
ಬೆಂಗಳೂರು, [ಡಿ.06]: ರಾಜ್ಯದಲ್ಲಿ ಈರುಳ್ಳಿ [ಉಳ್ಳಾಗಡ್ಡಿ] ಬೆಲೆ ಏರಿಕೆ ಪರ್ವ ಮುಂದುವರಿದಿದ್ದು,ಪ್ರತಿ ಕೆಜಿಗೆ150ರ ಗಡಿ ದಾಟಿದೆ. ಬೆಂಗಳೂರಿನ ಎಪಿಎಂಸಿ ಮಾರ್ಕೆಟ್ ಗೆ ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಈರುಳ್ಳಿ ಮೂಟೆಗಳು ಬರುತ್ತಿದ್ದವು .
ಆದ್ರೆ ಇದೀಗ ದಿನವೊಂದಕ್ಕೆ 30 ರಿಂದ 35 ಸಾವಿರ ಚೀಲಗಳಷ್ಟೇ ಈರುಳ್ಳಿ ಬರುತ್ತಿವೆ. ಹೀಗಾಗಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಕೆಜಿ ಮೇಲೆ 15 ರೂಪಾಯಿಗಳಷ್ಟು ಬೆಲೆ ಏರಿಕೆ ಕಾಣುತ್ತಿದ್ದು, ಜನರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ.
ಬಿರಿಯಾನಿ ಜೊತೆ ಈರುಳ್ಳಿ ಕೊಡದ್ದಕ್ಕೆ ಮಾರಾಮಾರಿ!
ಇದರ ನಡುವೆ ಅಕ್ರಮವಾಗಿ ಈರುಳ್ಳಿ ಶೇಖರಣೆ ಮಾಡಿದ ಹಿನ್ನೆಲೆಯಲ್ಲಿ ಯಶವಂತಪುರದ ಆರ್ಎಂಸಿ ಯಾರ್ಡ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಮ್ಯಾಂಡ್ ಹೆಚ್ಚು ಮಾಡಲು ಏಜೆಂಟ್ಗಳು ಈರುಳ್ಳಿ ಶೇಖರಣೆ ಮಾಡಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿದ್ದಾರೆ.
ಒಂದು ವೇಳೆ ಈರುಳ್ಳಿಗೆ ನ್ಯಾಯಬದ್ಧ ಬೆಲೆ ನೀಡುವಲ್ಲಿ ತೊಂದರೆಯಾದರೆ ಕೂಡಲೇ ಮಾಹಿತಿ ನೀಡುವಂತೆ ಅಧಿಕಾರಿಗಳು ರೈತರಿಗೆ ಸೂಚಿಸಿದರು.
ಈ ಈರುಳ್ಳಿ ಯಾವ ಮಟ್ಟಿಗೆ ಹೋಗಿದೆ ಅಂದ್ರೆ, ಹೊಲದಲ್ಲಿ ಇರುವ ಈರುಳ್ಳಿಯನ್ನೇ ಕಳ್ಳತನ ಮಾಡಿಸುವಷ್ಟು ಡಿಮ್ಯಾಂಡ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಮಾರಾಮಾರಿಗೆ ಕಾರಣವಾಗಿದೆ.
ಮೆಣಸಿನಕಾಯಿ ಇಲ್ಲದ ಚಿತ್ರಾನ್ನ ಅರಗಿಸಿಕೊಳ್ಳಹುದು. ಶೇಂಗಾ ಇಲ್ಲದ ಚಿತ್ರಾನ್ನ ನುಂಗಿ ನೀರು ಕುಡಿಯಬಲ್ಲರು. ಆದರೆ, ನಾನ್ ವೆಜ್ ಊಟದ ಜತೆ ಈರುಳ್ಳಿ ಇಲ್ಲಂದ್ರೆ ಸಹಿಸಿಕೊಳ್ಳುತ್ತಾರೆಯೇ..? ನೋ ವೇ ಚಾನ್ಸೇ ಇಲ್ಲ.
ಬಿರಿಯಾನಿ ಜತೆ ಈರುಳ್ಳಿಗಾಗಿ ಹೊಟೇಲ್ ಹಾಗೂ ಗ್ರಾಹಕರ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆ ನಡೆದಿದ್ದು, ಬೆಳಗಾವಿಯಲ್ಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ