Karnataka election result 2023: ಜೆಡಿಎಸ್ ಹೀನಾಯ ಸೋಲು: ಹೋರಾಟ ಮುಂದುವರಿಯುತ್ತದೆ ಎಂದ ಎಚ್‌ಡಿಕೆ

By Ravi JanekalFirst Published May 13, 2023, 9:26 PM IST
Highlights

ರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಸಿದ್ಧಗೊಂಡಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಫಲಿತಾಂಶ ಅತಂತ್ರವಾಗಲಿದೆ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ರಾಜ್ಯದ ಮತದಾರರು ಎಲ್ಲ ಸಮೀಕ್ಷೆ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದಾರೆ. ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲು ಕಂಡಿದೆ. 

ಬೆಂಗಳೂರು (ಮೇ.13) : ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಸಿದ್ಧಗೊಂಡಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಫಲಿತಾಂಶ ಅತಂತ್ರವಾಗಲಿದೆ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ರಾಜ್ಯದ ಮತದಾರರು ಎಲ್ಲ ಸಮೀಕ್ಷೆ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದಾರೆ. ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲು ಕಂಡಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ ಎಂದಿದ್ದಾರೆ ಜೊತೆಗೆ ಜೆಡಿಎಸ್ ಪಕ್ಷ ಬೆಂಬಲಿಸಿದ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Latest Videos

ನಿಜವಾಗಿಯೂ ಕರ್ನಾಟಕದಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವಲ್ಲ; ಮತದಾರ!

ರಣಕಣದಲ್ಲಿ ಗೆದ್ದುವರು ಯಾರು ? ಸೋತವರು ಯಾರು ಇಲ್ಲಿದೆ ಮಾಹಿತಿ

ಜೆಡಿಎಸ್ ಗೆಲುವಿನ ಅಭ್ಯರ್ಥಿಗಳು

1.ಚನ್ನಪಟ್ಟಣ- H.D.ಕುಮಾರಸ್ವಾಮಿ

2.ಹೊಳೆನರಸೀಪುರ- H.Dರೇವಣ್ಣ.

3.ಹಾಸನ ಸಿಟಿ- ಸ್ವರೂಪ್.

4.ಚಾಮುಂಡೇಶ್ವರಿ- ಜಿಟಿ ದೇವೇಗೌಡ.

5.ಹುಣಸೂರು - ಹರೀಶ್ ಗೌಡ.

6.ಶ್ರವಣಬೆಳಗೊಳ- ಬಾಲಕೃಷ್ಣ

7.ಗುರುಮಿಠ್ಕಲ್ - ಶರಣಗೌಡ ಕಂದಕೂರ್.

8.ದೇವದುರ್ಗ- ಕರೆಮ್ಮ ನಾಯಕ್.

9.ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು.

10.ತುರುವೇಕೆರೆ- MT ಕೃಷ್ಣಪ್ಪ.

11.ಮುಳಬಾಗಿಲು- ಸಂವೃದ್ದಿ ಮಂಜುನಾಥ್.

12.ಕೆ.ಆರ್.ಪೇಟೆ- HT ಮಂಜುನಾಥ್.

13.ಅರಕಲಗೂಡು- ಎ.ಮಂಜು.

14.ಶಿಡ್ಲಘಟ್ಟ- ರವಿಕುಮಾರ್

15.ಶಿವಮೊಗ್ಗ ಗ್ರಾ. - ಶಾರದಾ ಪೂರ್ಯ ನಾಯಕ್

16.ಹಗರಿ ಬೊಮ್ಮನಹಳ್ಳಿ - ನೇಮರಾಜನಾಯ್ಕ್.

17.ದೇವರ ಹಿಪ್ಪರಗಿ - ರಾಜುಗೌಡ ಪಾಟೀಲ್.

18- ಹನೂರು- MR ಮಂಜುನಾಥ್.

19- ಶ್ರೀನಿವಾಸಪುರ- ವೆಂಕಟಶಿವರೆಡ್ಡಿ

ಸೋತ ಹಾಲಿ ಶಾಸಕರು( ಜೆಡಿಎಸ್)*

1.ಬಂಡೆಪ್ಪ ಕಾಶಂಪೂರ್

2.ಸಾರಾ ಮಹೇಶ್.

3.ಸಿಎಸ್ ಪುಟ್ಟರಾಜು

4.ವೆಂಕಟರಾವ್ ನಾಡಗೌಡ.

5.ಡಿಸಿ ತಮ್ಮಣ್ಣ

6.ಮಾಗಡಿ ಮಂಜುನಾಥ್.

7.ಅಶ್ವಿನ್ ಕುಮಾರ್.

8.ರವೀಂದ್ರ ಶ್ರೀಕಂಠಯ್ಯ.

9.ಪಿರಿಯಾಪಟ್ಟಣ- k ಮಹದೇವ

10.ಸಕಲೇಶಪುರ-HKಕುಮಾರಸ್ವಾಮಿ.

11.ಬೇಲೂರ್ - ಲಿಂಗೇಶ್.

12.ನಾಗಮಂಗಲ- ಸುರೇಶ್ ಗೌಡ.

13.ದಾಸರಹಳ್ಳಿ ಮಂಜುನಾಥ್.

14.ನಿಸರ್ಗ ನಾರಾಯಣಸ್ವಾಮಿ

15.ಶ್ರೀನಿವಾಸ್ ಮೂರ್ತಿ.

16.ಕೃಷ್ಣಾರೆಡ್ಡಿ

17. ರಾಜಾ ವೆಂಕಟಪ್ಪ ನಾಯಕ 

Karnataka Election Results 2023: ಉತ್ತರ ಕನ್ನಡದಲ್ಲಿ ಕೈ ಹಿಡಿದ ಮತದಾರರು, ಬಿಜೆಪಿಗೆ ಬರೀ ಇಬ್ಬರು!

click me!