Revenue Documents ಒಂದೇ ದಿನ 5 ಕೋಟಿ ದಾಖಲೆಗಳ ವಿತರಣೆ!

Kannadaprabha News   | Asianet News
Published : Mar 13, 2022, 04:45 AM IST
Revenue Documents ಒಂದೇ ದಿನ 5 ಕೋಟಿ ದಾಖಲೆಗಳ ವಿತರಣೆ!

ಸಾರಾಂಶ

- ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ರೈತರ ಮನೆಗೇ ತಲುಪಿಸುವ ಯೋಜನೆ - ಚಿಕ್ಕಬಳ್ಳಾಪುರದಲ್ಲಿ ‘ಮನೆ ಬಾಗಿಲಿಗೆ ಕಂದಾಯ ಇಲಾಖೆ’ಗೆ ಬೊಮ್ಮಾಯಿ ಚಾಲನೆ - ರಾಜ್ಯದ 224 ಕ್ಷೇತ್ರಗಳ 55 ಲಕ್ಷ ರೈತ ಕುಟುಂಬಕ್ಕೆ ದಾಖಲೆ ತಲುಪಿಸಿದ ಸರ್ಕಾರ

ಬೆಂಗ​ಳೂ​ರು (ಮಾ.13): ರೈತರ ಮನೆ​ಬಾ​ಗಿ​ಲಿಗೆ (farmer Doorstep) ಕಂದಾಯ ಇಲಾ​ಖೆಯ ದಾಖ​ಲೆಗಳನ್ನು (Revenue Documents) ತಲು​ಪಿ​ಸುವ ಮಹ​ತ್ವಾ​ಕಾಂಕ್ಷೆಯ ‘ಮನೆ ಬಾಗಿ​ಲಿಗೆ ಕಂದಾಯ ದಾಖಲೆ’ ಯೋಜ​ನೆ​ಗೆ ರಾಜ್ಯದ 31 ಜಿಲ್ಲೆ​ಗಳ 224 ಕ್ಷೇತ್ರ​ಗ​ಳಲ್ಲಿ ಶನಿ​ವಾರ ಚಾಲನೆ ನೀಡ​ಲಾ​ಯಿತು. ದೇಶ​ದಲ್ಲೇ ಮೊದ​ಲ​ನೆ​ಯದ್ದು ಎನ್ನ​ಲಾದ ಈ ಕಾರ್ಯ​ಕ್ರ​ಮಕ್ಕೆ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ  (CM basavaraj bommai) ಅವರು ಚಿಕ್ಕ​ಬ​ಳ್ಳಾ​ಪುರ ಜಿಲ್ಲೆ​ಯ ಕುಗ್ರಾಮ ಗುಂಗೀರ್ಲಹಳ್ಳಿಯಲ್ಲಿ ಅಧಿ​ಕೃ​ತ​ವಾಗಿ ಚಾಲನೆ ನೀಡಿದರು. ಈ ಕಾರ್ಯ​ಕ್ರ​ಮದ ಮೂಲಕ ಒಂದೇ ದಿನ ರಾಜ್ಯಾ​ದ್ಯಂತ 55 ಲಕ್ಷ ರೈತರಿಗೆ 5 ಕೋಟಿಯಷ್ಟುಕಂದಾಯ ದಾಖಲೆಗಳನ್ನು ಉಚಿ​ತ​ವಾಗಿ ವಿತ​ರಿ​ಸ​ಲಾ​ಯಿ​ತು.

ಗುಂಗೀ​ರ್ಲ​ಹ​ಳ್ಳಿ​ಯಲ್ಲಿ 13 ಕುಟುಂಬ​ಗ​ಳಿಗೆ ಸಾಂಕೇ​ತಿ​ಕ​ವಾಗಿ ಕಂದಾಯ ದಾಖ​ಲೆ​ಗ​ಳನ್ನು ವಿತ​ರಿ​ಸಿದ ಬಳಿಕ ಮಾತ​ನಾ​ಡಿದ ಬೊಮ್ಮಾಯಿ, ಕಂದಾಯ ಇಲಾ​ಖೆ​ಯ​ಲ್ಲಿ ಈ ಯೋಜ​ನೆ ಹೊಸ ಕ್ರಾಂತಿ ಸೃಷ್ಟಿ​ಸ​ಲಿದೆ ಎಂದು ಬಣ್ಣಿ​ಸಿ​ದರು. ಈ ಕಾರ್ಯ​ಕ್ರ​ಮ​ದಿಂದ ರೈತ​ರು, ಸಾರ್ವ​ಜ​ನಿ​ಕರು ದಾಖಲೆ ಪತ್ರ​ಗ​ಳಿ​ಗಾಗಿ ಪದೇ ಪದೇ ಸರ್ಕಾರಿ ಕಚೇ​ರಿಗೆ ಅಲೆ​ದಾ​ಡು​ವುದು ತಪ್ಪ​ಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡವರು, ರೈತರು, ದೀನದಲಿತರು ಹಿಂದುಳಿದ ವರ್ಗದವರ ಬಗ್ಗೆ ಕಾಂಗ್ರೆ​ಸ್ಸಿ​ಗರು ಮಾತನಾಡಿದ್ದೇ ಹೆಚ್ಚು. ಬಡ​ವರು, ದೀನ​ದ​ಲಿ​ತರೆಲ್ಲ ಉದ್ಧಾರವಾಗಿದ್ದರೆ ಇಂದು ನಾವು ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲು​ಪಿ​ಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಭೂ ದಾಖಲೆಯನ್ನು (Land Documents) ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆ ಹಕ್ಕನ್ನು ಅತ್ಯಂತ ಸರಳ ರೀತಿಯಲ್ಲಿ ಪಡೆಯಲು ಈ ಮಹತ್ವದ ಯೋಜನೆ ಸಹಕಾರಿಯಾಗಲಿದೆ. ಕಂದಾಯ ದಾಖಲೆಗಳನ್ನು ಫಲಾ​ನು​ಭ​ವಿ​ಗಳ ಮನೆ​ಬಾ​ಗಿ​ಲಿಗೆ ವಿತ​ರಿ​ಸುವ ಈ ವಿನೂತನ ಯೋಜನೆ 224 ಕ್ಷೇತ್ರಗಳಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮ ರೀತಿ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್‌.​ಅ​ಶೋಕ್‌ ( Revenue Minister R. Ashoka ) ಹೇಳಿ​ದ​ರು.

ರೈತರ ಹಕ್ಕನ್ನು ನಿರ್ಧ​ರಿ​ಸು​ವ ದಾಖ​ಲೆ​ಗ​ಳಾದ ಪಹಣಿ (Pahani), ಅಟ್ಲಾಸ್‌ (Map), ಜಾತಿ ಹಾಗೂ ಆದಾಯ ಪ್ರಮಾಣ ಪತ್ರ​ಗ​ಳನ್ನು ಮುದ್ರಿಸಿ ಕುಟುಂಬವಾರು, ಗ್ರಾಮವಾರು ವಿಂಗಡಿಸಿ ಪೂರ್ವಮುದ್ರಿತ ಫೈಲ್‌ ಅಥವಾ ಫೋಲ್ಡರ್‌ನಲ್ಲಿ ಹಾಕಿ ಸಂಬಂಧಿಸಿದ ರೈತ ಕುಟುಂಬಕ್ಕೆ ತಲುಪಿಸುವ ವಿಶಿಷ್ಟಯೋಜನೆ ಇದಾ​ಗಿದ್ದು, ಕಂದಾಯ ಇಲಾಖೆ ಸಿಬ್ಬಂದಿಯೇ ಖುದ್ದು ರೈತರ ಮನೆ ಬಾಗಿ​ಲಿಗೆ ತೆರಳಿ ದಾಖ​ಲೆ​ಗ​ಳನ್ನು ವಿತ​ರಿ​ಸುವ​ರು.

ಹಬ್ಬದ ವಾತಾ​ವ​ರ​ಣ: ಬೊಮ್ಮಾಯಿ ಆಗ​ಮ​ನದ ಹಿನ್ನೆ​ಲೆ​ಯಲ್ಲಿ ಗ್ರಾಮ​ದಲ್ಲಿ ಹಬ್ಬದ ವಾತಾ​ವ​ರಣ ನಿರ್ಮಾ​ಣ​ವಾ​ಗಿತ್ತು. ಚಿಕ್ಕಬಳ್ಳಾಪುರ ನಗ​ರದಿಂದ 15 ಕಿ.ಮೀ. ದೂರ​ದ​ಲ್ಲಿ​ರುವ ಪರಿಶಿಷ್ಟಸಮುದಾಯದವರೇ ಹೆಚ್ಚಿನ ಸಂಖ್ಯೆ​ಯ​ಲ್ಲಿ​ರುವ ಈ ಕುಗ್ರಾ​ಮ​ದ​ಲ್ಲಿ ಸಿಎಂಗೆ ಪೂರ್ಣ ಕುಂಭ ಸ್ವಾಗತ ನೀಡ​ಲಾ​ಯಿ​ತು. ಕಾರ್ಯ​ಕ್ರ​ಮಕ್ಕೂ ಮೊದಲು ಮುಖ್ಯ​ಮಂತ್ರಿ ಅವರು ಗ್ರಾಮ​ಸ್ಥರ ಮನೆಗೆ ಹೋಗಿ ಅವರ ಅಹ​ವಾಲು ಆಲಿ​ಸಿದ್ದು ವಿಶೇ​ಷ​ವಾ​ಗಿ​ತ್ತು.

'ದೇವೇಗೌಡ-ಎಚ್‌ಡಿಕೆ ಜೊತೆ ಚರ್ಚೆ ಫಲಪ್ರದ, ಸ್ವಾಮೀಜಿಗಳ ಜತೆ ಚರ್ಚಿಸಿ JDS ಸೇರ್ಪಡೆ ದಿನಾಂಕ ನಿಗದಿ'
ಶಿಕಾ​ರಿ​ಪು​ದಲ್ಲಿ ಬಿಎ​ಸ್‌​ವೈ: ಮುಖ್ಯ​ಮಂತ್ರಿ ಚಿಕ್ಕ​ಬ​ಳ್ಳಾ​ಪು​ರ​ದಲ್ಲಿ ಈ ಯೋಜ​ನೆಗೆ ಚಾಲನೆ ನೀಡಿ​ದರೆ, ಶಿವ​ಮೊಗ್ಗದ ಶಿಕಾ​ರಿ​ಪು​ರ​ದಲ್ಲಿ ಮಾಜಿ ಸಿಎಂ ಬಿ.ಎ​ಸ್‌.​ಯ​ಡಿ​ಯೂ​ರಪ್ಪ, ಮೈಸೂ​ರಲ್ಲಿ ಸಚಿವ ಎಸ್‌.​ಟಿ.​ಸೋ​ಮ​ಶೇ​ಖರ್‌, ಬೆಳ​ಗಾ​ವಿಯಲ್ಲಿ ಜಲ​ಸಂಪ​ನ್ಮೂಲ ಸಚಿವ ಗೋವಿಂದ ಕಾರ​ಜೋ​ಳ, ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡು ಗ್ರಾಪಂನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸು​ನಿಲ್‌ ಕುಮಾ​ರ್‌, ಬಂಟ್ವಾಳದ ಅಮ್ಮುಂಜೆಯಲ್ಲಿ ಬಿಜೆಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ ವಿವಿಧ ಸಚಿ​ವರು, ಜನ​ಪ್ರ​ತಿ​ನಿ​ಧಿ​ಗಳು, ಶಾಸ​ಕ​ರು ಕಾರ್ಯ​ಕ್ರಮ ಉದ್ಘಾ​ಟಿ​ಸಿ​ದ​ರು.

ಯುಟಿ ಖಾದರ್‌ಗೆ ಶಾಕ್‌, 24 ವರ್ಷದಿಂದ ಜೊತೆಗಿದ್ದ ಮುಖಂಡ ಬಿಜೆಪಿ ಸೇರ್ಪಡೆ
ಅಶೋ​ಕ​ಣ್ಣ​ನಿಂದ ಕ್ರಾಂತಿ-ಸಿಎಂ

ಕಾರ್ಯ​ಕ್ರ​ಮ​ದಲ್ಲಿ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಅವರು ಕಂದಾಯ ಸಚಿವ ಆರ್‌.​ಅ​ಶೋಕ್‌ ಅವರ ಕುರಿತು ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದರು. ಅಶೋ​ಕಣ್ಣ ಮುಂದಾ​ಳ​ತ್ವ​ದಲ್ಲಿ ಈ ಕಾರ್ಯ​ಕ್ರಮ ಕಂದಾಯ ಇಲಾ​ಖೆ​ಯಲ್ಲಿ ಕ್ರಾಂತಿ ಸೃಷ್ಟಿಸ​ಲಿದೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ​ರು. ನಂತರ ಮಾತ​ನಾ​ಡಿದ ಸಚಿವ ಅಶೋಕ್‌, ಜನಪರವಾದ ಸರ್ಕಾರ, ಜನರ ಮುಖ್ಯಮಂತ್ರಿಯಿಂದ ಮಾತ್ರ ಈ ರೀತಿ​ಯ ಕಾರ್ಯ​ಕ್ರಮ ಮಾಡಲು ಸಾಧ್ಯ ಎಂದು ಬೊಮ್ಮಾಯಿ ಅವ​ರನ್ನು ಹೊಗ​ಳಿ​ದ​ರು. ಗರೀಬಿ ಹಟಾವೋ ಹೆಸರೇಳಿ ರಾಜಕಾರಣ ಮಾಡಿದ ಕಾಂಗ್ರೆಸ್‌ ಬಡವರು, ದಲಿತರ ಉದ್ಧಾರ ಮಾಡಲಿಲ್ಲ. ಅವರೆಲ್ಲಾ ಉದ್ಧಾರವಾಗಿದ್ದರೆ ನಾವು ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ಹೋಗಿ ಕೊಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಶೋಕಣ್ಣ ಮುಂದಾಳತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಈ ಕಾರ್ಯಕ್ರಮ ಕ್ರಾಂತಿ ಸೃಷ್ಟಿಸಲಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ