೊಟ್ಟೆ ಹಸಿವಿನಿಂದ ವಿನಯ್​ ಡ್ರೋನ್​ ಪ್ರತಾಪ್​ ಮೇಲೆ ಮುಗಿ ಬಿದ್ದಿದ್ದಾರೆ. ಆಗಿದ್ದೇನು?   

ಬಿಗ್​ಬಾಸ್​ ಮನೆಯಲ್ಲಿ ಗ್ಯಾಸ್​ ಖಾಲಿಯಾಗಿದ್ದು, ಸ್ಪರ್ಧಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಕ್ಷಸರಾಗಿರುವ ಕೆಲ ಸ್ಪರ್ಧಿಗಳು ಡ್ರೋನ್​ ಪ್ರತಾಪ್​ ಮೇಲೆ ಮುಗಿ ಬೀಳುತ್ತಿದ್ದಾರೆ. ರಾಗಿಮುದ್ದೆ ಸಿಗದೇ ಉಪವಾಸದಿಂದ ಸ್ಪರ್ಧಿಗಳು ಪರದಾಡುತ್ತಾ ಕಿರುಚಾಡುತ್ತಿರುವ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.   ಗ್ಯಾಸ್​ ಖಾಲಿಯಾದ್ರೆ ಡ್ರೋನ್​ ಪ್ರತಾಪ್​ ಮೇಲೆ ಏಕಿಷ್ಟು ಕೋಪ ಎನ್ನುವುದಕ್ಕೂ ಕಾರಣವಿದೆ. ಅದೇನೆಂದರೆ, ಡ್ರೋನ್​ ಪ್ರತಾಪ್​ ಇದ್ದಬಿದ್ದ ಗ್ಯಾಸ್​ ಖಾಲಿ ಮಾಡಿದ್ದಾರೆ ಎನ್ನುವ ಕಾರಣಕ್ಕೆ!

ಹೌದು. ಅಷ್ಟಕ್ಕೂ ಆಗಿದ್ದೇನೆಂದರೆ, ಪ್ರತಾಪ್​ ಮತ್ತು ಕಾರ್ತಿಕ್ ಸೇರಿ ರಾಗಿ ಮುದ್ದೆ ಮಾಡಿದ್ದಾರೆ. ಅದನ್ನು ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಸವಿದಿದ್ದಾರೆ. ಉಳಿದವರು ಮುದ್ದೆಗಾಗಿ ಕಾಯುತ್ತಿದ್ದಾರೆ. ಆದರೆ ಅಷ್ಟರಲ್ಲಿಯೇ ಗ್ಯಾಸ್​ ಖಾಲಿಯಾಗಿಬಿಟ್ಟಿದೆ. ಡ್ರೋನ್​ ಪ್ರತಾಪ್​ಗೆ ಮುದ್ದೆ ಮಾಡಿಕೊಡಲು ಸ್ಪರ್ಧಿಗಳೇ ಕೇಳಿಕೊಂಡಿದ್ದರು.  ಎಲ್ಲರಿಗೂ ಮುದ್ದೆ ತಿನ್ನಬೇಕು ಎನಿಸಿದ್ದರಿಂದ ಮುದ್ದೆ ಬೇಕು ಎಂದಿದ್ದರು. ಅವರ ಆಸೆ ಈಡೇರಿಸಲು ಹೋದ  ಡ್ರೋನ್ ಪ್ರತಾಪ್  ಅವರು  ಮುದ್ದೆ  ಮಾಡಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿಯೇ ಗ್ಯಾಸ್​ ಖಾಲಿಯಾಗಿಬಿಟ್ಟಿದೆ. ವಿನಯ್​ ಸೇರಿದಂತೆ ಇತರ ಸ್ಪರ್ಧಿಗಳ ಹೊಟ್ಟೆ ಚುರುಕ್​ ಎನ್ನುತ್ತಿದೆ. ಆದರೆ ಗ್ಯಾಸ್​ ಇಲ್ಲದೇ ಎಲ್ಲರೂ ಕಂಗಾಲಾಗಿಬಿಟ್ಟಿದ್ದಾರೆ. ಡ್ರೋನ್​ ಪ್ರತಾಪ್​ ಮುದ್ದೆ ಮಾಡುವಾಗ  ಗ್ಯಾಸ್ ಅತಿಯಾಗಿ ಬಳಸಿದ್ದಾರೆ ಎಂದು ವಿನಯ್​ ಗರಂ ಆಗಿದ್ದಾರೆ.

ಹೆಣ್ಣೆಂದರೆ 'ಅನಿಮಲ್'​ ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು

ಬಿಗ್​ಬಾಸ್​ ಸ್ಪರ್ಧಿಗಳಿಗೆ ನೀಡುವ ಗ್ಯಾಸ್​ ಲಿಮಿಟ್​ ಮುಗಿದ ಹಿನ್ನೆಲೆಯಲ್ಲಿ  ಸಂಜೆ ಅಡುಗೆ ಮಾಡೋಕೆ ಬಿಗ್ ಬಾಸ್ ಗ್ಯಾಸ್ ಕೊಟ್ಟಿಲ್ಲ. ಇದರಿಂದ ಮನೆಯವರು ಡ್ರೋನ್​ ಪ್ರತಾಪ್​ ಮೇಲೆ ಸಿಟ್ಟಾಗಿದ್ದಾರೆ.  ‘ಎಲ್ಲರೂ ರಾಕ್ಷಸರಾಗುತ್ತಿದ್ದಾರೆ. ಗ್ಯಾಸ್ ಕೊಡಿ’ ಎಂದು ಸಂತೋಷ್, ಪ್ರತಾಪ್ ಬಿಗ್​ಬಾಸ್​ಗೆ ಮನವಿ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿನಯ್​ಗೆ ಕೋಪ ನೆತ್ತಿಗೇರಿದ್ದು,  ಎಲ್ಲರ ವಿರುದ್ಧ ಹರಿಹಾಯ್ದಿದ್ದಾರೆ. ರಾತ್ರಿ ನಂಗೆ ಊಟ ಬೇಕೇ ಬೇಕು ಇಲ್ಲಾ ಅಂದ್ರೆ ನಾನು ಸುಮ್ನಿರೋದಿಲ್ಲ ಅಂತ ವಿನಯ್​ ರೇಗಾಡಿದ್ದಾರೆ.

 ಇವರಿಗೆ ಊಟವನ್ನು ಖುದ್ದು ಕಿಚ್ಚ ಸುದೀಪ್​ ಅವರೇ ತಂದುಕೊಡುತ್ತಾರೆ ಎಂದೂ ಹೇಳಲಾಗ್ತಿದೆ. ಸುದೀಪ್ ಮಾಡಿರೋ ಅಡುಗೆ ಬರುವುದರಲ್ಲಿದೆ. ಹೀಗಾಗಿ, ಗ್ಯಾಸ್ ಹಚ್ಚೋಕೆ ಬಿಗ್ ಬಾಸ್ ಅವಕಾಶ ನೀಡಿಲ್ಲ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಗ್​ಬಾಸ್​ನಲ್ಲಿ ಏನಾಗುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ ಫ್ಯಾನ್ಸ್​. 

ಕೋಳಿ ಕೂಗಿದ್ರೆ ಬೆಳಗಾಗ್ತದೆಂಬ ಭ್ರಮೆ ಗಂಡಸ್ರಿಗೆ ಬೇಡ: ಹೆಣ್ಣಿನ ಶಕ್ತಿಯೇನು? ಭಾಗ್ಯಲಕ್ಷ್ಮಿ ಕುಸುಮಾ ಮಾತು ಕೇಳಿ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್‌ ಎಂಟ್ರಿಗಾಗಿ ನೆಲದ ಮೇಲೆ ಬಿದ್ದು ಹೊರಳಾಡಿದ ಗಂಗಾ, ನಿಮಗೆ ಅರ್ಹತೆಯೇ ಇಲ್ಲ ಎಂದ ಸಂಗೀತಾ ಶೃಂಗೇರಿ!
ಆಪ್ತ ಸ್ನೇಹಿತರ ಜೊತೆ ವಿಶೇಷವಾಗಿ ʻಬ್ರೈಡ್‌ ಟು ಬಿʼ ಪಾರ್ಟಿ ಆಚರಿಸಿಕೊಂಡ ಚಿಕ್ಕಣ್ಣ ಭಾವಿ ಪತ್ನಿ ಪಾವನಾ!