
ಬೆಂಗಳೂರು (ಮೇ.18): ತುರ್ತು ಸಂದರ್ಭಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಕೆಎಸ್ಆರ್ಟಿಸಿಯು ‘ಸಾರಿಗೆ ಸುರಕ್ಷಾ’ ಹೆಸರಿನ ಆಕ್ಸಿಜನ್, ಐಸಿಯು ಸೌಲಭ್ಯವುಳ್ಳ ‘ಸಂಚಾರಿ ಐಸಿಯು ಬಸ್’ವೊಂದನ್ನು ಸೇವೆಗೆ ಸಜ್ಜುಗೊಳಿಸಿದೆ.
ನಿಗಮದ ಬೆಂಗಳೂರು ಕೇಂದ್ರ ವಿಭಾಗದ ಕೇಂದ್ರೀಯ ಕಾರ್ಯಾಗಾರದಲ್ಲಿ ಸುಮಾರು ನಾಲ್ಕು ಲಕ್ಷ ರು. ವೆಚ್ಚದಲ್ಲಿ ಈ ಐಸಿಯು ಸೌಲಭ್ಯದ ಬಸ್ ಸಿದ್ಧಪಡಿಸಲಾಗಿದೆ. ಕಾರ್ಯಾಗಾರದ ತಾಂತ್ರಿಕ ಸಿಬ್ಬಂದಿ ತಂಡ ಬಸ್ ಸಜ್ಜಗೊಳಿಸಿದೆ. ಈ ಬಸ್ಸಿನಲ್ಲಿ ಐದು ಬೆಡ್ ಅಳವಡಿಸಿದ್ದು, ಪ್ರತಿ ಬೆಡ್ಗೂ ಆಕ್ಸಿಜನ್ ಸೌಲಭ್ಯ ಕಲ್ಪಿಸಲಾಗಿದೆ. ಅಂತೆಯೇ ಸೋಂಕಿತರ ರಕ್ತದೊತ್ತಡ, ಆಕ್ಸಿಜನ್ ಮಟ್ಟ, ಇಸಿಜಿ, ತಾಪಮಾನ ಮೇಲ್ವಿಚಾರಣೆ ಮಾಡಲು ಮಾನಿಟರ್ಗಳನ್ನು ಅಳವಡಿಸಲಾಗಿದೆ. ದಿನದ 24 ತಾಸು ಸೋಂಕಿತರಿಗೆ ವೆಂಟಿಲೇಟರ್ ಹಾಗೂ ಆಕ್ಸಿಜನ್ ಪೂರೈಸಲು ಅನುಕೂಲವಾಗುವಂತೆ ಜನರೇಟರ್ ಸಹ ವ್ಯವಸ್ಥೆ ಮಾಡಲಾಗಿದೆ.
ಸಿದ್ದವಾಯ್ತು ಆಕ್ಸಿಜನ್ ಬಸ್, ಕೊರೊನಾ ಸಂಕಷ್ಟದ ನಡುವೆ ಶುಭ ಸಮಾಚಾರಗಳಿವು
ಬಸ್ನಲ್ಲಿ ಎರಡು ಆಕ್ಸಿಜನ್ ಜಂಬೋ ಸಿಲಿಂಡರ್ ಇರಿಸಲಾಗಿದೆ. ಐದು ಮಂದಿ ಏಕಕಾಲಕ್ಕೆ ಆಸ್ಪತ್ರೆ ಮಾದರಿಯಲ್ಲಿ ಬೆಡ್ನಲ್ಲಿ ಮಲಗಿ ಚಿಕಿತ್ಸೆ ಪಡೆಯಬಹುದು. ಶೀಘ್ರದಲ್ಲೇ ಈ ಸಂಚಾರ ಐಸಿಯು ಬಸ್ ಸೇವೆಗೆ ಚಾಲನೆ ನೀಡಲಾಗುವುದು. ನಗರದ ಯಾವುದಾದರೂ ಒಂದು ಸರ್ಕಾರಿ ಆಸ್ಪತ್ರೆ ಎದುರು ಈ ಸಂಚಾರಿ ಐಸಿಯು ಬಸ್ ನಿಲುಗಡೆ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಟಿ.ಎಸ್.ಲತಾ ಹೇಳಿದರು.
ಈ ಸಂಚಾರಿ ಐಸಿಯು ಬಸ್ ಸಿದ್ಧಪಡಿಸಲು ಸುಮಾರು 4 ಲಕ್ಷ ರು. ವೆಚ್ಚವಾಗಿದ್ದು, ನಿಗಮದಿಂದಲೇ ಭರಿಸಲಾಗಿದೆ. ಪ್ರಾಯೋಜಕರು ಸಿಕ್ಕರೆ ಇಂತಹ ಸಂಚಾರಿ ಐಸಿಯು ಬಸ್ಗಳ ಸಂಖ್ಯೆ ಹೆಚ್ಚಿಸಲಾಗುವುದು. ಅಂತೆಯೇ ಈಗಾಗಲೇ ಕೇಂದ್ರೀಯ ಕಾರ್ಯಾಗಾರದಲ್ಲಿ ಸಾರಿಗೆ ಸಂಜೀವಿನಿ ಹೆಸರಿನಲ್ಲಿ ಎರಡು ಆಕ್ಸಿಜನ್ ಬಸ್ ಸಿದ್ಧಪಡಿಸಿ, ಆನೇಕಲ್ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ