Ramanagara: ರಸ್ತೆಯಲ್ಲಿ ಹಾಡಹಗಲೇ ಎಣ್ಣೆಪಾರ್ಟಿ: ಮೂವರು ಪೊಲೀಸರು ಅಮಾನತು

Published : Jun 24, 2023, 11:10 AM IST
Ramanagara: ರಸ್ತೆಯಲ್ಲಿ ಹಾಡಹಗಲೇ ಎಣ್ಣೆಪಾರ್ಟಿ: ಮೂವರು ಪೊಲೀಸರು ಅಮಾನತು

ಸಾರಾಂಶ

ಸಮ​ವಸ್ತ್ರದಲ್ಲಿರುವಾಗ ರಸ್ತೆಯಲ್ಲಿ ಮದ್ಯ ಸೇವಿಸಿ, ಹಾಡಹಗಲೇ ಮೋಜು ಮಸ್ತಿ ಮಾಡಿದ ರಾಮನಗರ ಜಿಲ್ಲೆ ಮಾಗಡಿ ಪೊಲೀಸ್‌ ಠಾಣೆಯ ಇಬ್ಬರು ಎಎಸ್‌ಐ ಮತ್ತು ಪೊಲೀಸ್‌ ಪೇದೆಯನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಕಾರ್ತಿಕ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ. 

ಮಾಗಡಿ/ರಾಮ​ನ​ಗ​ರ (ಜೂ.24): ಸಮ​ವಸ್ತ್ರದಲ್ಲಿ​ರುವ ಎ​ಎಸ್‌ಐ, ಪೇದೆ ಸೇರಿ​ದಂತೆ ನಾಲ್ವರು ಮದ್ಯ ಸೇವಿಸಿ ಮೋಜು​ಮಸ್ತಿ ಮಾಡಿ​ರುವ ವಿಡಿ​ಯೋ​ವೊಂದು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದೆ. ಮಾಗಡಿ ಪೊಲೀಸ್‌ ಠಾಣೆಯ ಎಎಸ್‌ಐಗಳಾದ ಮಂಜು​ನಾಥ್‌, ಗೋವಿಂದಯ್ಯ ಮತ್ತು ಪೇದೆ ನಾರಾ​ಯಣಮೂರ್ತಿ ಮೈಮೇಲೆ ಪ್ರಜ್ಞೆ ಇಲ್ಲ​ದಷ್ಟು ಕಂಠ​ಪೂರ್ತಿ ಮದ್ಯ ಸೇವಿಸಿದವ​ರು. ಇವ​ರೊಂದಿಗೆ ಇನ್ನಿ​ಬ್ಬರು ಮೋಜು​ ಮು​ಸ್ತಿ​ನಲ್ಲಿ ತೊಡ​ಗಿ​ದ್ದರು.

ಮಾಗಡಿ ಠಾಣೆ​ಯಿಂದ ಕೈದಿ​ಯೊ​ಬ್ಬ​ನನ್ನು ರಾಮ​ನ​ಗ​ರ ಜಿಲ್ಲಾ ಕಾರಾ​ಗೃ​ಹಕ್ಕೆ ಬಿಡಲು ಎಎಸ್‌ಐ ಮತ್ತು ಪೇದೆ ಕಾರಿ​ (ಕೆಎ 42, ಎನ್‌ 2652)ನಲ್ಲಿ ಆಗ​ಮಿ​ಸಿದ್ದಾರೆ. ಮಾಗಡಿಗೆ ವಾಪ​ಸ್ಸಾ​ಗು​ವಾಗ ರಸ್ತೆ ಬದಿ​ಯ​ಲ್ಲಿಯೇ ಮದ್ಯ ಸೇವನೆ ಮಾಡಿ​ದ್ದಾರೆ. ಮಾತಿನ ಮೇಲೆ ಹಿಡಿ​ತವೇ ಸಿಗ​ದಷ್ಟುಕುಡಿದು ತೂರಾ​ಡು​ತ್ತಿದ್ದ ಮಂಜು​ನಾಥ್‌ ಕಾರಿ​ನಲ್ಲಿಯೇ ಸಮ​ವಸ್ತ್ರ ಕಳ​ಚಿಟ್ಟಿ​ದ್ದಾ​ರೆ. ಈ ವೇಳೆ ರಸ್ತೆ​ಯಲ್ಲಿ ಹೋಗು​ತ್ತಿದ್ದ ಕಾರು ಚಾಲ​ನೊಂದಿಗೆ ಕಿರಿಕ್‌ ತೆಗೆದು ಅವಾಚ್ಯ ಶಬ್ದ​ಗ​ಳಿಂದ ನಿಂದಿ​ಸಿ​ದ್ದಾನೆ. ಈ ದೃಶ್ಯ​ಗ​ಳನ್ನು ವ್ಯಕ್ತಿ​ಯೊಬ್ಬ ಸೆರೆ ಹಿಡಿ​ದಿ​ರುವ ವಿಡಿಯೋ ವೈರಲ್‌ ಆಗಿದೆ.

ಬಸ್‌ಗಳಲ್ಲಿ ಸ್ತ್ರೀಯರ ‘ಶಕ್ತಿ ಪ್ರದರ್ಶನ’: ವೃದ್ಧೆಗೆ ಕಪಾಳಮೋಕ್ಷ ಮಾಡಿದ ಲೇಡಿ ಕಂಡಕ್ಟರ್

ಇಬ್ಬರು ಎಎಸ್‌ಐ, ಪೇದೆ​ ಅಮಾ​ನ​ತು: ಸಮ​ವ​ಸ್ತ್ರ​ದಲ್ಲಿ ಇರು​ವಾ​ಗಲೇ ಮದ್ಯ ಸೇವಿಸಿ ಸಾರ್ವ​ಜ​ನಿ​ಕ​ರೊಂದಿಗೆ ಅನು​ಚಿ​ತ​ವಾಗಿ ವರ್ತಿ​ಸಿದ ಇಬ್ಬರು ಎಎಸ್‌ಐ ಮತ್ತು ಓರ್ವ ಮುಖ್ಯ ಪೇದೆ​ಯನ್ನು ಅಮಾ​ನತ್ತು ಮಾಡಿ​ರು​ವು​ದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಕಾರ್ತಿಕ್‌ ರೆಡ್ಡಿ ತಿಳಿ​ಸಿ​ದ್ದಾರೆ. ಎಎಸ್‌ಐಗಳಾದ ಮಂಜು​ನಾಥ್‌, ಗೋವಿಂದಯ್ಯ ಮತ್ತು ಪೇದೆ ನಾರಾ​ಯ​ಣ​ಮೂರ್ತಿ ದೀರ್ಘಾ​ವಧಿ ರಜೆ​ಯ​ಲ್ಲಿ​ದ್ದರು. ನಿನ್ನೆ ಕರ್ತ​ವ್ಯಕ್ಕೆ ಹಾಜ​ರಾ​ಗುವ ವೇಳೆ ಮದ್ಯ ಸೇವಿಸಿ ಅನು​ಚಿ​ತ​ವಾಗಿ ವರ್ತನೆ ತೋರಿ​ದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮೂವರನ್ನು ಅಮಾ​ನತು ಮಾಡ​ಲಾ​ಗಿದೆ. ಇಂತಹ ಪ್ರಕ​ರ​ಣ​ಗ​ಳಿಂದ ಪೊಲೀಸ್‌ ಇಲಾ​ಖೆಗೆ ಕೆಟ್ಟ ಹೆಸರು ಬರು​ತ್ತದೆ. ಹಾಗಾಗಿ ಮೂವರು ಅಮಾ​ನತು ಮಾಡಿ ಇಲಾಖೆ ವಿಚಾ​ರಣೆ ನಡೆ​ಸು​ತ್ತೇವೆ ಎಂದು ಕಾರ್ತಿಕ್‌ ರೆಡ್ಡಿ ತಿಳಿ​ಸಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ