ಕ್ಯಾನ್ಸರ್‌ ಪೀಡಿತ ಸ್ನೇಹಿತನ ಚಿಕಿತ್ಸೆಗೆ ಸರ ಕದ್ದ ಗೆಳೆಯರು

Kannadaprabha News   | Asianet News
Published : Jan 05, 2021, 07:56 AM IST
ಕ್ಯಾನ್ಸರ್‌ ಪೀಡಿತ ಸ್ನೇಹಿತನ ಚಿಕಿತ್ಸೆಗೆ ಸರ ಕದ್ದ ಗೆಳೆಯರು

ಸಾರಾಂಶ

ಸರ​ಗ​ಳ್ಳ​ತನ ಮಾಡು​ತ್ತಿದ್ದ ಇಬ್ಬರು ಆರೋ​ಪಿ​ಗ​ಳು ಅರೆಸ್ಟ್ |ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ದ್ದ  ಸ್ನೇಹಿ​ತನ ಚಿಕಿತ್ಸೆಗಾಗಿ ಕಳ್ಳತನ 

ಬೆಂಗಳೂರು(ಜ.05): ಅನಾ​ರೋ​ಗ್ಯ​ಕ್ಕೀ​ಡಾ​ಗಿದ್ದ ಸ್ನೇಹಿ​ತನ ಚಿಕಿ​ತ್ಸೆ​ಗಾಗಿ ಸರ​ಗ​ಳ್ಳ​ತನ ಮಾಡು​ತ್ತಿದ್ದ ಇಬ್ಬರು ಆರೋ​ಪಿ​ಗ​ಳನ್ನು ವಿ.ವಿ​.ಪುರ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾ​ರೆ. ಮಂಡ್ಯದ ಮಳ​ವಳ್ಳಿ ಮೂಲದ ಮಂಜು​ನಾಥ್‌ ಮತ್ತು ಮೈಸೂ​ರಿನ ನರ​ಸೀ​ಪುರ ನಿವಾಸಿ ಮರಿ​ಸ್ವಾ​ಮಿ ಬಂಧಿ​ತರು. ಆರೋ​ಪಿ​ಗ​ಳಿಂದ ಒಂದು ಚಿನ್ನದ ಸರ ವಶಕ್ಕೆ ಪಡೆ​ಯ​ಲಾ​ಗಿದೆ ಎಂದು ಪೊಲೀ​ಸರು ಹೇಳಿ​ದ​ರು.

ಇತ್ತೀ​ಚೆಗೆ ವಿವಿ​ಪು​ರಂನ ಸಜ್ಜ​ನ್‌​ರಾವ್‌ ರಸ್ತೆ ಬಳಿ ಆರೋ​ಪಿ​ಗ​ಳಿ​ಬ್ಬರು ಅನು​ಮಾ​ನಾ​ಸ್ಪ​ದ​ವಾಗಿ ನಿಂತಿ​ದ್ದರು. ಇದೇ ವೇಳೆ ಗಸ್ತಿ​ನ​ಲ್ಲಿದ್ದ ಎಎ​ಸ್‌ಐ ಶಿವ​ಕು​ಮಾರ್‌ ವಿಚಾ​ರಣೆ ನಡೆ​ಸಿದ್ದು, ಗೊಂದಲದ ಹೇಳಿಕೆ ನೀಡಿ​ದ್ದರು.

ಏಪ್ರಿಲ್‌ನಿಂದ ಮತ್ತಷ್ಟು ತೆರಿಗೆ ಭಾರ: ಶೇ.2ರಷ್ಟು ಹೊಸದಾಗಿ ಭೂ ಸಾರಿಗೆ ಉಪ ಕರ

ಅನು​ಮಾ​ನ​ಗೊಂಡು ಠಾಣೆಗೆ ಕರೆ​ದೊಯ್ದು ಪ್ರಶ್ನಿ​ಸಿ​ದಾಗ ಸ್ನೇಹಿ​ತ ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ದ್ದು, ಆತನ ಚಿಕಿ​ತ್ಸೆ​ಗಾಗಿ ಸರ​ಗ​ಳ್ಳ​ತನ ಮಾಡು​ತ್ತಿ​ರು​ವು​ದಾ​ಗಿ​ ಹೇ​ಳಿಕೆ ನೀಡಿದ್ದರು. ಆದರೆ, ಈ ಬಗ್ಗೆ ಯಾವುದೇ ದಾಖ​ಲೆ​ಗಳು ಇಲ್ಲ

 ಚಾಮ​ರಾ​ಜ​ನ​ಗ​ರ​ ಜಿಲ್ಲೆ​ಯಲ್ಲಿ ಚಿನ್ನದ ಸರ ಕಳವು ಮಾಡಿ, ಬೆಂಗ​ಳೂ​ರಿ​ನ​ಲ್ಲಿ ಮಾರಾ​ಟಕ್ಕೆ ಸಿದ್ಧತೆ ನಡೆ​ಸಿ​ದ್ದರು ಎಂಬುದು ಗೊತ್ತಾ​ಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀ​ಸರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ