ಸ್ವಾತಂತ್ರ್ಯ ದಿನಾಚರಣೆ: ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರ ಪಟ್ಟಿ ಬಿಡುಗಡೆ

Published : Aug 10, 2021, 06:53 PM IST
ಸ್ವಾತಂತ್ರ್ಯ ದಿನಾಚರಣೆ: ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರ ಪಟ್ಟಿ ಬಿಡುಗಡೆ

ಸಾರಾಂಶ

* ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ಮಾಡಲು ಸಚಿವರ ನಿಯೋಜನೆ * ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿ ಬಿಡುಗಡೆ  * ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ 

ಬೆಂಗಳೂರು, (ಆ.10): ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು (ಆ.15) ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನಿಯೋಜನೆ ಮಾಡಲಾಗಿದೆ.

ಈ ಬಗ್ಗೆ ಇಂದು (ಆ.10) ರಾಜ್ಯ ಸರ್ಕಾರ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನೂತನ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ ಸಿಎಂ: ಯಾವ ಜಿಲ್ಲೆ, ಯಾರ ಹೆಗಲಿಗೆ?

ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಧ್ವಜಾರೋಹಣ ಮಾಡಲು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಸಚಿವರುಗಳು  ಧ್ವಜಾರೋಹಣ ಮಾಡಲಿದ್ದಾರೆ. ಹಾಗಾದ್ರೆ, ಯಾರು ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ  ಮಾಡುತ್ತಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಯಾರು ಯಾವ ಜಿಲ್ಲೆಗೆ?
1.ಬೆಳಗಾವಿ- ಗೋವಿಂದ ಕಾರಜೋಳ 
2.ಶಿವಮೊಗ್ಗ- ಕೆ.ಎಸ್. ಈಶ್ವರಪ್ಪ
3.  ಚಿತ್ರದುರ್ಗ- ಬಿ. ಶ್ರೀರಾಮುಲು 
 4. ರಾಯಚೂರು- ವಿ. ಸೋಮಣ್ಣ
5.ಬಾಗಲಕೋಟೆ- ಉಮೇಶ್ ಕತ್ತಿ
6. ದಕ್ಷಿಣ ಕನ್ನಡ- ಎಸ್ ಅಂಗಾರ
7. ತುಮಕೂರು-ಮಧುಸ್ವಾಮಿ
8. ಚಿಕ್ಕಮಗಳೂರು- ಆರಗ ಜ್ಞಾನೆಂದ್ರ
9. ರಾಮನಗರ-  ಡಾ. ಸಿ.ಎನ್. ಅಶ್ವತ್ಥ್ ನಾರಾಯಣ 
10. ಗದಗ-  ಚಂದ್ರಕಾಂತ ಸಿ ಪಾಟೀಲ್(ಸಿಸಿ ಪಾಟೀಲ್)
11.ಬೀದರ್- ಪ್ರಭು ಚೌವ್ಹಾಣ್ 
12. ಕೊಡಗು- ಕೋಟಾ ಶ್ರೀನಿವಾಸ ಪೂಜಾರಿ 
13. ವಿಜಯನಗರ- ಆನಂದ್ ಸಿಂಗ್
14. ಕಲಬುರಗಿ- ಮುರುಗೇಶ್ ನಿರಾಣಿ
15.ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್
16. ಮೈಸೂರು- ಎಸ್‌ಟಿ ಸೋಮಶೇಖರ್
17. ಹಾವೇರಿ- ಬಿ.ಸಿ ಪಾಟೀಲ್
18. ದಾವಣಗೆರೆ- ಬಸವರಾಜ ಬೈರತಿ
19 ಚಿಕ್ಕಬಳ್ಳಾಪುರ- ಡಾ.ಕೆ ಸುಧಾಕರ್
20 ಹಾಸನ- ಗೋಪಾಲಯ್ಯ
21 ವಿಜಯಪುರ- ಶಶಿಕಲಾ ಜೊಲ್ಲೆ
22 ಬೆಂಗಳೂರು ಗ್ರಾಮಾಂತರ- ಎಂಟಿಬಿ ನಾಗರಾಜ್
23 ಮಂಡ್ಯ- ನಾರಾಯಣಗೌಡ
24. ಉಡುಪಿ- ಸುನೀಲ್ ಕುಮಾರ್
25. ಕೊಪ್ಪಳ- ಹಾಲಪ್ಪ ಆಚಾರ್
26. ಧಾರವಾಡ- ಶಂಕರ್ ಪಾಟೀಲ್ ಮುನೇನಕೊಪ್ಪ
27. ಕೋಲಾರ- ಮುನಿರತ್ನ
28. ಚಾಮರಾಜನಗರ-ಜಿಲ್ಲಾಧಿಕಾರಿ
29. ಬಳ್ಳಾರಿ-ಜಿಲ್ಲಾಧಿಕಾರಿ
30. ಯಾದಗಿರಿ- ಬಿಸಿ ನಾಗೇಶ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು