ಕೈಮೇಲೆ ಹಾಕಿರೋ ಟ್ಯಾಟೂ ರಹಸ್ಯ ಬಿಚ್ಚಿಡುತ್ತಲೇ ಮಕ್ಕಳ ಬಗ್ಗೆಯೂ ರಿವೀಲ್​ ಮಾಡಿದ ಬಿಗ್​ಬಾಸ್​ ನಮ್ರತಾ ಗೌಡ

Published : Mar 18, 2025, 07:02 PM ISTUpdated : Mar 18, 2025, 07:16 PM IST
ಕೈಮೇಲೆ ಹಾಕಿರೋ ಟ್ಯಾಟೂ ರಹಸ್ಯ ಬಿಚ್ಚಿಡುತ್ತಲೇ ಮಕ್ಕಳ ಬಗ್ಗೆಯೂ ರಿವೀಲ್​ ಮಾಡಿದ ಬಿಗ್​ಬಾಸ್​ ನಮ್ರತಾ ಗೌಡ

ಸಾರಾಂಶ

ನಟಿ ನಮ್ರತಾ ಗೌಡ ಕಿರುತೆರೆ ಮತ್ತು ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿರುವ ನಮ್ರತಾ, 2022ರಲ್ಲಿ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಇದು ಪ್ರಚಾರಕ್ಕಾಗಿ ಅಲ್ಲ, ಅಪ್ಪು ಮೇಲಿನ ಅಭಿಮಾನದಿಂದ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಲು ಮತ್ತು ಸಮಾಜ ಸೇವೆ ಮಾಡಲು ಪ್ರೇರಣೆ ಎಂದು ನಮ್ರತಾ ಹೇಳಿದ್ದಾರೆ.

ನಟಿ ನಮ್ರತಾ ಗೌಡ ಹೆಸರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಅದರಲ್ಲಿಯೂ ಬಿಗ್​ಬಾಸ್​ ವೀಕ್ಷಕರಿಗಂತೂ ತುಂಬಾ ಹತ್ತಿರವಾಗಿದ್ದಾರೆ ನಟಿ. ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು,  ಸೀರಿಯಲ್​ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್​ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್​ ಸಿಕ್ಕಿದ್ದು,  ಬಿಗ್‌ ಬಾಸ್‌ ಕನ್ನಡ ಸೀಸನ್‌ 10. ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿ ಕೂಡ. ಇದೇ ಕಾರಣಕ್ಕೆ ನಟಿ ಮೂರು ವರ್ಷಗಳ ಹಿಂದೆ,  ಅಂದರೆ 2022ರಲ್ಲಿ ಅಪ್ಪು ಅವರ ಜನ್ಮದಿನದ ಸಂದರ್ಭದಲ್ಲಿ  ನಟನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.  ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು. 

ಇದೀಗ ಆ ಟ್ಯಾಟೂ ಕುರಿತು ಕೇಳಿದ ಪ್ರಶ್ನೆಗೆ ಪುನಃ ಉತ್ತರಿಸಿದ್ದಾರೆ ನಮ್ರತಾ. ನಿನ್ನೆ ಅಪ್ಪು ಅವರ 50ನೇ ಜನ್ಮದಿನದಂದು ಕಾರ್ಯಕ್ರಮವೊಂದರಲ್ಲಿ ಆಗಮಿಸಿದ್ದ ನಮ್ರತಾ ಗೌಡ ಅವರು ಟ್ಯಾಟೂ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಇದು ಪುನೀತ್​ ರಾಜ್​ಕುಮಾರ್​ ಅವರ ಟ್ಯಾಟೂ. ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಇದನ್ನು ಪಬ್ಲಿಸಿಟಿಗಾಗಿ ಹಾಕಿಸಿಕೊಂಡಿದ್ದಲ್ಲ. ನಾನು ಅಪ್ಪು ಅವರು ತುಂಬಾ ಫ್ಯಾನ್​. ಅವರ ಹಾದಿಯಲ್ಲಿಯೇ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಅವರ ನೆನಪಿಗಾಗಿ ಇದನ್ನು ಹಾಕಿಸಿಕೊಂಡಿದ್ದೇನೆ. ನನ್ನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರಿಗೂ ಪುನೀತ್​ ಅವರ ಬಗ್ಗೆ ತಿಳಿಯಬೇಕು, ಅವರು ನಡೆದಿರುವ ಹಾದಿಯಲ್ಲಿಯೇ ಎಲ್ಲರೂ ನಡೆಯಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿಯೇ ಈ ಟ್ಯಾಟೂ ಎಂದಿದ್ದಾರೆ. ಇದನ್ನು ಸಿನೆ ಸ್ಟೋರ್​ ಎನ್ನುವ ಯೂಟ್ಯೂಬ್​ ಚಾನೆಲ್​ ಶೇರ್​ ಮಾಡಿಕೊಂಡಿದೆ.

ಧರೆಗಿಳಿದ ಮಾಡರ್ನ್​ ಶಿವ-ಪಾರ್ವತಿಯರು: ನಿಮಗ್ಯಾವುದೂ ಕನ್ನಡ ಹಾಡು ಸಿಗಲಿಲ್ವಾ ಎಂದು ಕೇಳಿದ ನೆಟ್ಟಿಗರು

ಪುನೀತ್​ ರಾಜ್​ಕುಮಾರ್​ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ಯಾವತ್ತೂ ಹೇಳಿಕೊಳ್ಳುತ್ತಿರಲಿಲ್ಲ. ಆದ್ದರಿಂದ ನಾನು ಕೂಡ ಹಲವು ಸಮಾಜ ಸೇವೆ ಮಾಡುತ್ತಿದ್ದರೂ ಅದರ ವಿಡಿಯೋ ಶೇರ್​ ಮಾಡುತ್ತಿಲ್ಲ. ಇದಾಗಲೇ ಕೆಲವರು ಕಮೆಂಟ್​ ಮಾಡಿದ್ದರು, ಕೆಲವರು ಸಜೆಷನ್​ ಕೊಟ್ಟಿದ್ದರು. ಆದ್ದರಿಂದ ಮಾಡಿರುವ ಸೇವೆ ಬಗ್ಗೆ ಹೇಳುವುದು ಯಾಕೆ ಎಂದು ವಿಡಿಯೋ ಶೇರ್​ ಮಾಡುತ್ತಿಲ್ಲ ಎಂದೂ ಇದೇ ವೇಳೆ ನಮ್ರತಾ ಗೌಡ ಹೇಳಿದ್ದಾರೆ.

ಇನ್ನು ನಟಿಯ ಬದುಕಿನ ಪಯಣದ ಕುರಿತು ಹೇಳುವುದಾದರೆ, 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನಮ್ರತಾ ಅದಾದ ಬಳಿಕ  ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು. ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದರು. ಈಗ ಎಲ್ಲಕ್ಕಿಂತಲೂ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಬಿಗ್​ಬಾಸ್​ 10. ಇಲ್ಲಿ ಇವರು ಮತ್ತು ಸ್ನೇಹಿತ್​ ಸ್ನೇಹ ಸಾಕಷ್ಟು ಸದ್ದು ಕೂಡ ಮಾಡಿತ್ತು.   

ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್​ಬಾಸ್​ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!