
ಬೆಂಗಳೂರು : ಹಿಂದೂ ದೇವರುಗಳನ್ನು ಸುಡುವುದನ್ನು ತಡೆಯಬೇಕೆಂದು ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಭಜರಂಗದಳ ಹಾಗೂ ವಿ ಎಚ್ ಪಿ ಸಂಘಟನೆಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಎಚ್ಚರಿಕೆ ನೀಡಿವೆ.
ಪ್ರತಿ ಬಾರಿ ದೀಪಾವಳಿ ದಿನ ಪಟಾಕಿ ಸುಡುತ್ತಾರೆ. ಆದರೆ ಅದರ ಮೇಲೆ ದೇವರುಗಳ ಫೋಟೊ ಇರುತ್ತದೆ. ನಾವು ಹಿಂದುಗಳು ಲಕ್ಷ್ಮೀ ಗಣೇಶನನ್ನು ಪೂಜೆ ಮಾಡುತ್ತೇವೆ. ಫೋಟೊ ಸುಟ್ಟಾಗ ಅದರ ಮೇಲಿನ ದೇವರ ಫೊಟೊಗಳು ಛಿದ್ರವಾಗುತ್ತವೆ. ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಆಗಬಾರದು. ಈ ರೀತಿ ದೇವರ ಫೋಟೊಗಳನ್ನು ಸುಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಭಜರಂಗದಳಸ ಸರಸಂಘಚಾಲಕ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ