* ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ಮಾಡಲು ಸಚಿವರ ನಿಯೋಜನೆ
* ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿ ಬಿಡುಗಡೆ
* ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ
ಬೆಂಗಳೂರು, (ಆ.10): ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು (ಆ.15) ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನಿಯೋಜನೆ ಮಾಡಲಾಗಿದೆ.
ಈ ಬಗ್ಗೆ ಇಂದು (ಆ.10) ರಾಜ್ಯ ಸರ್ಕಾರ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನೂತನ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ ಸಿಎಂ: ಯಾವ ಜಿಲ್ಲೆ, ಯಾರ ಹೆಗಲಿಗೆ?
ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಧ್ವಜಾರೋಹಣ ಮಾಡಲು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಸಚಿವರುಗಳು ಧ್ವಜಾರೋಹಣ ಮಾಡಲಿದ್ದಾರೆ. ಹಾಗಾದ್ರೆ, ಯಾರು ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.
ಯಾರು ಯಾವ ಜಿಲ್ಲೆಗೆ?
1.ಬೆಳಗಾವಿ- ಗೋವಿಂದ ಕಾರಜೋಳ
2.ಶಿವಮೊಗ್ಗ- ಕೆ.ಎಸ್. ಈಶ್ವರಪ್ಪ
3. ಚಿತ್ರದುರ್ಗ- ಬಿ. ಶ್ರೀರಾಮುಲು
4. ರಾಯಚೂರು- ವಿ. ಸೋಮಣ್ಣ
5.ಬಾಗಲಕೋಟೆ- ಉಮೇಶ್ ಕತ್ತಿ
6. ದಕ್ಷಿಣ ಕನ್ನಡ- ಎಸ್ ಅಂಗಾರ
7. ತುಮಕೂರು-ಮಧುಸ್ವಾಮಿ
8. ಚಿಕ್ಕಮಗಳೂರು- ಆರಗ ಜ್ಞಾನೆಂದ್ರ
9. ರಾಮನಗರ- ಡಾ. ಸಿ.ಎನ್. ಅಶ್ವತ್ಥ್ ನಾರಾಯಣ
10. ಗದಗ- ಚಂದ್ರಕಾಂತ ಸಿ ಪಾಟೀಲ್(ಸಿಸಿ ಪಾಟೀಲ್)
11.ಬೀದರ್- ಪ್ರಭು ಚೌವ್ಹಾಣ್
12. ಕೊಡಗು- ಕೋಟಾ ಶ್ರೀನಿವಾಸ ಪೂಜಾರಿ
13. ವಿಜಯನಗರ- ಆನಂದ್ ಸಿಂಗ್
14. ಕಲಬುರಗಿ- ಮುರುಗೇಶ್ ನಿರಾಣಿ
15.ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್
16. ಮೈಸೂರು- ಎಸ್ಟಿ ಸೋಮಶೇಖರ್
17. ಹಾವೇರಿ- ಬಿ.ಸಿ ಪಾಟೀಲ್
18. ದಾವಣಗೆರೆ- ಬಸವರಾಜ ಬೈರತಿ
19 ಚಿಕ್ಕಬಳ್ಳಾಪುರ- ಡಾ.ಕೆ ಸುಧಾಕರ್
20 ಹಾಸನ- ಗೋಪಾಲಯ್ಯ
21 ವಿಜಯಪುರ- ಶಶಿಕಲಾ ಜೊಲ್ಲೆ
22 ಬೆಂಗಳೂರು ಗ್ರಾಮಾಂತರ- ಎಂಟಿಬಿ ನಾಗರಾಜ್
23 ಮಂಡ್ಯ- ನಾರಾಯಣಗೌಡ
24. ಉಡುಪಿ- ಸುನೀಲ್ ಕುಮಾರ್
25. ಕೊಪ್ಪಳ- ಹಾಲಪ್ಪ ಆಚಾರ್
26. ಧಾರವಾಡ- ಶಂಕರ್ ಪಾಟೀಲ್ ಮುನೇನಕೊಪ್ಪ
27. ಕೋಲಾರ- ಮುನಿರತ್ನ
28. ಚಾಮರಾಜನಗರ-ಜಿಲ್ಲಾಧಿಕಾರಿ
29. ಬಳ್ಳಾರಿ-ಜಿಲ್ಲಾಧಿಕಾರಿ
30. ಯಾದಗಿರಿ- ಬಿಸಿ ನಾಗೇಶ್