ಎಸ್ಸೆಸ್ಸೆಲ್ಸಿ ಹುಡುಗನ ಜಸ್ಟ್ ಪಾಸ್ ಬೇಡಿಕೆ! ದೇವ್ರೇ ನನ್ನ 35 ಪರ್ಸೆಂಟೇಜ್‌ನಲ್ಲಿ ಪಾಸ್ ಮಾಡಪ್ಪಾ ಸಾಕು!

Published : Mar 26, 2025, 06:19 PM ISTUpdated : Mar 26, 2025, 06:49 PM IST
ಎಸ್ಸೆಸ್ಸೆಲ್ಸಿ ಹುಡುಗನ ಜಸ್ಟ್ ಪಾಸ್ ಬೇಡಿಕೆ! ದೇವ್ರೇ ನನ್ನ 35 ಪರ್ಸೆಂಟೇಜ್‌ನಲ್ಲಿ ಪಾಸ್ ಮಾಡಪ್ಪಾ ಸಾಕು!

ಸಾರಾಂಶ

ಉಡುಪಿಯ ಕುಂದಾಪುರದ ದೇವಸ್ಥಾನದ ಹುಂಡಿಯಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಕೇವಲ ಪಾಸಾಗುವ ಅಂಕಗಳನ್ನು ಕೇಳಿ ಚೀಟಿ ಹಾಕಿದ್ದಾನೆ. ಆತನು ವಿಷಯವಾರು ನಿರೀಕ್ಷಿತ ಅಂಕಗಳನ್ನು ನಮೂದಿಸಿದ್ದಾನೆ. ಹೆಸರು, ತರಗತಿ ಉಲ್ಲೇಖಿಸದಿದ್ದರೂ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಬಾಲಕನಿರಬಹುದು ಎಂದು ಅಂದಾಜಿಸಲಾಗಿದೆ. ಈ ಚೀಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ.

ಉಡುಪಿ (ಮಾ.26): ಇಲ್ಲೊಬ್ಬ ವಿದ್ಯಾರ್ಥಿ ದೇವರೇ ನಾನು ಪರೀಕ್ಷೆಯಲ್ಲಿ ಜಸ್ಟ್ ಪಾಸಾದರೆ ಸಾಕು. ನಾನು ಹೇಳಿದ ಅಂಕಗಳು ಬಂದರೆ ಸಾಕಪ್ಪಾ ದೇವರೇ ಎಂದು ದೇವಸ್ಥಾನದ ಹುಂಡಿಗೆ ಚೀಟಿಯನ್ನು ಬರೆದು ಹಾಕಿರುವುದು ಪತ್ತೆಯಾಗಿದೆ. ಆದರೆ, ವಿದ್ಯಾರ್ಥಿ ತನ್ನ ಹೆಸರು, ಲಿಂಗ ಹಾಗೂ ಎಷ್ಟನೇ ತರಗತಿ ಎಂದು ಉಲ್ಲೇಖ ಮಾಡಿಲ್ಲ. ಆದರೆ, ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಕಾರಣ ಹಾಗೂ ಕೇವಲ ಜಸ್ಟ್ ಪಾಸ್ ಮಾಡುವಂತೆ ಕೇಳಿದ್ದರಿಂದ ಆತ ಬಾಲಕ ಇರಬೇಕು ಎಂದು ಹೇಳಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಹೊಳಮಗ್ಗಿ ಹೊರಬೊಬ್ವರ್ಯ ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ವಿಚಿತ್ರ ಬೇಡಿಕೆಯ ಮತ್ರವು ಲಭ್ಯವಾಗಿದೆ. ಇದರಲ್ಲಿ ವಿದ್ಯಾರ್ಥಿ ಕೇವಲ ಪಾಸಾಗುವಷ್ಟು ಮಾತ್ರ ಅಂಕ ಕೇಳಿ ಕಾಪಾಡು ದೇವರೇ ಎಂದು ಬರೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ತಮಾಷೆಯಾಗಿ ಇದನ್ನು ನೋಡುತ್ತಿದ್ದಾರೆ. ಇನ್ನು ಕೆಲವರು ಇವನ್ಯಾರೋ ಅಲ್ಪತೃಪ್ತ, ವರ ಕೊಡೋ ದೇವರ ಹತ್ತಿರ ಫಸ್ಟ್ ರ್ಯಾಂಕ್ ಕೇಳೋದು ಬಿಟ್ಟು ಜಸ್ಟ್ ಪಾಸ್ ಬೇಡಿಕೆ ಇಟ್ಟಿದ್ದಾನಲ್ಲ ಎಂದು ಕಾಲೆಳೆದಿದ್ದಾರೆ. 

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಕುರಿತ ಫೋಟೋವನ್ನು Sadashiva Shetty Kattbelthur ಅವರು ಎನ್ನುವವರು ಶೇರ್ ಮಾಡಿಕೊಂಡಿದ್ದು, Namma Kundapura ಹೆಸರಿನ ಫೇಸ್‌ಬುಕ್‌ ಪೇಜ್‌ಗೂ ಟ್ಯಾಗ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಯು ದೇವರೊಗೆ ಬೇಡಿಕೆ ಇಟ್ಟಿರುವ ಚೀಟಿಯ ಫೋಟೋ ಭಾರೀ ವೈರಲ್ ಆಗಿದೆ. ಸಾವಿರಾರು ಜನರು ವೀಕ್ಷಣೆ ಮಾಡಿದ್ದು, 520ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 100ಕ್ಕೂ ಅಧಿಕ ಶೇರ್‌ ಆಗಿದೆ. 

ಇದನ್ನೂ ಓದಿ: ಹಣ ತೊಗೊಂಡು ದೇವಾಲಯ ಶಿಫ್ಟ್ ಮಾಡ್ಕೊಳ್ಳಿ; 130 ವರ್ಷ ಹಳೆ ದೇವಸ್ಥಾನ ಜಾಗದಲ್ಲಿ ಮಸೀದಿ ಶಂಕುಸ್ಥಾಪನೆ!

ಪರೀಕ್ಷೆಯಲ್ಲಿ ನನಗೆ ಇಷ್ಟು ಅಂಕ ಇರಬೇಕು, ದೇವರೇ ಹೊರಬೊಬ್ಬರ್ಯ
ಗಣಿತ -39, 38, 37, 36
ಇಂಗ್ಲಿಷ್- 39, 38, 37
ಕನ್ನಡ 40, 39
ವಿಜ್ಞಾನ -39, 38
ಹಿಂದಿ -40,39
ಸಮಾಜ- 38, 37
ದೇವರೇ ಇದಕ್ಕಿಂತಲೂ ನನಗೆ ಕಡಿಮೆ ಅಂಕ ಬೇಡ. ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಇರಬೇಕು ಎಂದು ಚೀಟಿಯಲ್ಲಿ ಬರೆದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!