ವಂದೇ ಭಾರತ್‌ ರೈಲಲ್ಲೂ ನಂದಿನಿ ಉತ್ಪನ್ನ

Published : Aug 03, 2023, 03:00 AM IST
ವಂದೇ ಭಾರತ್‌ ರೈಲಲ್ಲೂ ನಂದಿನಿ ಉತ್ಪನ್ನ

ಸಾರಾಂಶ

ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಸ್ತಾರ ಸಂಸ್ಥೆಯ ವಿಮಾನಗಳ ಫ್ಲೈಟ್‌ ಕೇಟರಿಂಗ್‌ನಲ್ಲಿ ನಂದಿನಿಯ ಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳು, ಐಸ್‌ಕ್ರೀಂ ಸೇರಿದಂತೆ ಹಾಲಿನ ಉತ್ಪನ್ನಗಳು ಈಗಾಗಲೇ ಲಭ್ಯವಿದೆ. ಭಾರತೀಯ ರೈಲ್ವೆಯಲ್ಲೂ ನಂದಿನಿ ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಲಕ್ಷ ಪೆಟ್‌ ಬಾಟಲ್‌ಗಳು ಮಾರಾಟವಾಗುತ್ತಿವೆ.

ಬೆಂಗಳೂರು(ಆ.03):  ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ ಹಾಲು, ಲಸ್ಸಿ, ಮಿಲ್ಕ್‌ಶೇಕ್‌ ಪೆಟ್‌ ಬಾಟಲ್‌ ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳು ವಿಮಾನ, ರೈಲುಗಳಲ್ಲೂ ಲಭ್ಯವಾದಂತೆ ‘ವಂದೇ ಭಾರತ್‌’ ರೈಲಿನಲ್ಲೂ ಸಿಗಲಿದೆ. ಕಳೆದ 15 ದಿನಗಳಿಂದ ಬೆಂಗಳೂರಿನಿಂದ ಹೊರಡುವ ವಂದೇ ಭಾರತ್‌ ರೈಲಿನಲ್ಲಿ ಪ್ರತಿ ದಿನ 7ರಿಂದ 10 ಸಾವಿರದಷ್ಟು ಮಿಲ್ಕ್‌ಶೇಕ್‌ ಪೆಟ್‌ ಬಾಟಲ್‌ಗಳು ಮಾರಾಟವಾಗುತ್ತಿವೆ. ವಿಶೇಷವೆಂದರೆ ವಂದೇ ಭಾರತ್‌ ರೈಲಿನ ಬೆಳಗ್ಗಿನ ಉಪಾಹಾರದಲ್ಲಿ ನಂದಿನಿ ಬೆಣ್ಣೆ, ಲಸ್ಸಿ 200 ಎಂಎಲ್‌ ವಿತರಿಸಲಾಗುತ್ತಿದೆ. ಇದರೊಂದಿಗೆ ಮಿಲ್ಕ್‌ಶೇಕ್‌ ಪೆಟ್‌ಬಾಟಲ್‌, ಚಾಕೋಲೆಟ್‌, ಗುಡ್‌ಲೈಫ್‌ ಸುವಾಸಿತ ಹಾಲುಗಳು ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಸ್ತಾರ ಸಂಸ್ಥೆಯ ವಿಮಾನಗಳ ಫ್ಲೈಟ್‌ ಕೇಟರಿಂಗ್‌ನಲ್ಲಿ ನಂದಿನಿಯ ಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳು, ಐಸ್‌ಕ್ರೀಂ ಸೇರಿದಂತೆ ಹಾಲಿನ ಉತ್ಪನ್ನಗಳು ಈಗಾಗಲೇ ಲಭ್ಯವಿದೆ. ಭಾರತೀಯ ರೈಲ್ವೆಯಲ್ಲೂ ನಂದಿನಿ ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಲಕ್ಷ ಪೆಟ್‌ ಬಾಟಲ್‌ಗಳು ಮಾರಾಟವಾಗುತ್ತಿವೆ. ಬೇಸಿಗೆ ಸಂದರ್ಭದಲ್ಲಿ 5ರಿಂದ 6 ಲಕ್ಷ ಬಾಟಲ್‌ಗಳಿಗೂ ಅಧಿಕ ಮಾರಾಟವಾಗುತ್ತಿವೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ಗೆ ಪುನೀತ್‌ ಬಳಿಕ ಶಿವ ರಾಜ್‌ಕುಮಾರ್‌ ರಾಯಭಾರಿ

ಮುಂದಿನ ದಿನಗಳಲ್ಲಿ ದೇಶಾದ್ಯಂತ ಸಂಚರಿಸುವ ರೈಲು, ವಿಮಾನಗಳಲ್ಲಿ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷವೇ ಭಾರತೀಯ ರೈಲ್ವೆ ಮತ್ತು ವಿಸ್ತಾರ ಹಾಗೂ ಏರ್‌ ಇಂಡಿಯಾ ವಿಮಾನಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಆರಂಭಿಸಿದ್ದು ಅದನ್ನು ಇನ್ನು ಹೆಚ್ಚಿನ ವಾಯುಯಾನ ಸಂಸ್ಥೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್