ಮೋಟಿವೇಷನ್ ಸ್ಪೀಚ್ ಮಾಡಲು ಬಿಗ್ ಬಾಸ್‌ಗೆ ಹೋಗಿದ್ದೆ: ಶಾಸಕ ಪ್ರದೀಪ್ ಈಶ್ವರ್

Published : Oct 11, 2023, 05:27 AM IST
ಮೋಟಿವೇಷನ್ ಸ್ಪೀಚ್ ಮಾಡಲು ಬಿಗ್ ಬಾಸ್‌ಗೆ ಹೋಗಿದ್ದೆ: ಶಾಸಕ ಪ್ರದೀಪ್ ಈಶ್ವರ್

ಸಾರಾಂಶ

ನಾನು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಕೆಲವೇ ಗಂಟೆಗಳ ಕಾಲ ಹೋಗಿ ಬಂದಿದ್ದೇನೆ. ಇದಕ್ಕೆ ಯಾರನ್ನು ಕೇಳುವುದು, ಅನುಮತಿ ಪಡೆಯುವ ಅಗತ್ಯ ವಿಲ್ಲ. ವಿರೋಧಮಾಡುವವರು, ಟ್ರೋಲ್ ಮಾಡುವವರು ಮಾಡಿಕೊಳ್ಳಲಿ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ (ಅ.11) : ನಾನು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಕೆಲವೇ ಗಂಟೆಗಳ ಕಾಲ ಹೋಗಿ ಬಂದಿದ್ದೇನೆ. ಇದಕ್ಕೆ ಯಾರನ್ನು ಕೇಳುವುದು, ಅನುಮತಿ ಪಡೆಯುವ ಅಗತ್ಯ ವಿಲ್ಲ. ವಿರೋಧಮಾಡುವವರು, ಟ್ರೋಲ್ ಮಾಡುವವರು ಮಾಡಿಕೊಳ್ಳಲಿ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊ ೦ದಿಗೆ ಮಾತನಾಡಿದ ಅವರು, ಬಿಗ್ ಬಾಸ್(Bigg Boss Kannada) ಮನೆ ನನ್ನ ಕಚೇರಿಗೆ ಸಮೀಪದಲ್ಲೇ ಇದೆ. ಪ್ರೇರಣಾತ್ಮಕ ಭಾಷಣ(motivational speech) ಮಾಡಲು ಆಹ್ವಾನಿಸಿದ್ದರು. ತಂದೆ ತಾಯಿ ಬಗ್ಗೆ ಮಾತನಾಡಿ ಬಂದಿದ್ದೇನೆ. ಕೇವಲ 3 ಗಂಟೆಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದಿದ್ದೇನೆ. ಹಾಗಾಗಿ ಸಿಎಂ, ಡಿಸಿಎಂ, ಸಭಾಧ್ಯಕ್ಷರ ಅನುಮತಿ ಪಡೆದು ಹೋಗುವ ಅಗತ್ಯವಿಲ್ಲ ಎಂದು ಭಾವಿಸಿದ್ದೇನೆ ಎಂದರು.

ಚಿಕ್ಕಬಳ್ಳಾಪುರ ಜನರ ಮನಸ್ಸೇ ನನಗೆ ಬಿಗ್‌ಬಾಸ್‌, ಶಾಸಕ ಪ್ರದೀಪ್‌ ಈಶ್ವರ್‌ ಕೌಂಟರ್‌!

ಝೀಕನ್ನಡವಾಹಿನಿ(zee kannada)ಯವರು ಅನುಬಂಧ ಅವಾರ್ಡ್ ಪ್ರದಾನ ಕಾಠ್ಯಕ್ರಮಕ್ಕೆ ಕರೆದಿದ್ದರೂ ಹೋಗಲು ಆಗಿರಲಿಲ್ಲ. ಈಗ ಬಿಗ್ ಬಾಸ್ ಗೆ ಕೆಲವೇ ಗಂಟೆ ಅಂತ ಕರೆದರು. ಹಾಗಾಗಿ ಹೋಗಿದ್ದೆ. ಒಂದು ಶೋಗೆ ಹೈಪ್ ಬರಬೇಕು ಅನ್ನೋ ಕಾರಣಕ್ಕೆ ಒಂದು ದಿನ ಯಾರಿಗೂ ಸಿಗಲಿಲ್ಲ. ರಾತ್ರಿ 8.30ಕ್ಕೆ ಒಳಗೆ ಹೋಗಿ ನನ್ನ ಖಾಸಗಿ ಸಮಯವನ್ನ ಮಾತ್ರ ಬಳಕೆ ಮಾಡಿದ್ದೇನೆ. ನಾನು ಈಗಾಗಲೇ ಜನರ ಮನಸಲ್ಲಿ ಬಿಲ್ಡ್ ಆಗಿದ್ದೇನೆ, ನನಗೆ ಬಿಲ್ಡಪ್ ಅಗತ್ಯ ಇಲ್ಲ ಎಂದರು 

ಬಿಗ್​ಬಾಸ್​ ಮನೆಯಿಂದ ಹೊರಬಂದ ಶಾಸಕ ಪ್ರದೀಪ್​ ಈಶ್ವರ್​: ಕೊಟ್ಟ ಕಾರಣ ಕೇಳಿ ಟ್ರೋಲ್​ಗಳ ಸುರಿಮಳೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್ - ಪೊಲೀಸರ ಬಲೆಗೆ ಬಿದ್ದ ಮೂವರು!