ಕರಾವಳಿಗರಿಗೆ ಸಂತಸ, ಮಡ್ಗಾಂವ್‌- ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ ಬದಲಾವಣೆ

Published : Oct 15, 2023, 01:17 PM IST
ಕರಾವಳಿಗರಿಗೆ ಸಂತಸ, ಮಡ್ಗಾಂವ್‌- ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ ಬದಲಾವಣೆ

ಸಾರಾಂಶ

ಮಡ್ಗಾಂವ್‌-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌(10107)ನ ವೇಳಾಪಟ್ಟಿಯನ್ನು ಪ್ರಯಾಣಿಕ ಸ್ನೇಹಿಯಾಗಿ ಪರಿಷ್ಕರಿಸಿ ತಕ್ಷಣದಿಂದಲೇ ಕೊಂಕಣ ರೈಲ್ವೆ ಅನುಷ್ಠಾನಿಸಿದೆ.

ಮಂಗಳೂರು (ಅ.15): ಮಡ್ಗಾಂವ್‌-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌(10107)ನ ವೇಳಾಪಟ್ಟಿಯನ್ನು ಪ್ರಯಾಣಿಕ ಸ್ನೇಹಿಯಾಗಿ ಪರಿಷ್ಕರಿಸಿ ತಕ್ಷಣದಿಂದಲೇ ಕೊಂಕಣ ರೈಲ್ವೆ ಅನುಷ್ಠಾನಿಸಿದೆ.

ಇದರಿಂದಾಗಿ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ರೈಲಿನ ರೈಲಿನ ವೇಳಾಪಟ್ಟಿಯನ್ನು ಸಾಮಾನ್ಯ ಪ್ರಯಾಣಿಕ ವರ್ಗವನ್ನು ಗಮನದಲ್ಲಿರಿಸಿ ಪರಿಷ್ಕರಿಸುವಂತೆ ರೈಲ್ವೆ ಹೋರಾಟಗಾರರು ನಿರಂತರ ನಡೆಸುತ್ತಿದ್ದ ಹೋರಾಟಕ್ಕೆ ಸಚಿವಾಲಯ ಕೊನೆಗೂ ಸ್ಪಂದಿಸಿದೆ.

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗಡಿ ಗುರುತು, ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್‌

ಪ್ರಸ್ತಾವಿತ ರೈಲು ವೇಳಾಪಟ್ಟಿ ಪರಿಷ್ಕರಿಸುವಂತೆ ಕೊಂಕಣ ರೈಲ್ವೆ ಕಳುಹಿಸಿದ ಪ್ರಸ್ತಾವನೆಗೆ ಕೇಂದ್ರ ಸಚಿವಾಲಯ ಅನುಮೋದನೆ ನೀಡಿದೆ. ಈ ಕುರಿತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಇಲ್ಲಿಯ ತನಕ ಈ ರೈಲು ಬೆಳಗ್ಗೆ 5.15ಕ್ಕೆ ಮಡ್ಗಾಂವ್‌ನಿಂದ ಹೊರಟು ಮಧ್ಯಾಹ್ನ 12.15ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಇನ್ನು ಈ ರೈಲು ಮಡ್ಗಾಂವ್‌ನಿಂದ ಮುಂಜಾನೆ 4 ಗಂಟೆಗೆ ಹೊರಟು ಸುರತ್ಕಲ್‌ಗೆ ಬೆಳಗ್ಗೆ 10 ಗಂಟೆಗೆ ತಲುಪಿ ಮಂಗಳೂರು ಸೆಂಟ್ರಲ್‌ಗೆ 11 ಗಂಟೆಗೆ ಮುನ್ನ ತಲುಪಲಿದೆ.

ಒಡಿಶಾ ರೈಲು ದುರಂತದ ಬಳಿಕ ಎಚ್ಚೆತ್ತ ಇಲಾಖೆ, ರೈಲು ಚಾಲಕರಿಗೆ ಹೊಸ ನಿಯಮ

ವಾಪಸ್ ಪ್ರಯಾಣ ಯಥಾಸ್ಥಿತಿ: ಮಡ್ಗಾಂವ್‌ನಿಂದ ಮಂಗಳೂರಿಗೆ ಪ್ರಯಾಣಿಸುವ ಸಮಯ ಮಾತ್ರ ಪರಿಷ್ಕರಣೆಯಾಗಿದೆ. ಮಂಗಳೂರಿನಿಂದ ಮಡ್ಗಾಂವ್‌ಗೆ ಸಂಜೆ ವಾಪಸ್ ತೆರಳುವ ಸಮಯ ಈ ಹಿಂದೆ ಇದ್ದಂತೆ ಸಂಜೆ 3.30ಕ್ಕೆ ಇದೆ. ಇದನ್ನು ಸಂಜೆ 5 ಗಂಟೆಗೆ ಬದಲಾಯಿಸಿದರೆ ರೈಲು ಮಡ್ಗಾಂವ್‌ ತಲುಪುವಾಗ ಮಧ್ಯರಾತ್ರಿ ಸುಮಾರು 12 ಗಂಟೆ ಆಗಬಹುದು. ನಿತ್ಯ ಪ್ರಯಾಣಿಕರು ಇಷ್ಟು ತಡವಾಗಿ ಪ್ರಯಾಣಿಸುವುದಿಲ್ಲ. ಅಲ್ಲದೆ ಸಂಜೆ ಮಂಗಳೂರಿನಿಂದ ಮಡ್ಗಾಂವ್‌ಕಡೆಗೆ ತೆರಳಲು ಇತರ ರೈಲು ಸೌಕರ್ಯವೂ ಇದೆ ಎನ್ನುವುದು ರೈಲ್ವೆ ಸಚಿವಾಲಯದ ಲೆಕ್ಕಾಚಾರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್