ದಿಲ್ಲಿಯಲ್ಲಿ ಸಿಕ್ಕಿದ್ದ ಐಸಿಸ್‌ ಶಂಕಿತ ಉಗ್ರ ತೌಕೀರ್‌ ಬೆಂಗಳೂರಿಗೆ

Kannadaprabha News   | Asianet News
Published : Oct 27, 2021, 09:48 AM IST
ದಿಲ್ಲಿಯಲ್ಲಿ ಸಿಕ್ಕಿದ್ದ ಐಸಿಸ್‌ ಶಂಕಿತ ಉಗ್ರ ತೌಕೀರ್‌ ಬೆಂಗಳೂರಿಗೆ

ಸಾರಾಂಶ

*  ನ.8ರವರೆಗೆ ಎನ್‌ಐಎ ವಶಕ್ಕೆ ದಂತ ವೈದ್ಯ ಶೌಕೀರ್‌ *  ಐಸಿಸ್‌ ನೇಮಕ, ಹಣ ಸಂಗ್ರಹದಲ್ಲಿ ಕಿಂಗ್‌ಪಿನ್‌: ಎನ್‌ಐಎ *  ಐಸಿಸ್‌ ಸಂಘಟನೆಯಲ್ಲಿ ತೌಕೀರ್‌ ಸಕ್ರಿಯನಾಗಿದ್ದ ಬಗ್ಗೆ ಪುರಾವೆ ಪತ್ತೆ  

ಬೆಂಗಳೂರು(ಅ.27):  ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಸಿಕ್ಕಿಬಿದ್ದ ಐಸಿಸ್‌ ಶಂಕಿತ ಉಗ್ರ ದಂತ ವೈದ್ಯ ಡಾ.ಮೊಹಮ್ಮದ್‌ ತೌಕೀರ್‌ನನ್ನು(Mohammed Tauqir) ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಿದ ರಾಷ್ಟ್ರೀಯ ತನಿಖಾ ದಳ (NIA), ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ನ.8ರ ವರೆಗೆ ವಶಕ್ಕೆ ಪಡೆದಿದೆ.

ರಾಜ್ಯದಲ್ಲಿ(Karnataka) ಅತ್ಯುಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್‌ಗೆ(ISIS) ನೇಮಕಾತಿ ಹಾಗೂ ಹಣ ಸಂಗ್ರಹ ಆರೋಪದ ಮೇರೆಗೆ ದೆಹಲಿಯಲ್ಲಿ(Delhi)  ಬೆಂಗಳೂರಿನ(Bengaluru) ತಿಲಕನಗರ ಸಮೀಪದ ಬಿಸ್ಮಿಲ್ಲಾ ನಗರ ಮೂಲದವನಾದ ತೌಕೀರ್‌ನನ್ನು ಎನ್‌ಐಎ ತಂಡ ಬಂಧಿಸಿತ್ತು.

ವಿಚಾರಣೆಗಾಗಿ ಶಂಕಿತ ಐಸಿಸ್‌ ಉಗ್ರರ ದೆಹಲಿಗೆ ಕರೆದೊಯ್ದ NIA

‘ಐಸಿಸ್‌ ಸಂಘಟನೆಯಲ್ಲಿ ತೌಕೀರ್‌ ಸಕ್ರಿಯನಾಗಿದ್ದ ಬಗ್ಗೆ ತನಿಖೆ(Investigation) ವೇಳೆ ಪುರಾವೆಗಳು ಪತ್ತೆಯಾಗಿವೆ. ಹೀಗಾಗಿ ಆತನನ್ನು ಹೆಚ್ಚಿನ ತನಿಖೆ ಸಲುವಾಗಿ ತಮ್ಮ ವಶಕ್ಕೆ ನೀಡಬೇಕು’ ಎಂದು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ(Court) ತನಿಖಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ನ.8ರ ವರೆಗೆ ಆರೋಪಿಗೆ ಎನ್‌ಐಎ ಸುಪರ್ದಿಗೆ ಒಪ್ಪಿಸಿ ಆದೇಶಿಸಿತು. ಎನ್‌ಐಎ ಪರವಾಗಿ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್‌ ವಾದ ಮಂಡಿಸಿದರು.

‘ಐಸಿಸ್‌ ಸಂಘಟನೆಗೆ ಹಣ ಸಂಗ್ರಹ ಹಾಗೂ ಹೊಸ ಸದಸ್ಯರ ನೇಮಕಾತಿ ಜಾಲದ ತೌಕೀರ್‌ ಕಿಂಗ್‌ಪಿನ್‌ ಆಗಿದ್ದಾನೆ. ಇಸ್ಲಾಂ ಯುವಕರಿಗೆ(Youths) ಮೂಲಭೂತವಾದಿ(Fundamentalist) ಬೋಧಿಸಿ ಐಸಿಸ್‌ ಸಂಘಟನೆಗೆ ಸೇರಲು ಅವರಿಗೆ ತೌಕೀರ್‌ ಪ್ರಚೋದಿಸುತ್ತಿದ್ದ. ಅಲ್ಲದೆ, ತನ್ನ ಪ್ರಭಾವಕ್ಕೊಳಗಾದವರಿಗೆ ಟರ್ಕಿ ಮೂಲಕ ಸಿರಿಯಾಗೆ ಕಳುಹಿಸಿ ಐಸಿಸ್‌ಗೆ ಆತ ಸೇರಿಸಿದ್ದ. ಇನ್ನು ಐಸಿಸ್‌ ನೇಮಕಾತಿಗೆ ಅಗತ್ಯವಾದ ಹಣ ದೇಣಿಗೆ ಸಂಗ್ರಹದಲ್ಲೂ ತೌಕೀರ್‌ ಬಹುಮುಖ್ಯವಾದ ಪಾತ್ರವಹಿಸಿದ್ದಾನೆ’ ಎಂದು ನ್ಯಾಯಾಲಯಕ್ಕೆ ಎನ್‌ಐಎ ತಿಳಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ