ಮಹಿಳಾ ಪ್ರಯಾಣಿಕರ ಜೊತೆ ಅನಾಗರೀಕನಂತೆ ವರ್ತಿಸಿದ ಕೆಎಸ್ಆರ್‌ಟಿಸಿ ಚಾಲಕ!

Published : Jun 16, 2023, 03:50 PM IST
ಮಹಿಳಾ ಪ್ರಯಾಣಿಕರ ಜೊತೆ ಅನಾಗರೀಕನಂತೆ ವರ್ತಿಸಿದ ಕೆಎಸ್ಆರ್‌ಟಿಸಿ ಚಾಲಕ!

ಸಾರಾಂಶ

ಉಚಿತ ಪ್ರಯಾಣ ಎಂದು ಬಸ್ಸಿನಲ್ಲಿ ದೇವರ ದರ್ಶನಕ್ಕೆ ಬಂದ ಮಹಿಳೆಯರ ಮೇಲೆ ಚಾಲಕ ಅನಾಗರಿಕನಂತೆ ವರ್ತಿಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಕ್ರಾಸ್ ಬಳಿ ನಡೆದಿದೆ.

ತುಮಕೂರು (ಜೂ.16) ಉಚಿತ ಪ್ರಯಾಣ ಎಂದು ಬಸ್ಸಿನಲ್ಲಿ ದೇವರ ದರ್ಶನಕ್ಕೆ ಬಂದ ಮಹಿಳೆಯರ ಮೇಲೆ ಚಾಲಕ ಅನಾಗರಿಕನಂತೆ ವರ್ತಿಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಕ್ರಾಸ್ ಬಳಿ ನಡೆದಿದೆ.

ಊರಿಗೆ ಹೋಗಲು ಪುಟ್ಟ ಕಂದಮ್ಮ  ಎತ್ತಿಕೊಂಡು ನಿಂತದ್ದ ಮಹಿಳೆ ಕಂಡೂ ಕರಗದ ಚಾಲಕನ ಮನಸ್ಸು .ಮಹಿಳೆಯರ ಮೇಲೆಯೇ ಬಸ್ ಹರಿಸಲು ಮುಂದಾಗಿದ್ದ ಸರ್ಕಾರಿ ಬಸ್ ಚಾಲಕ. ಸಾರಿಗೆ ಬಸ್ ಚಾಲಕನ ಅನಾಗರೀಕ ವರ್ತನೆ ಮೊಬೈಲ್ ನಲ್ಲಿ ಸೆರೆ ಹಿಡಿದ ಸ್ಥಳೀಯರು.

ಸಾರಿಗೆ ನೌಕರರಿಗೆ ಬಂಪರ್‌ ಕೊಡುಗೆ ನೀಡಿದ ಸಿದ್ದು ಸರ್ಕಾರ..!

ಕೊಳ್ಳೇಗಾಲದಿಂದ ಗೊರವನಹಳ್ಳಿ ಲಕ್ಷ್ಮೀ ದರ್ಶನಕ್ಕೆ ಬಂದಿದ್ದ ಮಹಿಳೆಯರು ಹಾಗೂ ಮಕ್ಕಳು.
ಸಂಜೆಯಿಂದ ಎರಡು ತಾಸು ಕಾದರೂ ಯಾವುದೇ ಬಸ್ ನಿಲ್ಲಿಸದ ಕಾರಣ ಬಸ್ ತಡೆಯಲು ಮುಂದಾದ ಮಹಿಳೆಯರು. ಈ ವೇಳೆ ಮಹಿಳೆಯರ ಮೇಲೆ ಚಾಲಕ ದುರ್ವರ್ತನೆ ತೋರಿದ್ದಾನೆ. ಈ ಬಗ್ಗೆ ಸ್ಥಳೀಯರ ದೂರು ನೀಡಿದ ಮೇರೆಗೆ  ಸ್ಥಳಕ್ಕೆ ಸಿಬ್ಬಂದಿ‌ ಸಹಿತ ಬಂದ ತಹಶೀಲ್ದಾರ್.

ಸಾಮಾನ್ಯ ಪ್ರಯಾಣಿಕರಂತೆ ಬಸ್‌ ಅಡ್ಡಲಾಗಿ ನಿಂತು ಬಸ್ ಹತ್ತಲು ಹೋದ ತಹಶೀಲ್ದಾರ್. ತಹಶೀಲ್ದಾರ್ ವಾಹನ ಕಂಡು ಸುಮಾರು 200 ಮೀಟರ್ ಮುಂದೆ ಹೋಗಿ ಬಸ್ ನಿಲ್ಲಿಸಿದ ಮತ್ತೊಬ್ಬ ಚಾಲಕ. ನಿಂತ ಬಸ್ ಬಳಿ ಹೋಗಿ ಚಾಲಕನಿಗೆ ಬುದ್ಧಿ ಹೇಳಿದ್ದಾರೆ. ಬಳಿಕ ತಹಶೀಲ್ದಾರ್ ಮುನಿಶಾಮ ರೆಡ್ಡಿ ಮಹಿಳೆಯರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತರುತ್ತಿದೆ ಬಸ್‌ ಪ್ರಯಾಣ

ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಸ್ಥಳೀಯ ಕೆಎಸ್ಆರ್‌ಟಿಸಿ  ಡಿಪೋ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮಕ್ಕೆ ಮುಂದಾದ ತಹಶೀಲ್ದಾರರು. ಸಾರಿಗೆ ಚಾಲಕರು ಪ್ರಯಾಣಿಕರೊಂದಿಗೆ ಇಂಥ ದುರ್ವರ್ತನೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟು ಮಹಿಳೆಯರಿಗೆ ಪ್ರಯಾಣದ ವ್ಯವಸ್ಥೆ ಮಾಡಿದ ತಹಸೀಲ್ದಾರ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!