Published : Jul 03, 2025, 06:54 AM ISTUpdated : Jul 03, 2025, 11:55 PM IST

Karnataka News Live: Late Night Sleeping Effects Risks - ರಾತ್ರಿ ತಡವಾಗಿ ಮಲಗುವವರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚು!

ಸಾರಾಂಶ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತಂತೆ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಅತೃಪ್ತ ಮುಖಂಡರ ಬಣದಲ್ಲಿ ಸಂತಸ ತಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್‌, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹೋರಾಟ ಮಾಡಿದ್ದರು. ಇದೀಗ ಅವರ ಹೋರಾಟಕ್ಕೆ ಜಯ ಸಂದಂತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಚ್ಚಿ ಹಾಕಬಾರದು ಎಂಬ ಉದ್ದೇಶದಿಂದ ಬಸನಗೌಡ ಪಾಟೀಲ್ ಯತ್ನಾಳ್‌, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಮತ್ತು ನಾನು ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

 

11:55 PM (IST) Jul 03

Late Night Sleeping Effects Risks - ರಾತ್ರಿ ತಡವಾಗಿ ಮಲಗುವವರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚು!

ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಬೇಕು ಅಂತ ವೈದ್ಯರು ಹೇಳ್ತಾರೆ. ಹೊಸ ಸಂಶೋಧನೆಯ ಪ್ರಕಾರ, ತಡವಾಗಿ ಮಲಗುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Read Full Story

11:28 PM (IST) Jul 03

ರ‍್ಯಾಶ್ ಡ್ರೈವಿಂಗ್‌ನಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ವಿಮಾ ಪರಿಹಾರವಿಲ್ಲ, ಸುಪ್ರೀಂ ಆದೇಶ

ರ‍್ಯಾಶ್ ಡ್ರೈವಿಂಗ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ವಿಮಾ ಕಂಪನಿಗಳು ಯಾವುದೇ ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

Read Full Story

11:09 PM (IST) Jul 03

ಬೆಂಗಳೂರು ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣ - 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನ ಬಂಧನ

2013ರ ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಉಗ್ರ ಅಬೂಬಕರ್‌ನನ್ನು 30 ವರ್ಷಗಳ ನಂತರ ತಮಿಳುನಾಡು ಉಗ್ರ ನಿಗ್ರಹ ಪಡೆ ಬಂಧಿಸಿದೆ. ಬಾಂಬ್ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ ಅಬೂಬಕರ್, ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
Read Full Story

10:51 PM (IST) Jul 03

ಮೊಬೈಲ್​ ರೀಚಾರ್ಜ್​ ಮಾಡಿಸುವವರಿಗೆ ಶಾಕ್​ ಕೊಟ್ಟ ಟೆಲಿಕಾಂ ಪ್ರಾಧಿಕಾರ​! ಏನಿದು ಹೊಸ ಮೋಸ?

ಇಂದು ಮೊಬೈಲ್​ ರೀಚಾರ್ಜ್​ ಮಾಡದ ವ್ಯಕ್ತಿಗಳೇ ಇಲ್ಲ ಎನ್ನಬಹುದೇನೋ. ಅಂಥವರಿಗೆ ಇದೀಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ವಾರ್ನಿಂಗ್​ ಕೊಟ್ಟಿದೆ. ಏನದು ನೋಡಿ...

 

Read Full Story

10:46 PM (IST) Jul 03

ಮಂದಿನ 5 ದಿನ ಮಳೆ ಅಲರ್ಟ್, 2 ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

ಜುಲೈ 7ರ ವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇತ್ತ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ 2 ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

 

Read Full Story

10:43 PM (IST) Jul 03

ಕರ್ನಾಟಕದಲ್ಲಿ ಅಂಧತ್ವ ಮುಕ್ತ ರಾಜ್ಯಕ್ಕೆ ಆಶಾಕಿರಣ ಯೋಜನೆ; 393 ಶಾಶ್ವತ ದೃಷ್ಟಿ ಕೇಂದ್ರಗಳಿಗೆ ಚಾಲನೆ

ಅಂಧತ್ವ ಮುಕ್ತ ಕರ್ನಾಟಕದ ಗುರಿಯೊಂದಿಗೆ ಆಶಾಕಿರಣ ಯೋಜನೆಯಡಿ 393 ಶಾಶ್ವತ ದೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಲಾಗಿದೆ. ಉಚಿತ ಕಣ್ಣಿನ ತಪಾಸಣೆ, ಕನ್ನಡಕ ಮತ್ತು ಪೊರೆ ಶಸ್ತ್ರಚಿಕಿತ್ಸೆ ಲಭ್ಯ.
Read Full Story

10:21 PM (IST) Jul 03

ಕೊಡಗಿನಲ್ಲಿ ಚಿಕ್ಕ ಬಾಲಕ ನೇಣು ಬಿಗಿದು ದುರಂತ ಸಾವು!

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು  ಮಾಡಿಕೊಂಡಿದ್ದಾನೆ. ಮೃತ ಬಾಲಕನನ್ನು ಮಿಥುನ್ ಎಂದು ಗುರುತಿಸಲಾಗಿದ್ದು,  ನಿಖರ ಕಾರಣ ತಿಳಿದುಬಂದಿಲ್ಲ.

Read Full Story

10:01 PM (IST) Jul 03

ರಾಮಾಯಣ ವಿಡಿಯೋ ಬೆನ್ನಲ್ಲೇ ಆದಿಪುರುಷ್ ಸಾಂಗ್ ರಿಲೀಸ್,ಟಿ-ಸಿರೀಸ್ ವಿರುದ್ಧ ಯಶ್ ಫ್ಯಾನ್ಸ್ ಗರಂ

ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿರುವ ರಾಮಾಯಣ ಸಿನಿಮಾದ ಮೊದಲ ವಿಡಿಯೋ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ, ಟಿ-ಸಿರೀಸ್ ಆದಿಪುರುಷ್ ಸಾಂಗ್ ರಿಲೀಸ್ ಮಾಡಿದೆ. ಇದು ಯಶ್ ಅಭಿಮಾನಿಗಳನ್ನು ಕೆರಳಿಸಿದೆ.  

Read Full Story

09:10 PM (IST) Jul 03

ವೈದ್ಯ ಲೋಕದಲ್ಲೇ ಅಚ್ಚರಿ, ಜನರ ಜೀವ ಉಳಿಸಲು ಕೃತಕ ರಕ್ತ ಸೃಷ್ಟಿಸಿದ ಸಂಶೋಧನೆ

ವೈದ್ಯ ಲೋಕದಲ್ಲೇ ಅಚ್ಚರಿ ಇದು. ಕಾರಣ ಸಂಶೋಧಕರು ಇದೀಗ ಕೃತಕ ರಕ್ತ ಸೃಷ್ಟಿಸಿದ್ದಾರೆ. ಇದು ಜನರ ಜೀವ ಉಳಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇಷ್ಟೇ ಅಲ್ಲ ಒಮ್ಮೆ ಸೃಷ್ಟಿಸಿದ ಈ ಕೃತಕ ರಕ್ತದ ಆಯಸ್ಸು 2 ವರ್ಷ.

Read Full Story

08:57 PM (IST) Jul 03

ಮ್ಯಾರಥಾನ್ to ಐಪಿಎಲ್, ಕ್ರೀಡಾ ರಾಜಧಾನಿಯಾಗಿ ಮಾರ್ಪಟ್ಟ ಬೆಂಗಳೂರು; ರಾಜ್ಯಪಾಲ ಗೆಹ್ಲೋಟ್

ಟಿಸಿಎಸ್ ವರ್ಲ್ಡ್ 10 ಕೆ, ಬೆಂಗಳೂರು ಮ್ಯಾರಥಾನ್, ಪ್ರೊ ಕಬಡ್ಡಿ ಮತ್ತು ಐಪಿಎಲ್‌ನಂತಹ ಕಾರ್ಯಕ್ರಮಗಳಿಂದ ಬೆಂಗಳೂರು ನಗರ ಫಿಟ್‌ನೆಸ್ ಜೊತೆಗೆ ಕ್ರೀಡಾ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಎಂದು ರಾಜ್ಯಪಾಲ ಗೆಹ್ಲೋಟ್ ಹೇಳಿದ್ದಾರೆ.

 

Read Full Story

08:29 PM (IST) Jul 03

ಉತ್ತಮ ಆರೋಗ್ಯಕ್ಕಾಗಿ ಇಲ್ಲಿವೆ ಮೆಗ್ನೀಷಿಯಂ ಭರಿತ ಸೂಪರ್ ಫುಡ್ಸ್!

ಮೆಗ್ನೀಷಿಯಂ ಕೊರತೆಯಿಂದ ಆಯಾಸ, ಸ್ನಾಯು ಸೆಳೆತ, ಕಿರಿಕಿರಿ, ಅನಿಯಮಿತ ಹೃದಯ ಬಡಿತ, ಮಾನಸಿಕ ಸ್ಥಿತಿಯಲ್ಲಿ ಏರುಪೇರುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.
Read Full Story

08:20 PM (IST) Jul 03

ಶಾಲಿನಿ ರಜನೀಶ್ ಕುರಿತ ಅಸಭ್ಯ ಹೇಳಿಕೆ - ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ವಿರುದ್ಧ FIR

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲು. ಮಹಿಳಾ ಸಂಘಟನೆಗಳಿಂದ ತೀವ್ರ ಖಂಡನೆ.
Read Full Story

08:15 PM (IST) Jul 03

46 ವರ್ಷದ ಗವಾಸ್ಕರ್ ದಾಖಲೆ ಮುರಿದ ಗಿಲ್, ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಮೈಲಿಗಲ್ಲು

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್ ಭರ್ಜರಿ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಬರೋಬ್ಬರಿ 46 ವರ್ಷಗಳಿಂದ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಗಿಲ್ ಪುಡಿ ಮಾಡಿದ್ದಾರೆ.  

 

Read Full Story

07:53 PM (IST) Jul 03

ಮಾಜಿ ಸಚಿವ ಈಶ್ವರಪ್ಪ ಸೇರಿ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಕೇಸ್ ರೀ ಓಪನ್!

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲು. ಭ್ರಷ್ಟಾಚಾರ ಆರೋಪದ ಮೇಲೆ ಹೈಕೋರ್ಟ್ ನಿರ್ದೇಶನದಂತೆ ಜುಲೈ 4 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್.
Read Full Story

07:51 PM (IST) Jul 03

ಕರಾವಳಿ ಜಿಲ್ಲೆಗೆ ನಾಳೆಯೂ ರೆಡ್ ಅಲರ್ಟ್ - 4 ತಾಲೂಕುಗಳ ಶಾಲೆಗಳಿಗೆ ರಜೆ !

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜುಲೈ 4 ರಂದು ಶಿರಸಿ, ಸಿದ್ಧಾಪುರ, ಯಲ್ಲಾಪುರ ಮತ್ತು ಜೊಯಿಡಾ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕದ್ರಾ ಡ್ಯಾಂನಿಂದ 33,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕದ್ರಾ-ಕೊಡಸಳ್ಳಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
Read Full Story

07:42 PM (IST) Jul 03

10,900 ಎಲೆಕ್ಟ್ರಿಕ್‌ ಬಸ್‌ಗೆ ಟೆಂಡರ್‌ ಆಹ್ವಾನಿಸಿದ ಕೇಂದ್ರ ಸರ್ಕಾರ, ಬೆಂಗಳೂರಿಗೆ ಸಿಗಲಿದೆ ಗರಿಷ್ಠ ಬಸ್‌!

ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಜೂನ್ 27 ರಂದು ಒಟ್ಟು ವೆಚ್ಚದ ಒಪ್ಪಂದ ಮಾದರಿಯಡಿಯಲ್ಲಿ ಟೆಂಡರ್ ಅನ್ನು ಕರೆದಿದೆ.

 

Read Full Story

07:38 PM (IST) Jul 03

ರಜನಿಕಾಂತ್‌ರ 'ಕೂಲಿ' ಸಿನಿಮಾದ ವಿಲನ್ ಯಾರು? ಆಮಿರ್ ಖಾನ್ ಪಾತ್ರ ಏನು?

ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಪಾದಾರ್ಪಣೆ ಮಾಡಿದ್ದಾರೆ. ರಜನಿಕಾಂತ್ ನಟಿಸುತ್ತಿರುವ ಹೊಸ ಚಿತ್ರ 'ಕೂಲಿ'ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story

07:34 PM (IST) Jul 03

ಬಿಚ್ಚಿ ಬಿದ್ದ ರಾಜಧಾನಿ - ಬೈದಿದ್ದೇ ತಪ್ಪಾಯ್ತು ಬಿಹಾರಿ ಮನೆಕೆಲದಾಳುವಿನಿಂದ ಅಮ್ಮ ಮಗನ ಕೊಲೆ

ದೆಹಲಿಯ ಲಜಪತ್ ನಗರದಲ್ಲಿ ಗೃಹಿಣಿ ಮತ್ತು ಆಕೆಯ 14 ವರ್ಷದ ಮಗನನ್ನು ಮನೆಗೆಲಸದವನು ಕೊಲೆಗೈದಿದ್ದಾನೆ. ಬೈದಿದ್ದಕ್ಕೆ ಕೋಪಗೊಂಡು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

07:28 PM (IST) Jul 03

ಬಂದ ಏಳೇ ತಿಂಗಳಿಗೆ ಯಾದಗಿರಿ ಖಡಕ್‌ ಎಸ್ಪಿ ವರ್ಗಾವಣೆ, ಪ್ರಭಾವಿ ವ್ಯಕ್ತಿಯ ಕೈವಾಡ!

ಯಾದಗಿರಿಯ ಖಡಕ್ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಕೇವಲ 7 ತಿಂಗಳಲ್ಲೇ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅಕ್ರಮ ಚಟುವಟಿಕೆಗಳ ವಿರುದ್ಧದ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಮಾಜಿ ಸಚಿವ ರಾಜುಗೌಡ ವರ್ಗಾವಣೆ ತಡೆಯಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.  

Read Full Story

07:26 PM (IST) Jul 03

ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ದೇವರ ದರ್ಶನಕ್ಕೆ ಪ್ರತ್ಯೇಕ ಸಾಲು!

ಜುಲೈ 4 ರ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ಮೆಟ್ಟಿಲುಗಳ ಮೂಲಕ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಭಕ್ತರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪ್ರತ್ಯೇಕ ಸಾಲು ಮತ್ತು ಸಮಯ ನಿಗದಿಪಡಿಸಲಾಗಿದೆ.
Read Full Story

07:25 PM (IST) Jul 03

ಹಳೇ ವಾಹನಕ್ಕಿಲ್ಲ ಇಂಧನ ನೀತಿಯಲ್ಲಿ ಮಹತ್ವದ ಬದಲಾವಣೆ, ಕೆಂಡಾಮಂಡಲವಾದ ಜನ

ಹಳೇ ವಾಹನಕ್ಕೆ ಇಂಧನ ನಿಷೇಧ, ಹಳೇ ವಾಹನ ಗುಜುರಿಗೆ ಎಂದು ಜುಲೈ 1 ರಿಂದ ಜಾರಿಗೆ ತಂದಿದ್ದ ನೀತಿಯಲ್ಲಿ ಮತ್ತೆ ಮಹತ್ವದ ಬದಲಾವಣೆ ಮಾಡಲಾಗಿದೆ. ಜನರ ಭಾರಿ ವಿರೋಧ, ಆಕ್ರೋಶಗಳ ಬೆನ್ನಲ್ಲೇ ಸರ್ಕಾರ ಇದೀಗ ಮಾಡಿದ ಬದಲಾವಣೆ ಏನು?

 

Read Full Story

07:15 PM (IST) Jul 03

ಉತ್ತರ ಕನ್ನಡ ಜಿಲ್ಲೆಯ 6 ಜಲಾಶಯಗಳೂ ಶೇ.90ರಷ್ಟು ಭರ್ತಿ! ಇಲ್ಲಿದೆ ನೀರಿನ ಮಟ್ಟ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರಮುಖ 6 ಜಲಾಶಯಗಳು ಶೇ.90ರಷ್ಟು ಭರ್ತಿಯಾಗಿವೆ. ಸೂಪಾ ಜಲಾಶಯ ಶೇ.95ರಷ್ಟು ಭರ್ತಿಯಾಗಿದ್ದು, ಇತರ ಜಲಾಶಯಗಳೂ ಪೂರ್ಣ ಪ್ರಮಾಣದತ್ತ ಸಾಗುತ್ತಿವೆ. ಮಳೆ ಮುಂದುವರಿದರೆ ಜಲಾಶಯಗಳು ಉಕ್ಕಿ ಹರಿಯುವ ಸಾಧ್ಯತೆ ಇದೆ.
Read Full Story

07:02 PM (IST) Jul 03

ಮಳೆಗಾಲದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕಚ್ಚಿದಾಗ ಏನು ಮಾಡ್ಬೇಕು, ಏನು ಮಾಡ್ಬಾರ್ದು?

ಮಳೆಗಾಲದಲ್ಲಿ ಹಾವು ಕಡಿತದ ಅಪಾಯ ಹೆಚ್ಚುತ್ತದೆ. ಸರಿಯಾದ ಮಾಹಿತಿ ಮತ್ತು ತಕ್ಷಣದ ಚಿಕಿತ್ಸೆ ಅಗತ್ಯ. ಜೀವ ಉಳಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯಿರಿ.

Read Full Story

06:59 PM (IST) Jul 03

'ಅವರಿಂದ ಮಾತ್ರ ಸಾಧ್ಯ..' ಜಿಯೋ-ಬ್ಲ್ಯಾಕ್‌ರಾಕ್‌ ಸ್ಟಾಕ್‌ ಬ್ರೋಕಿಂಗ್‌ ಲೈಸೆನ್ಸ್‌ ಬಗ್ಗೆ ಏನಂದ್ರು ಜೀರೋಧಾದ ನಿತಿನ್‌ ಕಾಮತ್‌?

ಭಾರತೀಯ ಷೇರು ಮಾರುಕಟ್ಟೆ ಪರಿಸರ ವ್ಯವಸ್ಥೆಗೆ ಹೊಸ ಚಿಲ್ಲರೆ ಹೂಡಿಕೆದಾರರನ್ನು ತರುವಲ್ಲಿ ಜಿಯೋ-ಬ್ಲ್ಯಾಕ್‌ರಾಕ್‌ನಂತಹ ಪಾಲುದಾರಿಕೆಯ ಅಗತ್ಯವಿದೆ ಅನ್ನೋದನ್ನ ನಿತಿನ್‌ ಕಾಮತ್‌ ಒಪ್ಪಿಕೊಂಡಿದ್ದಾರೆ.

 

Read Full Story

06:57 PM (IST) Jul 03

ಪೊಲೀಸ್ ಕೆಲಸಕ್ಕೆ ಬರೊಲ್ಲವೆಂದ ಎಸಿಪಿ ಬರಮನಿ ಮನವೊಲಿಸಿದ ಸಿಎಂ ಸಿದ್ದರಾಮಯ್ಯ; ಇಂದು ಡ್ಯೂಟಿಗೆ ಹಾಜರ್!

ಸಿಎಂ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅವಮಾನಗೊಂಡ ನಂತರ ಸ್ವಯಂ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ, ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಿಎಂ ಮತ್ತು ಗೃಹ ಸಚಿವರ ಮನವೊಲಿಕೆಯ ನಂತರ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ.
Read Full Story

06:42 PM (IST) Jul 03

ಹಲವು ಬ್ರ್ಯಾಂಡ್ ಸೊರಗಿದರೆ ಜೂನ್‌ನಲ್ಲಿ ಈ ಕಾರಿಗೆ ಮುಗಿಬಿದ್ದ ಜನ, ಗರಿಷ್ಠ ಮಾರಾಟ ದಾಖಲೆ

ಟಾಟಾ ಮೋಟಾರ್ಸ್, ಮಹೀಂದ್ರ ಸೇರಿದಂತೆ ಹಲವು ಟಾಪ್ ಬ್ರ್ಯಾಂಡ್ ಕಾರುಗಳು ಜೂನ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಈ ಕಾರು ಮಾತ್ರ ದಾಖಲೆ ಬರೆದಿದೆ. ಈ ಕಾರಿಗೆ ಜನ ಮುಗಿಬಿದ್ದಿದ್ದಾರೆ. ಜೂನ್ ತಿಂಗಳಲ್ಲಿ ಜನರು ಹೆಚ್ಚು ಖರೀದಿಸಿದ ಕಾರು ಯಾವುದು?

 

Read Full Story

06:27 PM (IST) Jul 03

ಹಾಸನದ ಹಾರ್ಟ್ ಅಟ್ಯಾಕ್ ಭಯವನ್ನು ಕುಕೃತ್ಯಕ್ಕೆ ಬಳಸಿಕೊಂಡ ಭೂಪ; ಹೆಂಡತಿ ಕೊಂದು ಹೃದಯಾಘಾತ ಕಥೆ ಕಟ್ಟಿದ!

ಹಾಸನದ ಹೃದಯಾಘಾತ ಭೂತವನ್ನು ಸ್ವಂತಕ್ಕೆ ಬಳಸಿಕೊಂಡ ಭೂಪನೊಬ್ಬ ತನ್ನ ಹೆಂಡತಿ ಕೊಲೆ ಮಾಡಿ ಹಾರ್ಟ್ ಅಟ್ಯಾಕ್ ಕಥೆ ಕಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಲ್ಲಿ 40 ದಿನದಲ್ಲಿ ಹಾಸನ ಜಿಲ್ಲೆಯಲ್ಲಿ 26ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

Read Full Story

06:18 PM (IST) Jul 03

ಹೃದಯದ ಆರೈಕೆಗೆ ಜಿಮ್, ಯೋಗ ಸಾಲದು; ಹೆಲ್ತ್‌ ಇನ್ಶೂರೆನ್ಸ್ ಇರಲೇಬೇಕು, ಹೇಗೆ ಹೆಲ್ಫ್ ಆಗುತ್ತೆ ಗೊತ್ತಾ?

ಒಳ್ಳೆಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಬರಬಹುದಾದ ಭಾರಿ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು.

 

Read Full Story

06:14 PM (IST) Jul 03

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ, ದ್ವೇಷದಿಂದ ತನ್ನ ಮೇಲೆ ಆರೋಪ ಎಂದ ಜೋಶಿ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಅಧ್ಯಕ್ಷ ಮಹೇಶ್ ಜೋಶಿ ಖಂಡಿಸಿದ್ದಾರೆ. ವೈಯಕ್ತಿಕ ಧ್ವೇಷದಿಂದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ ಜೋಶಿ, ತನಿಖೆಗೆ ಸಿದ್ಧ ಎಂದಿದ್ದಾರೆ. ಅನುದಾನ ಬಳಕೆ ಪಾರದರ್ಶಕವಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
Read Full Story

05:55 PM (IST) Jul 03

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಪೋಷಕರ ಬೀದಿಗೆ ತಳ್ಳುವ ಮಕ್ಕಳ ಟ್ರೆಂಡ್, 3,000 ಪ್ರಕರಣ ದಾಖಲು

ಕರ್ನಾಟಕ ತನ್ನ ಸತ್ವ ಕಳೆದುಕೊಳ್ಳುತ್ತಿದೆಯಾ? ಮಕ್ಕಳಿಗೆ ಇದೀಗ ವಯಸ್ಸಾದ ಪೋಷಕರು ಬೇಡವಾಗುತ್ತಿದ್ದಾರೆ. ಆಸ್ಪತ್ರೆ ಸೇರಿಸಿ ಒಂದಷ್ಟು ಹಣ ಕಟ್ಟಿ ಮತ್ತೆ ತಿರುಗಿ ನೋಡುತ್ತಿಲ್ಲ. ಮನೆಯಿಂದ ಹೊರಗೆ ಹಾಕುತ್ತಿರುವುದು. ನಯವಾಗಿ ಅನಾಥಾಶ್ರಮ ಸೇರಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.

Read Full Story

05:47 PM (IST) Jul 03

'ಡಿಕೆಶಿ ನೀವು ಸಿಎಂ ಆಗೋದು ನೋಡ್ಕೊಳ್ಳಿ' ಬೀದರ್‌ನಲ್ಲಿ ಬಾಂಬ್ ಸಿಡಿಸಿದ ನಿಖಿಲ್ ಕುಮಾರಸ್ವಾಮಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ನಲ್ಲಿಯೇ ಸಂಚು ನಡೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. 

Read Full Story

05:38 PM (IST) Jul 03

5 ಕಂಪನಿಗಳಲ್ಲಿ ಏಕಕಾಲಕ್ಕೆ ಕೆಲಸ - ಅಮೆರಿಕನ್ ಸ್ಟಾರ್ಟಪ್‌ಗಳ ತಲೆನೋವಿಗೆ ಕಾರಣವಾದ ಈ ಭಾರತೀಯ ಕೋಡರ್ ಯಾರು?

ಭಾರತೀಯ ಮೂಲದ ಕೋಡರ್ ಒಬ್ಬನ ಕಾರಣಕ್ಕೆ ಈಗ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಲ್ಲಿನ ಹೂಡಿಕೆದಾರರು, ಇಂಜಿನಿಯರ್‌ಗಳು, ಸಂಸ್ಥೆಗಳ ಸಂಸ್ಥಾಪಕರು ಹೀಗೆ ಪ್ರತಿಯೊಬ್ಬರು ಈಗ ಭಾರತೀಯ ಮೂಲದ ಕೋಡರ್ ಓರ್ವನ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕೇನು ಕಾರಣ.

Read Full Story

05:19 PM (IST) Jul 03

ದೇಹದೊಳಗೆ ಸೇರಿದ ವಿಷಕಾರಕ ಅಂಶಗಳಿಂದ ವ್ಯಕ್ತಿ ಅಸ್ವಸ್ಥ, ಕಾರಣ ಕುಕ್ಕರ್ ಅಡುಗೆ

ಪ್ರೆಶರ್ ಕುಕ್ಕರ್ ಇಲ್ಲದ ಮನೆ ಸದ್ಯ ಇಲ್ಲ. ಸುಲಭವಾಗಿ ಅಡುಗೆ ತಯಾರಿಗೆ ಎಲ್ಲರೂ ಕುಕ್ಕರ್ ಬಳಸುತ್ತಾರೆ. ಇದೀಗ ಕುಕ್ಕರ್ ಅಡುಗೆ ತಿಂದು ದೇಹದಲ್ಲಿ ಸೇರಿಕೊಂಡ ವಿಷಕಾರಕ ಅಂಶಗಳಿಂದ ವ್ಯಕ್ತಿ ಅಸ್ವಸ್ಥಗೊಂಡ ಘಟನೆ ನಡೆದಿದೆ.  

Read Full Story

05:18 PM (IST) Jul 03

ಪ್ರೊ. ಕೊಣ್ಣೂರಗೆ ಜೀವಮಾನ ಸಾಧನೆ ಪ್ರಶಸ್ತಿ - ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆಗೆ ಗೌರವ

ಚೆನ್ನೈನ SALIS ಸಂಸ್ಥೆಯು ಪ್ರೊ.ಪಿ.ವಿ.ಕೊಣ್ಣೂರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ಲಭಿಸಿದೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿರುವ ಅವರು LIS ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.
Read Full Story

05:09 PM (IST) Jul 03

ಬೇಕಿಲ್ಲ ಮಗನ ಅನಿಸಿಕೆ, ಚಿತ್ರ ಮಾಡಿದ್ದು ಜನಕ್ಕೆ! ಮಗನೇ ಬೇರೆ ಅಮ್ಮನೇ ಬೇರೆ ಸಪರೇಟ್ ಸಂಸಾರ, ಯಶ್ ತಾಯಿ ಖಡಕ್ ಮಾತು

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ 'ಕೊತ್ತಲವಾಡಿ' ಚಿತ್ರ ನಿರ್ಮಿಸಿದ್ದಾರೆ. ಯಶ್ ಸಿನಿಮಾ ನೋಡಿದ್ರೆ ಸಾಕಾಗಲ್ಲ, ಜನ ನೋಡಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಮಗನಿಗಿಂತ ದೊಡ್ಡ ನಿರ್ಮಾಪಕಿಯಾಗುವ ಗುರಿ ಹೊಂದಿದ್ದಾರೆ.
Read Full Story

04:28 PM (IST) Jul 03

ಸೆಕ್ಯೂರಿಟಿ ಸಿಸ್ಟಂ ಹ್ಯಾಕ್ ಮಾಡಿ ಹುಂಡೈ ಕ್ರೇಟಾ ಕಾರನ್ನು ಕೆಲ ಸೆಕೆಂಡ್‌ಗಳಲ್ಲಿ ಕದ್ದ ಹೈಟೆಕ್ ಕಳ್ಳರು - ವೀಡಿಯೋ

ದೆಹಲಿಯಲ್ಲಿ ಲಾಕ್ ಮಾಡಿದ್ದ ಹುಂಡೈ ಕ್ರೇಟಾ ಕಾರನ್ನು ಕೇವಲ 60 ಸೆಕೆಂಡ್‌ಗಳಲ್ಲಿ ಕಳವು ಮಾಡಲಾಗಿದೆ. ಈ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಭದ್ರತಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ಕಳ್ಳತನ ಮಾಡಲಾಗಿದೆ.
Read Full Story

04:26 PM (IST) Jul 03

ಬೆಂಗಳೂರಲ್ಲಿ ತೆರಿಗೆ ಪಾವತಿಸದೇ ಓಡುತ್ತಿದ್ದ ₹7.5 ಕೋಟಿ ಮೌಲ್ಯದ ಫೆರಾರಿ ಕಾರು ಜಪ್ತಿ!

ಬೆಂಗಳೂರಿನಲ್ಲಿ ಮಹಾರಾಷ್ಟ್ರದ ನೋಂದಣಿ ಹೊಂದಿದ ₹7.5 ಕೋಟಿ ಮೌಲ್ಯದ ಫೆರಾರಿ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ತೆರಿಗೆ ಪಾವತಿಸದೆ ಓಡಾಡುತ್ತಿದ್ದ ಕಾರಣ ₹1.78 ಕೋಟಿ ತೆರಿಗೆ, ದಂಡ ವಿಧಿಸಲಾಗಿದೆ. ಸಂಜೆಯೊಳಗೆ ಹಣ ಕಟ್ಟದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.

Read Full Story

04:21 PM (IST) Jul 03

ಆನ್‌ಲೈನ್‌ ಗೇಮಿಂಗ್‌ನಲ್ಲಿ 19 ಕೋಟಿ ಗೆದ್ದರೂ ಹಣ ನೀಡದ ಕಾರಣಕ್ಕೆ ಯುವಕ ಆತ್ಮಹತ್ಯೆ!

ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ 18 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ 25 ವರ್ಷದ ಯುವಕ ಶಶಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆದ್ದ 19ಕೋಟಿ ರೂಪಾಯಿಗಳನ್ನು ನೀಡದ ಕಾರಣ ಮತ್ತು ಪೊಲೀಸ್ ದೂರಿನಿಂದ ಯಾವುದೇ ಪ್ರಯೋಜನವಾಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read Full Story

04:15 PM (IST) Jul 03

ದರ್ಶನ್ ಪುತ್ರ ವಿನೀಶ್ ತೂಗುದೀಪ 'ದಿ ಡೆವಿಲ್' ಸಿನಿಮಾದಲ್ಲಿ ನಟಿಸಿದ್ದಾರಾ? ಪಕ್ಕಾ ಕ್ಲೂ ಸಿಕ್ಕಿದೆ.. !?

ದರ್ಶನ್ ತಂದೆ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ರು. ಮೂರು ದಶಕಗಳ ಕಾಲ ಕನ್ನಡ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟನಾಗಿದ್ದವರು. ಅದ್ರಲ್ಲೂ ಖಳನಟನ ಪಾತ್ರದಲ್ಲಿ ತೂಗುದೀಪ ಶ್ರೀನಿವಾಸ್​ಗೆ ಸರಿಸಾಟಿಯೇ ಇಲ್ಲ. ಇದೀಗ ದರ್ಶನ್ ಮಗ ಸಿನಿಮಾ ನಟ ಆಗೋ ಹಾದಿಯಲ್ಲಿ ಇದಾರೆ ಎನ್ನಬಹುದು.

Read Full Story

04:15 PM (IST) Jul 03

ಸ್ಟಿಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕನಿಗೆ ಒದ್ದು ಹಲ್ಲೆ ನಡೆಸಿದ BBMP ಸೂಪರ್‌ವೈಸರ್? ಇದೇನಾ ಜಾತಿ ಸಮೀಕ್ಷೆ?

ಬಿಬಿಎಂಪಿ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿದ್ದು, ಸಮೀಕ್ಷೆ ನಡೆಸದೆ ಸ್ಟಿಕ್ಕರ್ ಅಂಟಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಲ್ಲಸಂದ್ರದಲ್ಲಿ ಮನೆ ಮಾಲೀಕರೊಬ್ಬರ ಮೇಲೆ ಬಿಬಿಎಂಪಿ ಸೂಪರ್‌ವೈಸರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
Read Full Story

More Trending News