
ಬೀದರ್ (ನ.4) ಬೀದರ್ ನಗರದ ನೌಬಾದ್ ಬಳಿ ಕಲಬುರಗಿ-ಬೀದರ್ ಮಾರ್ಗದ ರೈಲ್ವೆ ಹಳಿಯ ಮೇಲೆ ಭಾರೀ ದುರಂತವೊಂದು ತಪ್ಪಿದೆ. ಬೈಕ್ ಸವಾರನೊಬ್ಬ ರೈಲು ಹಳಿಯ ಮೇಲೆ ಬೈಕ್ ಬಿಟ್ಟ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಬೈಕ್ ಸವಾರ ಜಮೀನಿಗೆ ತೆರಳಲು ರೈಲು ಹಳ್ಳಿ ದಾಟಲು ಯತ್ನಿಸಿದ್ದಾನೆ. ವಾಹನವನ್ನ ರೈಲ್ವೆ ಹಳಿ ಮೇಲೆ ಚಲಾಯಿಸುವಾಗ ರೈಲು ಬರುವುದು ಕಂಡು ಬೈಕ್ ರೈಲ್ವೆ ಹಳಿ ಮೇಲೆಯೇ ಬಿಟ್ಟು ಪಾರಾಗಿದ್ದಾನೆ. ಆದರೆ ಇದನ್ನ ದೂರದಿಂದಲೇ ಗಮನಿಸಿದ ರೈಲು ಚಾಲಕ ತಕ್ಷಣ ರೈಲು ನಿಲ್ಲಿಸಲು ಪ್ರಯತ್ನಿಸಿದ್ದರೂ, ಸಂಪೂರ್ಣ ನಿಲ್ಲದೆ ಬೈಕ್ಗೆ ಡಿಕ್ಕಿಯಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ರೈಲ್ವೆ ಹಳಿ ದಾಟುವಾಗ ಎರಡು ಬದಿ ನೋಡಿ ಬೈಕ್ ಚಲಾಯಿಸುವುದು ಸಮಾನ್ಯ. ಆದರೆ ರೈಲ್ವೆ ಹಳಿ ಮೇಲೆ ಬೈಕ್ ಚಲಾಯಿಸಿ ಬೈಕ್ ಹಳಿಮೇಲೆ ಬಿಟ್ಟು ಪರಾರಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ರೈಲ್ವೆ ಚಾಲಕನ ಪ್ರಯತ್ನದಿಂದ ದುರಂತ ತಪ್ಪಿದೆ. ಒಂದು ವೇಳೆ ಬೈಕ್ನಿಂದ ಹಳಿ ತಪ್ಪಿದ್ದರೆ ರೈಲ್ವೆ ಪ್ರಯಾಣಿಕರ ಗತಿಯೇನು? ಈ ರೀತಿಯ ಘಟನೆಗಳನ್ನು ತಡೆಯಲು ಸಾರ್ವಜನಿಕರಿಗೆ ರೈಲು ಹಳ್ಳಿಗಳ ಬಳಿ ಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ