
ಬಾಗಲಕೋಟೆ[ಡಿ.29]: ತಮ್ಮ ಕಾರು ಅಡ್ಡಗಟ್ಟಿಸಮಸ್ಯೆ ಹೇಳಿಕೊಳ್ಳಲು ಮುಂದಾದ ಕುಟುಂಬವೊಂದರ ವರ್ತನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಗರಂ ಆದ ಘಟನೆ ಶುಕ್ರವಾರ ಬಾದಾಮಿಯಲ್ಲಿ ನಡೆಯಿತು.
ಪಟ್ಟಣದ ಹೊರ ವಲಯದಲ್ಲಿರುವ ಕೃಷ್ಣಾ ಹೆರಿಟೇಜ್ನಿಂದ ಹೊರಡುವ ಸಂದರ್ಭದಲ್ಲಿ ಗೇಟ್ ಬಳಿ ಕಾರು ಅಡ್ಡಗಟ್ಟಿದ ಬಾದಾಮಿಯ ಕುಟುಂಬವೊಂದು ತಮ್ಮ ಸಮಸ್ಯೆ ಬಗೆಹರಿಸಿಯೇ ಹೋಗಬೇಕು ಎಂದು ಪಟ್ಟು ಹಿಡಿದರು. ಇದು ಸಿದ್ದರಾಮಯ್ಯ ಸಿಟ್ಟಿಗೇಳಲು ಕಾರಣವಾಯಿತು ಎಂದು ತಿಳಿದುಬಂದಿದೆ. ಬಾದಾಮಿಯ ಕನಕದಾಸ ಬ್ಯಾಂಕಿನಿಂದ ಸಾಲ ತುಂಬುವಂತೆ ಕಿರುಕುಳ ನೀಡುತ್ತಿದ್ದಾರೆ. ನಮಗೆ ಈ ಕಿರುಕುಳವನ್ನು ತಪ್ಪಿಸಿ ಸಾಲಮನ್ನಾ ಮಾಡಿ ಎಂದು ಅನಿತಾ ಮತ್ತು ತಾಯಿ, ಅವರ ವರ್ತನೆಗೆ ಗರಂ ಆದ ಸಿದ್ದರಾಮಯ್ಯ, ಖಾಸಗಿ ಬ್ಯಾಂಕಿನ ವೈಯಕ್ತಿಕ ಸಾಲವನ್ನು ಬಗೆಹರಿಸುವುದು ಹೇಗೆ ಎಂದರು.
ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆಯಿತು. ನೊಂದ ಕುಟುಂಬದ ಸದಸ್ಯರು ಒಂದು ಹಂತದಲ್ಲಿ ನೀವು ಬಾದಾಮಿ ಶಾಸಕರಿದ್ದೀರಿ ಎಂದು ಜೋರು ಧ್ವನಿಯಲ್ಲಿ ಹೇಳಿದ ಪ್ರಸಂಗವೂ ನಡೆಯಿತು. ಮೂಲ ಸಮಸ್ಯೆಗಳಿದ್ದರೆ ಹೇಳಿ ಈಗಲೇ ಬಗೆಹರಿಸುವೆ ಎಂದು ಹೇಳಿದ ಸಿದ್ದರಾಮಯ್ಯ, ಸ್ಥಳದಲ್ಲಿಯೇ ಬಾದಾಮಿ ತಹಸೀಲ್ದಾರರನ್ನು ಕರೆಸಿ ಇವರಿಗೆ ಮೂಲ ಸೌಲಭ್ಯ ಕಲ್ಪಿಸಿ ಎಂದು ಸೂಚಿಸಿ, ಮುಂದೆ ಹೋದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ