ನಟ ಅಹಿಂಸಾ ಚೇತನ್; ಕೇಂದ್ರದ ವಕ್ಫ್ ಮಸೂದೆ ಅಂಗೀಕಾರಕ್ಕೆ ಸಂತಸ, ರಾಜ್ಯದ ಹಾಲಿನ ದರ ಏರಿಕೆಗೆ ಟೀಕೆ

Published : Apr 03, 2025, 12:36 PM ISTUpdated : Apr 03, 2025, 12:48 PM IST
ನಟ ಅಹಿಂಸಾ ಚೇತನ್; ಕೇಂದ್ರದ ವಕ್ಫ್ ಮಸೂದೆ ಅಂಗೀಕಾರಕ್ಕೆ ಸಂತಸ, ರಾಜ್ಯದ ಹಾಲಿನ ದರ ಏರಿಕೆಗೆ ಟೀಕೆ

ಸಾರಾಂಶ

ನಟ ಅಹಿಂಸಾ ಚೇತನ್, ಲೋಕಸಭೆಯಲ್ಲಿ ವಕ್ಫ್ ಮಸೂದೆ ತಿದ್ದುಪಡಿ ಅಂಗೀಕಾರಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ 'ಚೆಕ್ ಮತ್ತು ಬ್ಯಾಲೆನ್ಸ್'ಗೆ ಅಗತ್ಯವೆಂದಿದ್ದಾರೆ. ಅಲ್ಲದೆ, ಕರ್ನಾಟಕ ಸರ್ಕಾರ ಹಾಲಿನ ದರ ಏರಿಸಿದ್ದನ್ನು ಟೀಕಿಸಿ, ಇದು ಶ್ರಮಜೀವಿಗಳಿಂದ ತೆಗೆದುಕೊಂಡು ಅವರಿಗೇ ನೀಡಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಶ್ರೀಮಂತರಿಂದ ಪಡೆದು ಶ್ರಮಜೀವಿಗಳ ಜೀವನ ಉತ್ತಮಗೊಳಿಸಬೇಕೆಂದು ಅವರು ಹೇಳಿದ್ದಾರೆ.

ಬೆಂಗಳೂರು (ಏ.03): ಕೇಂದ್ರ ಸರ್ಕಾರದದಿಂದ ಲೋಕಸಭೆಯಲ್ಲಿ ವಕ್ಫ್ ಮಸೂದೆ ತಿದ್ದುಪಡಿಯು ಅಂಗೀಕಾರ ಆಗಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಹೇಳಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, 'ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರವಾಗುವುದನ್ನು ನೋಡಲು ಸಂತೋಷವಾಗಿದೆ. ಯಾವುದೇ ಸದೃಢ ಪ್ರಜಾಪ್ರಭುತ್ವದಲ್ಲಿ 'ಚೆಕ್ ಮತ್ತು ಬ್ಯಾಲೆನ್ಸ್' ಅತ್ಯಗತ್ಯ. ವಕ್ಫ್ ಮಸೂದೆಯು ನ್ಯಾಯಸಮ್ಮತವಲ್ಲದಿದ್ದಲ್ಲಿ ಬಹುಶಃ ಅಂಗೀಕಾರವಾಗುತ್ತಿರಲಿಲ್ಲ. ಮಸೂದೆಗೆ 288 ಮತಗಳು ಕೋಮುವಾದಿ ಮತ್ತು ನಿಜವಾದ ಸೆಕ್ಯುಲರ್ ಶಕ್ತಿಗಳ ಸಂಯೋಜನೆಯಾಗಿದೆ -- ವಿರುದ್ಧ 232 ಮತಗಳು ಹುಸಿ-ಸೆಕ್ಯುಲರ್ ಲಾಬಿಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಅವರು, 'ಕರ್ನಾಟಕ ಸರ್ಕಾರ ಹಾಲಿನ ದರವನ್ನು ಹೆಚ್ಚಿಸಿ, ಬೆಲೆ ಏರಿಕೆ 'ರೈತರಿಗೆ ಹೋಗುತ್ತದೆ' ಎಂದು ಹೇಳಿಕೊಂಡಿತು. ಇದು ಕೆಲವು ತಿಂಗಳ ಹಿಂದೆ ಬಸ್ ದರವನ್ನು ಹೆಚ್ಚಿಸಿ 'ಸಾರಿಗೆ ಕಾರ್ಮಿಕರಿಗೆ ಹೋಗುತ್ತದೆ' ಎಂದು ಹೇಳಿಕೊಂಡಂತೆಯೇ ಇದೆ. ಶ್ರಮಜೀವಿ ವರ್ಗಕ್ಕೆ ಹಿಂತಿರುಗಿಸಲು ಸರ್ಕಾರವು ಶ್ರಮಜೀವಿ ವರ್ಗಗಳಿಂದ ಹೇಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಿ. ಕೆರೆಯ ನೀರನ್ನು ಕೆರೆಗೆ ಚಲ್ಲುತ್ತಾ ಹೋಗತ್ತದೆ. ಹೀಗಾಗಿ, ಅನ್ಯಾಯ/ಅಸಮಾನ ವ್ಯವಸ್ಥೆ ಮುಂದುವರಿಯುತ್ತದೆ. ಸರ್ಕಾರವು ಶ್ರೀಮಂತರು ಮತ್ತು ಉಳ್ಳವರಿಂದ ತೆಗೆದುಕೊಳ್ಳುವ ಮೂಲಕ ಶ್ರಮಜೀವಿ ವರ್ಗಗಳ ಜೀವನವನ್ನು ಉತ್ತಮಗೊಳಿಸಬೇಕು' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. 

ಇದನ್ನೂ ಓದಿ: Waqf Amendment Bill passed: ಮೋದಿ ಸರ್ಕಾರದ ಬ್ರಹ್ಮಾಸ್ತ್ರ, ಒಂದೇ ಏಟಿಗೆ ಹಲವು ಗುರಿಗಳು ಫಿನಿಶ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್