ಜೈ ಶ್ರೀರಾಮ್ ಎಂದರೆ ಊಟ ಸಿಗುತ್ತಾ? ನೌಕರಿ ಸಿಗುತ್ತಾ?: ಸಚಿವ ತಿಮ್ಮಾಪುರ

Published : Mar 07, 2024, 11:12 PM IST
ಜೈ ಶ್ರೀರಾಮ್ ಎಂದರೆ ಊಟ ಸಿಗುತ್ತಾ? ನೌಕರಿ ಸಿಗುತ್ತಾ?: ಸಚಿವ ತಿಮ್ಮಾಪುರ

ಸಾರಾಂಶ

ಜೈ ರಾಮ್, ಶ್ರೀರಾಮ್ ಅಂದ್ರೆ ಏನು ಯುವಕರಿಗೆ ಊಟಕ್ಕೆ ಸಿಗುತ್ತಾ? ನೌಕರಿ ಸಿಗುತ್ತಾ? ಬದುಕು ಸಿಗುತ್ತಾ ?  ಎಂದು ಪ್ರಶ್ನಿಸುವ ಮೂಲಕ ಸಚಿವ ತಿಮ್ಮಾಪೂರ ಗ್ಯಾರಂಟಿ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.

ಬಾಗಲಕೋಟೆ (ಮಾ.7): ಜೈ ರಾಮ್, ಶ್ರೀರಾಮ್ ಅಂದ್ರೆ ಏನು ಯುವಕರಿಗೆ ಊಟಕ್ಕೆ ಸಿಗುತ್ತಾ? ನೌಕರಿ ಸಿಗುತ್ತಾ? ಬದುಕು ಸಿಗುತ್ತಾ ?  ಎಂದು ಪ್ರಶ್ನಿಸುವ ಮೂಲಕ ಸಚಿವ ತಿಮ್ಮಾಪೂರ ಗ್ಯಾರಂಟಿ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.

 ಬಾಗಲಕೋಟೆ ತೋಟಗಾರಿಕೆ ವಿವಿ ಪಕ್ಕದ 112 ನೇ ಸೆಕ್ಟರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಚಿವ ತಿಮ್ಮಾಪೂರ, ಯುವಕರು ಎಂತಹ ಸ್ಥಿತಿಯಲ್ಲಿದ್ದಾರೆ. ಎಲ್ಲಾ ಓದಿ ಮನೆಯಲ್ಲಿ ಕುಳಿತಿದ್ದಾರೆ. ಅಂತಹ ಯುವಕರಿಗೆ ಯುವ ನಿಧಿ ಮೂಲಕ ಹಣ ಕೊಡ್ತಿದ್ದೇವೆ. ಆದ್ರೆ ಇನ್ನೊಬ್ರು ಹುಡುಗರ ಕೈಯಲ್ಲಿ ಏನು ಕೊಡ್ತಾರೆ, ಜೈ ಶ್ರೀ ರಾಮ್, ಜೈ ರಾಮ್ ಕೊಡ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

 ನಾವು ಹಿಂದುಗಳಲ್ವ? ನಾವೆಲ್ಲ ಜೈ ಶ್ರೀ ರಾಮ್, ಜೈ ಶ್ರೀ ರಾಮ್, ಹನುಮಂತ, ಬಸವಣ್ಣ ಎಲ್ಲಾ ಅನ್ನುವವರೆ. ಆದ್ರೆ ಇವ್ರು ಏಕೆ ಅಂತಾರೆ ಅಂದ್ರೆ ಅಧಿಕಾರಕ್ಕಾಗಿ ಅಂತಾರೆ. ಭಕ್ತಿ ಭಾವದಿಂದ ಅನ್ನಬೇಕು. ಆದ್ರೆ ಇವ್ರು ಎಂಪಿ, ಎಂಎಲ್‌ಎ ಆಗಲಿಕ್ಕೆ ಅಂತಾರೆ. ಜೈಶ್ರೀರಾಮ್ ಜೊತೆಗೆ ಮಾತೆತ್ತಿದರೆ ಪಾಕಿಸ್ತಾನ ಹೆಸರು ಹೇಳೋದು. ಮುಸ್ಲಿಂರ ಹೆಸರು ಹೇಳೋದು. ಈ ದೇಶದ ಒಬ್ಬ ಎಂಪಿ ನಮಗೆ ಇಷ್ಟು ಹಣ ಬೇಕು ಅಂತ ಕೇಳಲಿಲ್ಲ. ಬೆಳಗ್ಗೆ ಎದ್ದ ತಕ್ಷಣವೇ ಪಾಕಿಸ್ತಾನ ಅಂತಾರೆ ಎಂದು ಬಿಜೆಪಿಗರ ವಿರುದ್ಧ ಸಚಿವರು ವಾಗ್ಧಾಳಿ ನಡೆಸಿದ್ರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ