ಕನ್ನಡ ಹೋರಾಟಗಾರನೋ? ಕಾಂಗ್ರೆಸ್ ಪಕ್ಷದ ಗುಪ್ತ ವಕ್ತಾರನೋ.? ಮೋದಿ-ಬಿಎಸ್‌ವೈ ವಿರುದ್ಧ ಹೇಳಿಕೆ, ವಾಟಾಳ್‌ಗೆ ಮಂಡ್ಯ ಬಿಜೆಪಿ ಎಚ್ಚರಿಕೆ!

Published : May 13, 2026, 12:59 PM ISTUpdated : May 13, 2026, 01:03 PM IST
Mandya BJP Protests Against Vatal Nagaraj Over Derogatory Remarks Against PM Modi and BSY

ಸಾರಾಂಶ

ಪ್ರಧಾನಿ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿದ ಹೇಳಿಕೆಯಿಂದಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ವಾಟಾಳ್ ಅವರನ್ನು ಕಾಂಗ್ರೆಸ್ ಗುಪ್ತ ವಕ್ತಾರ ಎಂದು ಆರೋಪಿಸಿದರು.

ಮಂಡ್ಯ (ಮೇ.13): ಕನ್ನಡ ಹೋರಾಟಗಾರ ವಾಟಾಳ್(Vatal Nagaraj) ಅವರು ಪ್ರಧಾನಿ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ವಿರುದ್ಧ ನೀಡಿದ ಹೇಳಿಕೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ವಾಟಾಳ್ ಹೇಳಿಕೆಗೆ ಕೆರಳಿದ ಮಂಡ್ಯ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಸಂಜಯ್ ವೃತ್ತದಲ್ಲಿ ಪ್ರತಿಭಟನೆ, ವಾಟಾಳ್ ವಿರುದ್ಧ ಕಿಡಿ

ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ವಾಟಾಳ್ ನಾಗರಾಜ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 'ವಾಟಾಳ್ ನಾಗರಾಜ್ ಕನ್ನಡ ಹೋರಾಟಗಾರನ ಮುಖವಾಡಲ್ಲಿರುವ ಕಾಂಗ್ರೆಸ್ ಪಕ್ಷದ ಗುಪ್ತ ವಕ್ತಾರ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್ ಭಾವಚಿತ್ರ ಹರಿದು ಚಪ್ಪಲಿಯಿಂದ ತುಳಿದ ಕಾರ್ಯಕರ್ತರು

ಪ್ರಧಾನಿ ಮೋದಿ, ಬಿಎಸ್‌ವೈ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಕಾರ್ಯಕರ್ತರು ವಾಟಾಳ್ ಭಾವಚಿತ್ರ ಹರಿದು ಹಾಕಿದರು. ಕೆಲವರು ಭಾವಚಿತ್ರವನ್ನು ಚಪ್ಪಲಿಯಿಂದ ತುಳಿದು ಆಕ್ರೋಶ ಹೊರಹಾಕಿದರು.

ಹೋರಾಟ ಮಾಡಿ.. ರಾಜಕಾರಣ ಬೇಡ..!

ವಾಟಾಳರೇ ನೀವು ಕನ್ನಡ ಹೋರಾಟಗಾರರಾಗಿದ್ದರೆ ಕನ್ನಡದ ಪರ ಹೋರಾಟ ಮಾಡಿ. ಆದರೆ ಹೋರಾಟದ ಹೆಸರಲ್ಲಿ ರಾಜಕೀಯ ಮಾಡ ಕಾಂಗ್ರೆಸ್‌ಪಕ್ಷದ ಗುಪ್ತ ವಕ್ತಾರರಂತೆ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಯಡಿಯೂರಪ್ಪ ಬಗ್ಗೆ ಮಾತಾಡೋ ಮುನ್ನ ಎಚ್ಚರ

ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಬಾರದು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಾಟಾಳ್ ನಾಗರಾಜ್ ಮಂಡ್ಯಕ್ಕೆ ಕಾಲಿಡಬೇಕಾದರೆ ಮೊದಲು ರಾಜ್ಯದ ಜನತೆ ಹಾಗೂ ಯಡಿಯೂರಪ್ಪ ಅವರ ಅಭಿಮಾನಿಗಳ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಬೆಲೆ ಏರಿಕೆ ಶಾಕ್ ಕೊಟ್ಟ ರಾಜ್ಯ ಸರ್ಕಾರ, ಇಂದಿನಿಂದ ದರ ಹೆಚ್ಚಳ, ಇಲ್ಲಿದೆ ಲಿಸ್ಟ್
ಸಚಿವ ಡಿ ಸುಧಾಕರ್ ಸಾವಿಗೆ ಬಿಗ್ ಟ್ವಿಸ್ಟ್, ಅನಾರೋಗ್ಯವಾ? ನಿಗೂಢ ಶಕ್ತಿಗಳ ಆಟವಾ? ನಿವಾಸದ ಬಳಿ ಪತ್ತೆಯಾಗಿದ್ದೇನು?