ದರ್ಶನ್‌ಗಿಂದು ಜೈಲೋ‌, ಬೇಲೋ?: ಟೆನ್ಷನ್‌ನಲ್ಲಿ ರಾತ್ರಿಯಿಡಿ ನಿದ್ದೆ ಮಾಡದ ಕೊಲೆ ಆರೋಪಿ..!

By Girish GoudarFirst Published Sep 27, 2024, 7:14 AM IST
Highlights

ಇಂದು ಮತ್ತೊಮ್ಮೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ದರ್ಶನ್ ಮತ್ತೆ ಟೆನ್ಷನ್‌ನಲ್ಲಿದ್ದಾನೆ.  ಸತತ ಏಳು ಗಂಟೆಗಳ ಕಾಲ ನಿನ್ನೆ ಐಟಿ ಅಧಿಕಾರಿಗಳ ವಿಚಾರಣೆಯಿಂದ ಸಾಕಷ್ಟು ಬಳಲಿದ್ದಾನೆ ದರ್ಶನ್. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಮತ್ತು ನಿನ್ನೆ ಐಟಿ ವಿಚಾರಣೆ ಹಿನ್ನಲೆಯಲ್ಲಿ ರಾತ್ರಿಯಿಡಿ ನಿದ್ದೆ ಮಾಡಿಲ್ವಂತೆ ದರ್ಶನ್. 

ಬಳ್ಳಾರಿ:(ಸೆ.27):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಬಂದು ಬರೋಬ್ಬರಿ ಒಂದು ತಿಂಗಳಾಯ್ತು. ದರ್ಶನ್ ಪರಪ್ಪನ ಅಗ್ರಹಾರಕ್ಕಿಂತ ಬಳ್ಳಾರಿ ಜೈಲಿನಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾನೆ. 

ಇಂದು ಮತ್ತೊಮ್ಮೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ದರ್ಶನ್ ಮತ್ತೆ ಟೆನ್ಷನ್‌ನಲ್ಲಿದ್ದಾನೆ.  ಸತತ ಏಳು ಗಂಟೆಗಳ ಕಾಲ ನಿನ್ನೆ ಐಟಿ ಅಧಿಕಾರಿಗಳ ವಿಚಾರಣೆಯಿಂದ ಸಾಕಷ್ಟು ಬಳಲಿದ್ದಾನೆ ದರ್ಶನ್.

Latest Videos

ದರ್ಶನ್‌ಗೆ ಇದೆಲ್ಲಾ ಬೇಕಿತ್ತಾ? ಪ್ರಪಂಚದಲ್ಲಿ ಮಾಡೋಕೆ ಸಾಕಷ್ಟು ಕೆಲಸಗಳು ಇದೆ: 'ಕರಿಯಾ' ನಟಿ ಟಾಂಗ್

ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಮತ್ತು ನಿನ್ನೆ ಐಟಿ ವಿಚಾರಣೆ ಹಿನ್ನಲೆಯಲ್ಲಿ ರಾತ್ರಿಯಿಡಿ ನಿದ್ದೆ ಮಾಡಿಲ್ವಂತೆ ದರ್ಶನ್. ಇವತ್ತಾದ್ರೂ ಜಾಮೀನು ‌ಸಿಕ್ತದೆಯೋ ಇಲ್ವೋ? ನ್ಯಾಯಾಂಗ ಬಂಧನದ ಅವಧಿ ಮುಂದುವರೆಯುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ. ಹೀಗೆ ರಾತ್ರಿ ಪಾಳಯದ ಸಿಬ್ಬಂದಿ ಜೊತೆಗೆ ದರ್ಶನ್ ಚರ್ಚೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

click me!