PSI Recruitment Scam: ಜನವರಿಯಲ್ಲೇ ದೂರು ಬಂದರೂ ಮುಚ್ಚಿಟ್ಟರೇ?

Published : May 11, 2022, 06:55 AM IST
PSI Recruitment Scam: ಜನವರಿಯಲ್ಲೇ ದೂರು ಬಂದರೂ ಮುಚ್ಚಿಟ್ಟರೇ?

ಸಾರಾಂಶ

*   ಸಿದ್ದುಗೌಡ ಎಂಬಾತನ ವಿರುದ್ಧ ಜ.28ರಂದು ಡಿಸಿ-ಎಸ್ಪಿಗೆ ದೂರು *   ಸುಳಿವು ನೀಡಿದ್ದರೂ ಮೌನವಾಗಿದ್ದ ಜಿಲ್ಲಾಡಳಿತ  *  ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾದ ಪಿಎಸೈ ಅಕ್ರಮ   

ಆನಂದ್‌ ಎಂ. ಸೌದಿ

ಯಾದಗಿರಿ(ಮೇ.11):  ಪಿಎಸೈ ಅಕ್ರಮದ(PSI Recruitment Scam) ಕುರಿತು ಸುಳಿವುಗಳ ಸಮೇತ ಜನವರಿ 28ರಂದು ತಮ್ಮ ತಮ್ಮ ಕಚೇರಿಗಳಿಗೆ ಬಂದಿದ್ದ ದೂರನ್ನು ಯಾದಗಿರಿ(Yadgir) ಡಿಸಿ ಹಾಗೂ ಎಸ್ಪಿ ಗಂಭೀರವಾಗಿ ಪರಿಗಣಿಸಿದ್ದರೆ, 4 ತಿಂಗಳುಗಳ ಹಿಂದೆಯೇ ಇದು ಬಯಲಿಗೆ ಬರುತ್ತಿತ್ತೇ ಅನ್ನೋ ಪ್ರಶ್ನೆಗಳೀಗ ಕೇಳೀಬರುತ್ತಿವೆ.

ಕಚೇರಿಗಳಿಗೆ ಬಂದ ದೂರುಪತ್ರಗಳನ್ನು ಗಂಭೀರವಾಗಿ ಪರಿಗಣಿಸದೆ, ‘ಕ್ಯಾರೇ’ ಅನ್ನದ ಅಧಿಕಾರಿಗಳ ಇಂತಹ ಬೇಜವಾಬ್ದಾರಿಯಿಂದಾಗಿ ಸರ್ಕಾರವೀಗ(Government of Karnataka) ಮುಜುಗರದ ಸನ್ನಿವೇಶ ಎದುರಿಸುವಂತಾಯ್ತೇ ಎಂಬುದರ ಜೊತೆಗೆ, ಈ ಅಕ್ರಮದ ಬಗ್ಗೆ ಸಿಐಡಿ(CID) ತನಿಖೆ ನಡೆಯುತ್ತಿದ್ದರೂ ಕೂಡ ಈವರೆಗೆ ಇಂತಹುದ್ದೊಂದು ದೂರಿನ ಬಗ್ಗೆ ಮೌನ ಮುರಿಯದ ಯಾದಗಿರಿ ಜಿಲ್ಲಾ ಪೊಲೀಸ್‌(Police) ಕ್ರಮ ಅನುಮಾನಗಳನ್ನೂ ಮೂಡಿಸಿದೆ.

11 ಮಂದಿಗೆ ನ್ಯಾಯಾಂಗ ಬಂಧನ

ಹೌದು, ಈಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾದ ಪಿಎಸೈ ಅಕ್ರಮದ ಬಗ್ಗೆ ನಾಲ್ಕು ತಿಂಗಳುಗಳ (ಜ.28) ಮೊದಲೇ ನೊಂದ ಅಭ್ಯರ್ಥಿಯೊಬ್ಬರು(Candidate) ಯಾದಗಿರಿಯ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಕಚೇರಿಗಳಿಗೆ ದೂರು ನೀಡಿದ್ದರು. ಕಲಬುರಗಿ ಜಿಲ್ಲೆ ಅಫಜಲ್ಪೂರದ ಸಿದ್ದುಗೌಡ ಎಂಬಾತನ ವಿರುದ್ಧ ಬರೆದಿದ್ದ ಆ ದೂರಿನಲ್ಲಿ ಬ್ಲೂಟೂತ್‌ ಸೇರಿದಂತೆ ಅಕ್ರಮ ನಡೆದಿರಬಹುದಾದ ಪ್ರಾಕಾರಗಳ ಬಗ್ಗೆ ಒಂದಿಷ್ಟುಸುಳಿವುಗಳನ್ನು ನೀಡಲಾಗಿತ್ತು.

ಯಾದಗಿರಿ ಡಿಸ್ಟ್ರಿಕ್‌ ರಿಜರ್ವ್‌ ಪೊಲೀಸ್‌ ಪಡೆಯ ಈ ವ್ಯಕ್ತಿ, ಎಫ್‌ಡಿಎ ಪರೀಕ್ಷೆಯಲ್ಲಿ(FDA Exam) ಪಾಸಾಗಿದ್ದು, ಈಗ ಪಿಎಸೈ ಆಗಿಯೂ ಆಯ್ಕೆಯಾಗಿದ್ದಾನೆ. ಫಲಿತಾಂಶ ಪ್ರಕಟಣೆಗೂ ಮುನ್ನ ಈತ ತನ್ನ ಪಿಎಸೈ ನೇಮಕ ಕುರಿತು ಖಾತ್ರಿಪಡಿಸಿದ್ದನ್ನಲ್ಲದೆ, ಇಲ್ಲಿ ಯಾವುದೇ ಸಾಕ್ಷಿಗಳು ಸಿಗೋಲ್ಲ, ದೊಡ್ಡ ದೊಡ್ಡವರು ಶಾಮೀಲಾಗಿದ್ದಾರೆ ಎಂದು ಅಂದಾಡಿಕೊಳ್ಳುತ್ತಿದ್ದಾನೆಂದು ಕೆಲವು ಸುಳಿವುಗಳ ಮೂಲಕ ದೂರಿನಲ್ಲಿ ತಿಳಿಸಲಾಗಿತ್ತು.

Yadgir: ತಾಯಿಗಾಗಿ ದೇವಸ್ಥಾನ ಕಟ್ಟಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ ನಿರ್ಮಾಣ

ಇದೇ ಫೆ.1 ರಂದು ‘ಕನ್ನಡಪ್ರಭ’ದಲ್ಲಿ(Kannada Prabha) ಪ್ರಕಟಗೊಂಡಿದ್ದ ಇಂತಹ ದೂರಿನ ಬಗ್ಗೆ ಸುದ್ದಿ ಗಮನ ಸೆಳೆದಿತ್ತು. ಗಂಭೀರ ಆರೋಪಗಳ ಈ ದೂರು ಕುರಿತು ಆಗಲೇ ತನಿಖೆ(Investigation) ನಡೆಸಿದ್ದರೆ, ಬಹುದೊಡ್ಡ ಅಕ್ರಮವೊಂದನ್ನು ಬಯಲಿಗೆಳೆದ ಕೀರ್ತಿಯೂ ಇಲ್ಲಿನವರ ಮುಡಿಗೇರುತ್ತಿತ್ತು. ಆದರೆ, ಇದನ್ನು ಹಗುರವಾಗಿ ತೆಗೆದುಕೊಂಡಂತಿದ್ದ ಆಡಳಿತದ ನಿಷ್ಕಾಳಜಿಯಿಂದಾಗಿ ಸರ್ಕಾರದ ಮುಜುಗರದ ಸನ್ನಿವೇಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ದೂರಿನ ಬಗ್ಗೆ ಪರಿಶೀಲಿಸುತ್ತೇನೆ

ಹೌದು, ಈ ಬಗ್ಗೆ ಈಗ ಪರಿಶೀಲಿಸುತ್ತೇನೆ. ದೂರು ಪತ್ರದಲ್ಲಿನ ಅಂಶಗಳನ್ನು ನೋಡಿ, ಸಂಬಂಧಿತರ ಗಮನಕ್ಕೆ ತರುತ್ತೇನೆ ಅಂತ ಯಾದಗಿರಿ ಎಸ್ಪಿ ಡಾ. ವೇದಮೂರ್ತಿ ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ