ಕೊರೋನಾ 2ನೇ ಅಲೆ ಇಷ್ಟಕ್ಕೆ ನಿಲ್ಲೋದಿಲ್ಲ: ಶಾಕ್ ಕೊಟ್ಟ ಸುಧಾಕರ್

Published : Apr 24, 2021, 07:13 PM ISTUpdated : Apr 24, 2021, 07:20 PM IST
ಕೊರೋನಾ 2ನೇ ಅಲೆ ಇಷ್ಟಕ್ಕೆ ನಿಲ್ಲೋದಿಲ್ಲ: ಶಾಕ್ ಕೊಟ್ಟ ಸುಧಾಕರ್

ಸಾರಾಂಶ

ಮಹಾಮಾರಿ ಕೊರೋನಾ ಮೊದಲಿಗಿಂತಲೂ ಎರಡನೇ ಅಲೆ ಭಯಾನವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿನ ಹಾಗೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, (ಏ.24): ಕೊರೋನಾ 2ನೇ ಅಲೆ ಇಷ್ಟಕ್ಕೆ ನಿಲ್ಲೋದಿಲ್ಲ, ಇದು ಮೂರು ನಾಲ್ಕು ಐದಾಗಿ ಮಾರ್ಪಾಡಾಗುತ್ತಾ ಹೋಗುತ್ತದೆ ಎಂದು ಆರೋಗ್ಯ ಸಚಿವ ಸುಧಾಕರ್​ ತಿಳಿಸಿದ್ದಾರೆ.

 ಇಂದು (ಶನಿವಾರ) ನಗರದಲ್ಲಿ ಮಾತನಾಡಿದ ಸುಧಾಕರ್​,  ಈ ಬಾರಿಯ ಅಲೆಯಲ್ಲಿ ಕೊರೋನಾ ವೇಗವಾಗಿ ಹರಡುತ್ತಿರೋದಕ್ಕೆ ಮುಖ್ಯ ಕಾರಣ ಈ ರೂಪಾಂತರಿ ವೈರಾಣುವಿನ ಸ್ವಭಾವ ಎಂದರು.

'ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸವಾಗುತ್ತಿದೆ'

 ಅದು ಯುಕೆ ವೈರೆಸ್​ನ ರೀತಿಯಲ್ಲೂ ಇಲ್ಲ, ಬ್ರೆಜಿಲ್​ ಅಥವಾ ಫ್ರಾನ್ಸ್​ನ ರೀತಿಯಲ್ಲೂ ಇಲ್ಲ, ಇದು ಭಿನ್ನವಾಗಿದೆ. ಹಾಗಾಗಿಯೇ ಹೊರದೇಶದವರು ಇದನ್ನ ಇಂಡಿಯನ್​ ಸ್ಟ್ರೇನ್​ ಎಂದೇ ಕರೆಯುತ್ತಿದ್ದಾರೆ. ಇದೊಂದು ಹೊಸಾ ರೀತಿಯ ವೈರಾಣುವಾಗಿದೆ. ಹಿಂದೆ ನಮ್ಮಲ್ಲಿ ಸ್ಪಾನಿಷ್​ ವೈರೆಸ್​ ಕಾಣಿಸಿಕೊಂಡಾಗ ಇದಕ್ಕಿಂತ ಹೆಚ್ಚು ಸಾವು ನೋವು ಕಾಣಿಸಿಕೊಂಡಿತ್ತು, ಆದರೆ ಈ ಬಾರಿಯ ಸಾವಿನ ಪ್ರಮಾಣ ಅಷ್ಟಿಲ್ಲ. ಸೋಂಕಿತರು ಹೆಚ್ಚಾಗಿ ಪತ್ತೆಯಾಗುತ್ತಿರುವ ಕಾರಣ ಜನರಲ್ಲಿ ಆತಂಕ ಮೂಡುತ್ತಿದೆ ಅಷ್ಟೇ ಎಂದು ಹೇಳಿದರು.

ಬಹಳ ವಿಶೇಷವಾಗಿ ನಾವು ಜನರಿಗೆ ಮನವಿ ಮಾಡುವುದೇನೆಂದ್ರೆ, ಸರ್ಕಾರವೂ ಈ ಬಗ್ಗೆ ಬಿಗಿ ಸೂಚನೆಗಳನ್ನ ನೀಡಿದ್ದೇವೆ. ಜನರು ಅನಗತ್ಯವಾಗಿ ಓಡಾಡುವುದನ್ನ ತಪ್ಪಿಸಬೇಕು, ಹೆಚ್ಚಾಗಿ ಗುಂಪು ಸೇರುವುದನ್ನ ಬಿಡಬೇಕು. ಮಾಸ್ಕ್​ ಧರಿಸಿ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಬೇಕು. ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಶುಚಿತ್ವ ಕಾಪಾಡಿಕೊಳ್ಳಬೇಕು, ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನ ಸೇವನೆ ಮಾಡಬೇಕು. ನಮ್ಮ ಅದೃಷ್ಟ ನಮಗೆ ಲಸಿಕೆ ಲಭ್ಯವಿದೆ ಇದನ್ನ ತೆಗೆದುಕೊಳ್ಳುವವರಲ್ಲಿ ನಾವೇ ಮೊದಲಿಗರಾಗಬೇಕು ಎಂದು ಸಲಹೆ ನೀಡಿದ್ದಾರೆ.

ಈ ವೈರೆಸ್​ನ ಬಗ್ಗೆ ಏಮ್ಸ್​ ಆಸ್ಪತ್ರೆಯ ಡಾ. ಗುಲೇರಿಯಾ ಒಂದು ಮಾತನ್ನ ಹೇಳಿದ್ದಾರೆ. ಈ ರೂಪಾಂತರಿ ನಮ್ಮೊಂದಿಗೆ ಚೆಸ್​ ಆಟವಾಡುತ್ತಿದೆ, ನಾವು ಒಂದು ಪಾನ್​ ಚಲಾಯಿಸಿದರೆ ಅದು ಇನ್ನೊಂದು ಪಾನ್​ ಚಲಾಯಿಸುತ್ತಿದೆ. ಸೂಕ್ಷವಾಗಿ ಇದರ ಎಲ್ಲಾ ಗುಣವನ್ನ ಅರಿಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಎಂದು ಸುಧಾಕರ್​ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!