Instagram ನಲ್ಲಿ ಕರ್ನಾಟಕ ಮಾತೆ, ಕನ್ನಡಿಗರಿಗೆ ಅವಾಚ್ಯ ನಿಂದನೆ; ಜಯ ಕರ್ನಾಟಕ ಸಂಘಟನೆ ದೂರು

Published : Sep 30, 2023, 04:18 PM IST
Instagram ನಲ್ಲಿ ಕರ್ನಾಟಕ ಮಾತೆ, ಕನ್ನಡಿಗರಿಗೆ ಅವಾಚ್ಯ ನಿಂದನೆ; ಜಯ ಕರ್ನಾಟಕ ಸಂಘಟನೆ ದೂರು

ಸಾರಾಂಶ

ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಕರ್ನಾಟಕ ಮಾತೆ, ಕನ್ನಡ, ಕನ್ನಡಿಗರ ಬಗ್ಗೆ Instagram ನಲ್ಲಿ ಅವಾಚ್ಯವಾಗಿ ನಿಂದಿಸಿರುವ ಆರೋಪ ಜಯ ಕರ್ನಾಟಕ ಸಂಘಟನೆಯಿಂದ ಕೊಡಗೇಹಳ್ಳಿ ಪೊಲೀಸರಿಗೆ ದೂರು. ಆರೋಪಿಯನ್ನು ಬಂಧಿಸುವಂತೆ ಆಗ್ರಹ.

ಬೆಂಗಳೂರು (ಸೆ.30): ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಕರ್ನಾಟಕ ಮಾತೆ, ಕನ್ನಡ, ಕನ್ನಡಿಗರ ಬಗ್ಗೆ Instagram ನಲ್ಲಿ ಅವಾಚ್ಯವಾಗಿ ನಿಂದಿಸಿರುವ ಆರೋಪ ಜಯ ಕರ್ನಾಟಕ ಸಂಘಟನೆಯಿಂದ ಕೊಡಗೇಹಳ್ಳಿ ಪೊಲೀಸರಿಗೆ ದೂರು. ಆರೋಪಿಯನ್ನು ಬಂಧಿಸುವಂತೆ ಆಗ್ರಹ.

ನಿಲೋಯ್ ಮಂಡಲ ಎಂಬ ವ್ಯಕ್ತಿ ತನ್ನ Instagram ಖಾತೆಯಲ್ಲಿ ಬೆಂಗಳೂರು, ಕರ್ನಾಟಕ, ಕರ್ನಾಟಕ ಮಾತೆ ಬಗ್ಗೆ ಅವಾಚ್ಯವಾಗಿ ನಿಂದನೆ. ಉತ್ತರ ಭಾರತದವರ ಸ್ನಾನದಗೃಹ ಸ್ವಚ್ಛ ಮಾಡುವವರು ಎಂದು ನಿಂದನೆ ಮಾಡಿರುವ ಆರೋಪಿ..

ರಾಷ್ಟ್ರಧ್ವಜದ ಮೇಲೆ ಗುಂಬಜ್, ಮುಸ್ಲಿಂ ಧರ್ಮದ ಘೋಷಣೆ ಬರೆದು ಅವಮಾನ: ಆರೋಪಿ ಬಂಧನ

ದೂರಿನಲ್ಲಿ ಏನಿದೆ?

ಬೆಂಗಳೂರು ಇಲ್ಲದೆ ಕರ್ನಾಟಕ ಏನೂ ಇಲ್ಲ.ಕರ್ನಾಟಕದ ಜನ ತುಂಬಾ ಅವಿದ್ಯಾವಂತರು, ಕರ್ನಾಟಕ, ಕನ್ನಡ, ಬೆಂಗಳೂರು ಜನ ಕೇವಲ ಸ್ನಾನದ ಗೃಹ ಸ್ವಚ್ಛಗೊಳಿಸಲಷ್ಟೇ ಯೋಗ್ಯರು. ಹೀಗಾಗಿ ಜನರು ಬಂದು ನಿಮ್ಮ ಕರ್ನಾಟಕ ಮಾತೆಯನ್ನು ಬೈಯುತ್ತಾರೆ. ನಾವು ಉತ್ತರ ಭಾರತೀಯರು, ವಿಶೇಷವಾಗಿ ಬಂಗಾಳಿಗಳು ನಿಮ್ಮನ್ನು ಅಭಿವೃದ್ಧಿಪಡಿಸಲು ಇಲ್ಲಿಗೆ ಬಂದಿದ್ದೇವೆ.ನಾವು ಜೊಮೊಟೊ ಮತ್ತು ಓಲಾ ಆಟೋಗಳನ್ನು ಬಿಟ್ಟ ನಂತರ ನೀವು ಸಗಣಿ ಅನ್ನು ತಿನ್ನುತ್ತೀರಿ. ಬೆಂಗಳೂರಿನಲ್ಲಿ ನಿಮ್ಮನ್ನು ಬಿಟ್ಟರೆ ಯಾರೂ ಕನ್ನಡ ಕಲಿಯುವುದಿಲ್ಲ. ಕನ್ನಡಿಗರು ಅರಣ್ಯವಾಸಿಗಳಾಗತ್ತಾರೆ. ಕನ್ನಡ ಅಶಿಟ್ಟಿಯೆಸ್ಟ್ ಭಾಷೆಯಾಗಿದೆ. ಭಾರತದ ಅತ್ಯಂತ ಅನುಪಯುಕ್ತ ರಾಜ್ಯ ಎಂದರೆ ಅದು ಕರ್ನಾಟಕ ಎಂದು ನಿಂದಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವ ಜಯ ಕರ್ನಾಟಕ ಸಂಘಟನೆ. ಆರೋಪಿಯ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ
ಕೊಂಕಣ ರೈಲ್ವೆ ಭಾರತೀಯ ರೈಲ್ವೇ ವಿಲೀನಕ್ಕೆ ರಾಜ್ಯ ಸರ್ಕಾರಗಳ ಸಹಕಾರ ಬೇಕು: ಸಚಿವ ಅಶ್ವಿನಿ ವೈಷ್ಣವ್