
ಬೆಂಗಳೂರು(ಮಾ. 09) ಶುರುವಾಗಿ ಒಂದು ವಾರ ಥಂಡಾಗಿದ್ದ ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಿಗ್ ಬಾಸ್ ನೀಡಿದ್ದ ಟಾಸ್ಕ್ ಇದಕ್ಕೆಲ್ಲ ಕಾರಣ. ಕೊರೋನಾ ವೈರಸ್ ಹಾವಳಿಯನ್ನೇ ಬಿಗ್ ಬಾಸ್ ಟಾಸ್ಕ್ ಆಗಿಸಿಕೊಂಡಿದ್ದರು.
ಮನೆಯನ್ನು ಎರಡು ತಂಡ ಮಾಡಿದ್ದರು. ಮಾನವರ ತಂಡಕ್ಕೆ ಲ್ಯಾಗ್ ಮಂಜ ನಾಯಕನಾದರೆ, ವೈರಸ್ ಗಳ ತಂಡಕ್ಕೆ ಪ್ರಶಾಂತ ಸಂಬರಗಿ ನಾಯಕ. ಈ ದಿನದ ಆಟವನ್ನು ವೈರಸ್ ತಂಡ ಗೆದ್ದುಕೊಂಡಿತು. ಮಾನವರ ತಂಡದ ಗೀತಾ ಭಟ್ ವೈರಸ್ ದಾಳಿಗೆ ತುತ್ತಾದರು.
ಗೇಮ್ ಯಾವ ಹಂತಕ್ಕೆ ಬಿಸಿ ಪಡೆದುಕೊಂಡಿತ್ತು ಅಂದರೆ ಬಿಗ್ ಬಾಸ್ ಮನೆಯಲ್ಲಿ ಬೀಪ್ ಮೇಲೆ ಬೀಪ್ ಸೌಂಡ್ ಗಳು ಬಂದವು. ಗೇಮ್ ರೂಲ್ಸ್ ನಲ್ಲಿ ಇದ್ದ ಕೆಲವು ಗೊಂದಲಗಳು ಮನೆಯವರನ್ನು ದಂಗು ಬಡಿಸಿದ್ದವು.
ವೈಷ್ಣವಿ ಸೈಲಂಟ್ ಆಗಿರೋದಕ್ಕೆ ಕಾರಣ ಏನು?
ಮೊದಲು ವೈರಸ್ ದಾಳಿಗೆ ತುತ್ತಾದ ಚಂದ್ರಕಲಾ ಅವರ ಮೇಲೆ ವೈರಸ್ ತಂಡದವರು ನೀರು ಹಾಕುವುದು, ಬಟ್ಟೆ ತಂದುಹಾಕುವುದು ಸೇರಿದಂತೆ ಅನೇಕ ಕಾಟ ಕೊಟ್ಟರು. ಹಿಡಿದ ಹಗ್ಗ ಬಿಡದೆ ಅರ್ಧ ಗಂಟೆ ತಡೆದುಕೊಂಡರೆ ಕ್ವಾರಂಟೈನ್ ಗೆದ್ದ ಹಾಗೆ ಎಂದು ಬಿಗ್ ಬಾಸ್ ಹೇಳಿದ್ದರು. ಅಂತೆಯೇ ಚಂದ್ರಕಲಾ ಗೆದ್ದು ಬಂದರು.
ಗೇಮ್ ನಡೆಯುತ್ತಿದ್ದರೂ ನಿಯಮಗಳನ್ನು ಮರೆತ ಕಾರಣ ಆಟದಿಂದ ಮಾನವ ತಂಡದ ಮೂವರನ್ನು ಬಿಗ್ ಬಾಸ್ ಹೊರಗೆ ಇಟ್ಟರು. ನಾಯಕ ಮಂಜ, ಶುಭಾ ಮತ್ತು ಚಂದ್ರಕಲಾ ಅವರನ್ನು ಹೊರಗೆ ಇಡಲಾಯಿತು.
ಸ್ಮೋಕಿಂಗ್ ಝೋನ್ ಗೆ ಬೆಂಕಿ ಪೆಟ್ಟಿಗೆ ಇಲ್ಲದ ಕಾರಣ ಅಡುಗೆ ಮನೆಯಿಂದಲೇ ಅರವಿಂದ್ ಬೆಂಕಿ ಹಚ್ಚಿಕೊಂಡು ಹೋದದ್ದು ಅರವಿಂದ್ ಮತ್ತು ನಿರ್ಮಲಾ ಮಧ್ಯೆ ಗಲಾಟೆಗೂ ಕಾರಣವಾಯಿತು. ನಂತರ ಇಬ್ಬರು ಒಂದಾದರು.
ವೈರಸ್ ಆಟದ ವೇಳೆ ಒಂದು ಹಂತದಲ್ಲಿ ಬ್ರೋ ಗೌಡ ಅವರ ಮೇಲೆ ಪ್ರಶಾಂತ್ ಸಂಬರಗಿ ಬಿದ್ದಿದ್ದು ಗಲಾಟೆಗೆ ಕಾರಣವಾಯಿತು. ಕೆಂಡಾಮಂಡಲರಾದ ಬ್ರೋ ಗೌಡ ಸಂಬರಗಿ ಮೇಲೆ ಎರಗಿ ಬಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.