ರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಸಿದ್ಧಗೊಂಡಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಫಲಿತಾಂಶ ಅತಂತ್ರವಾಗಲಿದೆ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ರಾಜ್ಯದ ಮತದಾರರು ಎಲ್ಲ ಸಮೀಕ್ಷೆ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದಾರೆ. ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲು ಕಂಡಿದೆ.
ಬೆಂಗಳೂರು (ಮೇ.13) : ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಸಿದ್ಧಗೊಂಡಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಫಲಿತಾಂಶ ಅತಂತ್ರವಾಗಲಿದೆ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ರಾಜ್ಯದ ಮತದಾರರು ಎಲ್ಲ ಸಮೀಕ್ಷೆ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದಾರೆ. ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲು ಕಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ(HD Kumaraswamy) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ ಎಂದಿದ್ದಾರೆ ಜೊತೆಗೆ ಜೆಡಿಎಸ್ ಪಕ್ಷ ಬೆಂಬಲಿಸಿದ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ನಿಜವಾಗಿಯೂ ಕರ್ನಾಟಕದಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವಲ್ಲ; ಮತದಾರ!
ರಣಕಣದಲ್ಲಿ ಗೆದ್ದುವರು ಯಾರು ? ಸೋತವರು ಯಾರು ಇಲ್ಲಿದೆ ಮಾಹಿತಿ
ಜೆಡಿಎಸ್ ಗೆಲುವಿನ ಅಭ್ಯರ್ಥಿಗಳು
1.ಚನ್ನಪಟ್ಟಣ- H.D.ಕುಮಾರಸ್ವಾಮಿ
2.ಹೊಳೆನರಸೀಪುರ- H.Dರೇವಣ್ಣ.
3.ಹಾಸನ ಸಿಟಿ- ಸ್ವರೂಪ್.
4.ಚಾಮುಂಡೇಶ್ವರಿ- ಜಿಟಿ ದೇವೇಗೌಡ.
5.ಹುಣಸೂರು - ಹರೀಶ್ ಗೌಡ.
6.ಶ್ರವಣಬೆಳಗೊಳ- ಬಾಲಕೃಷ್ಣ
7.ಗುರುಮಿಠ್ಕಲ್ - ಶರಣಗೌಡ ಕಂದಕೂರ್.
8.ದೇವದುರ್ಗ- ಕರೆಮ್ಮ ನಾಯಕ್.
9.ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು.
10.ತುರುವೇಕೆರೆ- MT ಕೃಷ್ಣಪ್ಪ.
11.ಮುಳಬಾಗಿಲು- ಸಂವೃದ್ದಿ ಮಂಜುನಾಥ್.
12.ಕೆ.ಆರ್.ಪೇಟೆ- HT ಮಂಜುನಾಥ್.
13.ಅರಕಲಗೂಡು- ಎ.ಮಂಜು.
14.ಶಿಡ್ಲಘಟ್ಟ- ರವಿಕುಮಾರ್
15.ಶಿವಮೊಗ್ಗ ಗ್ರಾ. - ಶಾರದಾ ಪೂರ್ಯ ನಾಯಕ್
16.ಹಗರಿ ಬೊಮ್ಮನಹಳ್ಳಿ - ನೇಮರಾಜನಾಯ್ಕ್.
17.ದೇವರ ಹಿಪ್ಪರಗಿ - ರಾಜುಗೌಡ ಪಾಟೀಲ್.
18- ಹನೂರು- MR ಮಂಜುನಾಥ್.
19- ಶ್ರೀನಿವಾಸಪುರ- ವೆಂಕಟಶಿವರೆಡ್ಡಿ
ಸೋತ ಹಾಲಿ ಶಾಸಕರು( ಜೆಡಿಎಸ್)*
1.ಬಂಡೆಪ್ಪ ಕಾಶಂಪೂರ್
2.ಸಾರಾ ಮಹೇಶ್.
3.ಸಿಎಸ್ ಪುಟ್ಟರಾಜು
4.ವೆಂಕಟರಾವ್ ನಾಡಗೌಡ.
5.ಡಿಸಿ ತಮ್ಮಣ್ಣ
6.ಮಾಗಡಿ ಮಂಜುನಾಥ್.
7.ಅಶ್ವಿನ್ ಕುಮಾರ್.
8.ರವೀಂದ್ರ ಶ್ರೀಕಂಠಯ್ಯ.
9.ಪಿರಿಯಾಪಟ್ಟಣ- k ಮಹದೇವ
10.ಸಕಲೇಶಪುರ-HKಕುಮಾರಸ್ವಾಮಿ.
11.ಬೇಲೂರ್ - ಲಿಂಗೇಶ್.
12.ನಾಗಮಂಗಲ- ಸುರೇಶ್ ಗೌಡ.
13.ದಾಸರಹಳ್ಳಿ ಮಂಜುನಾಥ್.
14.ನಿಸರ್ಗ ನಾರಾಯಣಸ್ವಾಮಿ
15.ಶ್ರೀನಿವಾಸ್ ಮೂರ್ತಿ.
16.ಕೃಷ್ಣಾರೆಡ್ಡಿ
17. ರಾಜಾ ವೆಂಕಟಪ್ಪ ನಾಯಕ
Karnataka Election Results 2023: ಉತ್ತರ ಕನ್ನಡದಲ್ಲಿ ಕೈ ಹಿಡಿದ ಮತದಾರರು, ಬಿಜೆಪಿಗೆ ಬರೀ ಇಬ್ಬರು!