ಹೊಸ ವರ್ಷಕ್ಕೆ ಸಂದೇಶ ನೀಡಿದ ಸದ್ಗರು: ಏನ್ ಹೇಳಿದ್ದಾರೆ..?

Kannadaprabha News   | Asianet News
Published : Jan 01, 2021, 08:25 AM IST
ಹೊಸ ವರ್ಷಕ್ಕೆ ಸಂದೇಶ ನೀಡಿದ ಸದ್ಗರು: ಏನ್ ಹೇಳಿದ್ದಾರೆ..?

ಸಾರಾಂಶ

ಹೊಸ ವರ್ಷಕ್ಕೆ ಸಂದೇಶ ನೀಡಿದ ಸದ್ಗರು | ಜಗ್ಗಿ ವಾಸುದೇವ್ ಹೇಳಿದ್ದಿಷ್ಟು

ಬೆಂಗಳೂರು(ಜ.01): ಹೊಸ ವರ್ಷದಲ್ಲಿ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ನಿರ್ಮಿಸುವ ಜತೆಗೆ ಪ್ರಜ್ಞಾಪೂರ್ವಕ ಮತ್ತು ಜವಾಬ್ದಾರಿಯುತ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ಸಾಂಕ್ರಾಮಿಕ ರೋಗವನ್ನು ಮೀರಿ ಸಾಗಬಹುದಾಗಿದೆ ಎಂದು ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಸಲಹೆ ನೀಡಿದ್ದಾರೆ.

ಕೋವಿಡ್‌-19 ಪೀಡಿತ ಜಗತ್ತಿಗೆ ಹೊಸ ವರ್ಷದ ಸಂದೇಶ ನೀಡಿರುವ ಸದ್ಗುರು, ‘ಕೊರೋನಾ ವೈರಸ್‌ನಿಂದ ಹಲವು ಪಾಠಗಳನ್ನು ಕಲಿಯುತ್ತಿರುವ ಈ ಸಂದರ್ಭದಲ್ಲಿ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಸರಿಹೊಂದಿಸುವ ನಮ್ಮ ಪ್ರಯತ್ನದಲ್ಲಿ ಹತಾಶಭಾವ ಮತ್ತು ತೊಡಕುಗಳು ಬರದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ.

ಗೋಡೆಗಳ ನಡುವೆ ಹೊಸ ವರ್ಷದ ಸಂಭ್ರಮ

‘ಈ ಸಾಂಕ್ರಾಮಿಕ ರೋಗವು ಹಲವು ಬಗೆಯಲ್ಲಿ ಅಡ್ಡಿ ತಂದೆಸಗಿದೆಯಾದರೂ, ಇದು ಕಡಿಮೆ ಪ್ರಮಾಣದ ಪರಿಣಾಮವನ್ನೇ ಹೊಂದಿದೆ. ನಾಗರಿಕರ ಪ್ರಜ್ಞಾಪೂರ್ವಕ ಮತ್ತು ಜವಾಬ್ದಾರಿಯುತ ನಡವಳಿಕೆಯಿಂದ ಅದನ್ನು ಸ್ಥಗಿತಗೊಳಿಸಬಹುದು. ಈ ಸಾಂಕ್ರಾಮಿಕವನ್ನು ಸೋಲಿಸಬೇಕಿದೆ. ಮನುಷ್ಯರು ವಿವಶರಾಗಿ ಪ್ರತಿಕ್ರಿಯಿಸುವ ಬದಲು ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಮೂಲಕ ಹೆಚ್ಚು ಸುಸಂಸ್ಕೃತ ಮತ್ತು ಸುಸ್ಥಿರ ಪ್ರಪಂಚದ ಹೊಸ ಸಾಧ್ಯತೆಗಳನ್ನು ಸೃಷ್ಟಿಸಬೇಕಿದೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ
ನಮಗೆ ಭಿಕ್ಷುಕರಂತೆ ಭಿಕ್ಷೆ ಹಾಕ್ತಾರೆ; ₹10,000 ಕೋಟಿ ಅನುದಾನ ಕೊಡಿ, ಇಲ್ಲ ಪ್ರತ್ಯೇಕ ರಾಜ್ಯ ಮಾಡಿ-ರಾಜು ಕಾಗೆ