ಬೊಮ್ಮನಹಳ್ಳಿಯ ವಿದ್ಯಾಜ್ಯೋತಿ ನಗರದ ಹೊಂಗಸಂದ್ರ ಸ್ಲಂ ಇದೀಗ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಓರ್ವ ಕಾರ್ಮಿಕನಿಂದಾಗಿ ಒಂಬತ್ತು ಮಂದಿಗೆ ಕೊರೋನಾ ಸೋಂಕು ತಗುಲಿದೆ> ಈ ಘಟನೆಯ ಜಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಬೆಂಗಳೂರು(ಏ.23) ಬಿಹಾರ ಕೊರೋನಾ ಬಾಂಬಿಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಹೊಂಗಸಂದ್ರ ಸ್ಲಂ ಇದೀಗ ಖಾಲಿ-ಖಾಲಿಯಾಗಿದ್ದು, ಸ್ಲಂನಲ್ಲಿರುವ ಮುನ್ನೂರು ಮನೆಗಳಿಗೆ ಬಿಬಿಎಂಪಿ ಬೀಗ ಜಡಿದಿದೆ. ಕೊರೋನಾ ಸೋಂಕಿತ ಬಿಹಾರಿ ಕಾರ್ಮಿಕನಿಂದಾಗಿ ಎಲ್ಲರೂ ಭಯದಲ್ಲಿ ಕಾಲ ದೂಡುವಂತಾಗಿದೆ. ವಿದ್ಯಾಜ್ಯೋತಿ ನಗರದಲ್ಲಿರುವಂತ ಹೊಂಗಸಂದ್ರ ಸ್ಲಂ ಇದೀಗ ಬಿಕೋ ಎನ್ನಲಾರಂಭಿಸಿದೆ.
ಇದೀಗ ಎಚ್ಚೆತ್ತುಕೊಂಡ ಬಿಬಿಎಂಪಿ ಇಡೀ ಸ್ಲಂ ಏರಿಯಾಗೆ ಔಷಧಿ ಸಿಂಪಡಿಸಿದೆ. ಒಬ್ಬ ಬಿಹಾರಿ ಸೋಂಕಿತನಿಂದ 9 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಏಪ್ರಿಲ್ 18ಕ್ಕೆ ಬೊಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಗೆ ಭೇಟಿ ಕೊಡುತ್ತಾನೆ. ಇಲ್ಲಿಂದ ಆತನ ಟ್ರಾವೆಲ್ ಹಿಸ್ಟರಿ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಈ ಘಟನೆಯ ಬಗ್ಗೆ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದು, ಆ ಏರಿಯಾದಲ್ಲಿರುವ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಈ ಘಟನೆಯ ಬಗ್ಗೆ ಶಾಸಕ ಸತೀಶ್ ರೆಡ್ಡಿ ಹೇಳಿದ್ದಿಷ್ಟು...
ಒಂದು ಏರಿಯಾದಿಂದ ಇಡೀ ಬೆಂಗಳೂರಿಗೆ ಆಪತ್ತು ಶುರುವಾಗಿದೆಯೇ ಎನ್ನುವ ಅನುಮಾನ ಆರಂಭವಾಗಿದೆ. ಇದರ ಬೆನ್ನಲ್ಲೇ ಇಡೀ ವಿದ್ಯಾಜ್ಯೋತಿ ನಗರ ಸ್ಲಂ ಖಾಲಿ ಮಾಡಿಸಲಾಗಿದೆ. ಕ್ವಾರಂಟೈನ್ನಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಇನ್ನು ವಿದ್ಯಾಜ್ಯೋತಿ ನಗರದ ಇಡೀ ಹೊಂಗಸಂದ್ರ ಸ್ಲಂಗೆ ಬಿಬಿಎಂಪಿ ಔಷಧಿ ಸಿಂಪಡಿಸಿದೆ.