ರೈತರನ್ನ ಎದುರು ಹಾಕಿಕೊಂಡ್ರೆ ನಿಮ್ಮ ಸರ್ಕಾರ ಉಳಿಯಲ್ಲ : ಸಿಎಂ ಸಿದ್ದರಾಮಯ್ಯಗೆ ವಿ ಕೋಡಿಹಳ್ಳಿ ಮತ್ತೆ ವಾರ್ನ್

Published : Nov 12, 2024, 07:49 PM IST
ರೈತರನ್ನ ಎದುರು ಹಾಕಿಕೊಂಡ್ರೆ ನಿಮ್ಮ ಸರ್ಕಾರ ಉಳಿಯಲ್ಲ : ಸಿಎಂ ಸಿದ್ದರಾಮಯ್ಯಗೆ ವಿ ಕೋಡಿಹಳ್ಳಿ ಮತ್ತೆ ವಾರ್ನ್

ಸಾರಾಂಶ

ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿವಾದ ಮುಂದುವರಿದರೆ ಸರ್ಕಾರ ಅಧಿಕಾರದಲ್ಲಿರೋದಿಲ್ಲ. ಕೂಡಲೇ ವಕ್ಫ್ ಬೋರ್ಡ್‌ಗೆ ರೈತರ ಜಮೀನು ವರ್ಗಾವಣೆ ಮಾಡುವುದು ಬಂದ್ ಮಾಡಿ ಎಂದು ಸರ್ಕಾರದ ವಿರುದ್ಡ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ  ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.

ಕೋಲಾರ (ನ.12): ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿವಾದ ಮುಂದುವರಿದರೆ ಸರ್ಕಾರ ಅಧಿಕಾರದಲ್ಲಿರೋದಿಲ್ಲ. ಕೂಡಲೇ ವಕ್ಫ್ ಬೋರ್ಡ್‌ಗೆ ರೈತರ ಜಮೀನು ವರ್ಗಾವಣೆ ಮಾಡುವುದು ಬಂದ್ ಮಾಡಿ ಎಂದು ಸರ್ಕಾರದ ವಿರುದ್ಡ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ  ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.

ಇಂದು ಕೋಲಾರದಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಜಮೀನುಗಳಿಗೆ ಕೈ ಹಾಕಿದರೆ ರೈತರು ಸರ್ಕಾರದ ವಿರುದ್ಧ ದಂಗೆ ಏಳಬೇಕಾಗುತ್ತೆ. ರೈತರನ್ನ ಎದುರುಹಾಕಿಕೊಂಡರೆ ನಿಮ್ಮ ಸರ್ಕಾರ ಧೂಳಿಪಟವಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಡ ತೀವ್ರ ವಾಗ್ದಾಳಿ ನಡೆಸಿದರು.

'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ರಾಜ್ಯದಲ್ಲಿ ರೈತರ ಆಸ್ತಿಗಳನ್ನ ವಕ್ಫ್ ಬೋರ್ಡ್ ಕಬಳಿಕೆ ಮಾಡ್ತಿದೆ. ವಕ್ಫ್ ವಿಚಾರವಾಗಿ ರಾಜಕೀಯ ಮಾಡಲು ಎರಡು ಪಕ್ಷಗಳ ಪ್ರಯತ್ನಿಸುತ್ತಿವೆ. 2015 ರಲ್ಲಿ ಮೊಕಾಶಿ ಟ್ರಸ್ಟ್ ಗೂ  ರೈತರ ಜಮೀನು ವರ್ಗಾವಣೆ ಆಗಿದೆ. ವಕ್ಪ್ ಬೋರ್ಡ್ ಹೆಸರಲ್ಲಿ ಬೇರೆ ಟ್ರಸ್ಟ್ ಗೂ ಜಮೀನು ವರ್ಗಾವಣೆ ಆಗಿದೆ. 2015 ರಲ್ಲು ರೈತರ ಆಸ್ತಿ ಕಬಳಿಕೆಯಾಗಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್ ಉತ್ತರಿಸಲಿ. ರಾಜ್ಯದಲ್ಲಿ ವಕ್ಪ್ ಬೋರ್ಡ್ ಹೆಸರಲ್ಲಿನ ಡೀಲಿಂಗ್ ನಿಲ್ಲಬೇಕು. ಹಾವೇರಿಯಲ್ಲಿ ರೈತನಿಗಾದ ಅನ್ಯಾಯದ ವಿರುದ್ಡ ಹೋರಾq ಮಾಡುತ್ತೇವೆ. ಖಾಸಗಿ ವ್ಯಕ್ತಿಯ ಟ್ರಸ್ಟ್‌ಗೆ ನೀಡಿರುವ ಭೂಮಿ ವಾಪಸ್ ನಾವೂ ಕಬ್ಜ ಮಾಡ್ತೇವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌