
ಧಾರವಾಡ (ಜೂ.14): ಭಾರತದ ಭೂಪಟ ತಿರುಗಿಸಿ ನೋಡಿ ಆಂಧ್ರದಲ್ಲಿ ಸನಾತನ ಧರ್ಮದ ಅಂಧಶ್ರದ್ಧೆ ಇದೆ. ಕೇರಳ ದೇವರ ನಾಡು ಅಲ್ಲಿನವರು ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ, ಅಷ್ಟೇ ಧರ್ಮದಲ್ಲಿ ಅಂಧ ಶ್ರದ್ಧೆ ಇದೆ. ತಮಿಳನಾಡಿನಲ್ಲಿ ಹೋರಾಟದ ಪ್ರತಿರೂಪದ ವ್ಯವಸ್ಥೆ ಕಂಡುಬರುತ್ತದೆ. ಇನ್ನು ಉತ್ತರ ಭಾರತದಲ್ಲಿ ಅಲ್ಲಿನ ಧಾರ್ಮಿಕ ಮುಖಂಡರು, ಭಕ್ತಿ ಮತ್ತು ಜ್ಞಾನ, ಪ್ರತಿಭೆ ಮೇಲೆ ಸಮಾಜ ಕಟ್ಟಿದ್ದಾರೆ ಅದೇ ಕರ್ನಾಟಕಕ್ಕೆ ಬಂದು ನೋಡಿ ಕರ್ನಾಟಕದ ಲಿಂಗಾಯತ ರಾಜರು, ಮಠಾಧೀಶರು, ದಾಸೋಹಿಗಳು ಗುಡಿ ಗುಂಡಾರ ಕಟ್ಟಲಿಲ್ಲ. ಬಸವಣ್ಣನವರ ತತ್ವದ ಅನ್ನ, ಅರಿವು, ಆಶ್ರಯ, ದಾಸೋಹ ನೀಡಿದ್ದಾರೆ. ಜಗತ್ತಿಗೆ ಬೇಕಾಗಿರುದನ್ನು ನೀಡಿದ್ದಾರೆ ಎಂದು ನಿಜಗುಣಾನಂದ ಸ್ವಾಮೀಜಿ ನುಡಿದರು.
ಇಂದು ಧಾರವಾಡದಲ್ಲಿ ಲಿಂಗಾಯತ ಭವನದ ನೂತನ ಸಭಾ ಭವನ ಉದ್ಘಾಟನೆ ಬಳಿಕ ಮಾತನಾಡಿದ ಶ್ರೀಗಳು, ಇವತ್ತು ಯಾವ ಕಾರಣಕ್ಕಾಗಿ ಬಸವಣ್ಣ ಸಾಂಸ್ಕೃತಿಕ ನಾಯಕ ಮಾಡಿದ್ದಾರೆ ಎಂಬುದನ್ನ ಅರಿಯಬೇಕಿದೆ. ದೇಶದ ಪ್ರಧಾನಿ ರಾಮ-ಹನಮಂತರನ್ನ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜನವಿಲ್ಲ.
ಬಿಎಸ್ವೈ ಮೇಲೆ ಇಲ್ಲಸಲ್ಲದ ಪ್ರಕರಣ ಎಳೆಯುತ್ತಿದ್ದೀರಿ: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ಪ್ರಹ್ಲಾದ ಜೋಶಿ
ದೇಶದ ಪ್ರಧಾನಿ ರಾಮ-ಹನುಮಂತ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜವಿಲ್ಲ. ಭಾರತ ಬಿಟ್ಟು ಹೊರಗೆ ರಾಮ-ಹನಮಂತರನ್ನ ತೆಗೆದುಕೊಂಡು ಹೋದರೆ ಆಗದು ದೇಶ ಪ್ರತಿನಿಧಿಸಬೇಕಾದರೆ ಬುದ್ಧ-ಬಸವ ಅಂಬೇಡ್ಕರ್ ಬೇಕು. ಅವರನ್ನ ತೆಗೆದುಕೊಂಡು ಹೋಗಬೇಕು. ಏಕೆಂದರೆ ಸಮಾನತೆಗಾಗಿ ಕಾರ್ಯ ಮಾಡಿದವರು ಇವರು. ಆದರೆ ಇಂದು ಬುದ್ಧ ಬಸವ ಅಂಬೇಡ್ಕರ್ ಬದಲಾಗಿ ರಾಮ-ಹನಮಂತರನ್ನ ದೇಶದ ಹೊರಗೆ ಪರಿಚಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ