ಲಾಕ್‌ಡೌನ್ 4.0: ರಾಜ್ಯದಲ್ಲಿ ಮದ್ಯ ಮಾರಾಟ ಬಂದ್....!

Published : May 18, 2020, 04:10 PM ISTUpdated : May 18, 2020, 04:13 PM IST
ಲಾಕ್‌ಡೌನ್ 4.0: ರಾಜ್ಯದಲ್ಲಿ ಮದ್ಯ ಮಾರಾಟ ಬಂದ್....!

ಸಾರಾಂಶ

ಇಂದಿನಿಂದ 4ನೇ ಹಂತದ ಲಾಕ್‌ಡೌನ್ ಶುರುವಾಗಿದ್ದು, ಕರ್ನಾಟಕದಲ್ಲಿ ನಯಾ ದುನಿಯಾ ಶುರುವಾಗಲಿದೆ. ಆದ್ರೆ, ಮದ್ಯ ಮಾರಾಟ ಬಂದ್‌ ಆಗಲಿದೆ.

ಬೆಂಗಳೂರು, (ಮೇ.18): ಲಾಕ್‍ಡೌನ್ 4.0 ಕರ್ನಾಟಕದಲ್ಲಿ ಬಹುತೇಕ ಎಲ್ಲವುದಕ್ಕೂ ಸಡಿಲಿಕೆ ನೀಡಲಾಗಿದೆ.

ಬಸ್, ಟ್ಯಾಕ್ಸಿ, ಕ್ಯಾಬ್, ಆಟೋ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಭಾನುವಾರ ವಾಹನ ಸಂಚಾರ, ಅಂಗಡಿ ಮುಚ್ಚಲು ಆದೇಶ ಹೊರಡಿಸಿದೆ. ಇನ್ನು ರಾಜ್ಯದಲ್ಲಿ ಭಾನುವಾರ ಮದ್ಯ ಸಿಗಲ್ಲ.

ಹೌದು... ಮೇ 31ರವರೆಗೆ ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹಾಗಾಗಿ ಎಲ್ಲ ವ್ಯಾಪಾರ ಸೇರಿದಂತೆ ಮದ್ಯದಂಗಡಿಗಳು ಬಂದ್ ಆಗಲಿವೆ. ಈ ಮೂಲಕ ಸಂಡೇ ಪಾರ್ಟಿ ಮಾಡುವವರಿಗೆ ದೊಡ್ಡ ನಿರಾಸೆ ಉಂಟು ಮಾಡಿದೆ.

ನಾಳೆಯಿಂದ ನಯಾ ದುನಿಯಾ; ಇದಕ್ಕೆಲ್ಲಾ ಸಿಕ್ಕಿದೆ ರಿಲೀಫ್..! 

ಮೇ.31ರ ವರೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ಲಾಕ್‌ಡೌನ್‌ ಗೈಡ್‌ಲೈನ್ಸ್ ಬಗ್ಗೆ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಹತ್ವ ಸಭೆ ನಡೆಸಿದ್ದು, ಕೇವಲ ಪ್ರತಿ ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ವಾರದಲ್ಲಿ ಆರು ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದು ಪಾರ್ಸಲ್ ಮಾತ್ರ. ಫಸ್ಟ್ ಮತ್ತು ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿರಲಿಲ್ಲ. ಇದರಿಂದ ಮದ್ಯವ್ಯಸನಿಗಳು ದೊಡ್ಡ ಅವಾಂತರಗಳನ್ನೇ ಮಾಡಿದ್ದರು.

ಬಳಿಕ ರಾಜ್ಯದ ಬೊಕ್ಕಸ ತುಂಬಲು  ಎಂಎಸ್‌ಐಎಲ್‌ ಹಾಗೂ ಬಾರ್‌ಗಳಲ್ಲಿ ಷರತ್ತು ಬದ್ದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದಬಂದಿದ್ದನ್ನು ಇಲ್ಲಿ ಸ್ಮರಿಸಬಹದು. ಆದ್ರೆ, ಇದೀಗ ಮದ್ಯ ವಹಿವಾಟು ಸಹ ಕೊಂಚ ಇಳಿಕೆಯಾಗಿದೆ. ಮೊದಲಿನಂತೆ ಈಗ ಮದ್ಯ ಸೇಲ್ ಆಗುತ್ತಿಲ್ಲ. 

ಯಾಕಂದ್ರೆ ಜನರು ಮದ್ಯ ಆರಂಭವಾಗುತ್ತಿದ್ದಂತೆಯೇ ಮುಂದೆ ಸಿಗುತ್ತೋ ಇಲ್ಲೋ ಎನ್ನುವ ರೀತಿಯಲ್ಲಿ ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ. ಇದರಿಂದ ಮದ್ಯ ಮಾರಾಟದ ವ್ಯಾಪಾಟ ಕೊಂಚ ಕಡಿಮೆಯಾಗಿದೆ ಎನ್ನಲಾಗುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!