ಮಾನವ ಕಳ್ಳ ಸಾಗಣೆಗೆ ಸಹಕಾರ: ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಸೆರೆ

Published : Oct 29, 2019, 10:01 AM IST
ಮಾನವ ಕಳ್ಳ ಸಾಗಣೆಗೆ ಸಹಕಾರ: ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಸೆರೆ

ಸಾರಾಂಶ

ಹಣ ಪಡೆದು, ಸೂಕ್ತ ದಾಖಲೆ ಇಲ್ಲದ ಇಬ್ಬರು ಮಹಿಳೆಯರಿಗೆ ಇಮಿಗ್ರೇಷನ್‌ ಕ್ಲಿಯರೆನ್ಸ್‌ ಕೊಡಿಸಲು ಯತ್ನಿಸಿದ ಆರೋಪದ ಮೇಲೆ ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. ಮಹಿಳೆಯರಿಬ್ಬರನ್ನು ಕುವೈತ್‌ ದೇಶಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಬೆಂಗಳೂರು(ಅ.29): ಹಣ ಪಡೆದು, ಸೂಕ್ತ ದಾಖಲೆ ಇಲ್ಲದ ಇಬ್ಬರು ಮಹಿಳೆಯರಿಗೆ ಇಮಿಗ್ರೇಷನ್‌ ಕ್ಲಿಯರೆನ್ಸ್‌ ಕೊಡಿಸಲು ಯತ್ನಿಸಿದ ಆರೋಪದ ಮೇಲೆ ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ.

ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಮಲ್ಲಿಕಾರ್ಜುನ ಬಂಧಿತ. ಮಹಿಳೆಯರಿಬ್ಬರನ್ನು ಕುವೈತ್‌ ದೇಶಕ್ಕೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸರು ಹೇಳಿದ್ದಾರೆ.

ಮೈಸೂರಲ್ಲೇ ಫಿಲ್ಮ್‌ಸಿಟಿ ನಿರ್ಮಾಣಕ್ಕೆ ಚಿತ್ರರಂಗ ಆಗ್ರಹ

ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಮಲ್ಲಿಕಾರ್ಜುನ್‌ಗೆ ಏಜೆಂಟ್‌ ನರಸಿಂಹಯ್ಯ ಎಂಬಾತ ಫೋನ್‌ ಪೇ ಮೂಲಕ .5 ಸಾವಿರ ಕಳುಹಿಸಿ, ಅ.24ರಂದು ಇಬ್ಬರು ಮಹಿಳೆಯರು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಕೆಲಸಕ್ಕಾಗಿ ಕುವೈತ್‌ಗೆ ಹೋಗುತ್ತಿದ್ದು, ಪ್ರವಾಸ ವೀಸಾದಡಿ ಕೊಲಂಬೋಗೆ ತೆರಳಿ, ಕೆಲಸದ ವೀಸಾ ತೋರಿಸಿ ಅಲ್ಲಿಂದ ಕುವೈತ್‌ಗೆ ತೆರಳುತ್ತಾರೆ. ನಿಯಮದ ಪ್ರಕಾರ ಕೆಲವೊಂದು ದಾಖಲೆ ಹೊಂದಿಸುವುದು ಕಷ್ಟವಾಗಿದೆ. ಕುವೈತ್‌ಗೆ ಹೋಗುವುದನ್ನು ಮರೆಮಾಚಿ ಮಹಿಳೆಯರಿಬ್ಬರಿಗೆ ಚೆಕ್‌ ಇನ್‌ ಮತ್ತು ಇಮಿಗ್ರೇಷನ್‌ನಲ್ಲಿ ಕ್ಲಿಯರೆನ್ಸ್‌ ಕೊಡಿಸುವಂತೆ ಸೂಚಿಸಿದ್ದ.

ಕಾಂಗ್ರೆಸ್‌ಗೆ ಹಾರುವ ಸುಳಿವು ನೀಡಿದ ಬಿಜೆಪಿ ಮುಖಂಡ

ಅದರಂತೆ ಮಲ್ಲಿಕಾರ್ಜುನ್‌, ಮಹಿಳೆಯರಿಗೆ ಇಮಿಗ್ರೇಷನ್‌ನಲ್ಲಿ ಕ್ಲಿಯರೆನ್ಸ್‌ ಕೊಡಿಸಲು ಯತ್ನಿಸಿದ್ದು, ಅನುಮಾನಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಮಹಿಳೆಯರನ್ನು ಮಾನವ ಕಳ್ಳಸಾಗಾಣಿಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ