ತೋಟಗಾರಿಕಾ ಇಲಾಖೆಯಿಂದ ರೈತರ ನೆರವಿಗೆ ಹೊಸ ಕೇಂದ್ರ

Kannadaprabha News   | Asianet News
Published : Mar 29, 2021, 09:13 AM ISTUpdated : Mar 29, 2021, 09:20 AM IST
ತೋಟಗಾರಿಕಾ ಇಲಾಖೆಯಿಂದ ರೈತರ ನೆರವಿಗೆ ಹೊಸ ಕೇಂದ್ರ

ಸಾರಾಂಶ

ಅಗತ್ಯವಿರುವ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಆಯ್ದ ತೋಟಗಾರಿಕಾ ಕ್ಷೇತ್ರಗಳು ಮತ್ತು ನ​ರ್ಸ​ರಿ​ಗ​ಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.

ಬೆಂಗಳೂರು (ಮಾ.29):  ರೈತರು ಬೆಳೆಯಬಹುದಾದ ಬೆಳೆಗಳು ಮತ್ತು ಅವುಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಆಯ್ದ ತೋಟಗಾರಿಕಾ ಕ್ಷೇತ್ರಗಳು ಮತ್ತು ನ​ರ್ಸ​ರಿ​ಗ​ಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಭಾ​ರತೀಯ ತೋ​ಟ​ಗಾ​ರಿಕಾ ಸಂಶೋ​ಧನಾ ಸಂಸ್ಥೆ (​ಐ​ಐ​ಎ​ಚ್‌​ಆ​ರ್‌​) ಮ​ತ್ತು ​ಬೆಂಗ​ಳೂ​ರು ಕೃಷಿ ವಿವಿಯ ಸಹಯೋಗದೊಂದಿಗೆ ‘ಅಗ್ರೊ ಕ್ಲೈಮೆ​ಟಿಕ್‌ ಝೋನ್‌​’ (ಕೃಷಿ ಭೌ​ಗೋ​ಳಿಕ ವಲಯ) ಕೇಂದ್ರಗ​ಳನ್ನು ತೆ​ರೆ​ಯಲು ನಿ​ರ್ಧ​ರಿ​ಸಿದ್ದು, ಈ ಕೇಂದ್ರಗಳಲ್ಲಿ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.

ಆ ಮೂಲಕ ಐ​ಐ​ಎ​ಚ್‌​ಆರ್‌ ಮತ್ತು ಕೃಷಿ ವಿವಿಗಳಲ್ಲಿ ಅ​ಭಿ​ವೃದ್ಧಿ ಪ​ಡಿ​ಸಿದ ಹೊಸ ಹೊಸ ತಂತ್ರ​ಜ್ಞಾ​ನ​ಗಳು, ಅ​ಧಿಕ ಇ​ಳು​ವರಿ ಕೊ​ಡುವ ಹೊಸ ತ​ಳಿ​ಗಳ (​ಹೂವು, ಹಣ್ಣು, ತ​ರ​ಕಾರಿ ಬೆ​ಳೆ​ಗ​ಳು​) ಬಗ್ಗೆ ಈ ಕೇಂದ್ರಗಳ ಮೂ​ಲಕ ರೈ​ತ​ರಿಗೆ ಮಾಹಿತಿಯನ್ನು ಒದಗಿಸಲಿದೆ. ಜೊತೆಗೆ, ಕೃಷಿ ವಿ​ವಿಯ ವಿ​ಜ್ಞಾ​ನಿ​ಗಳು ಮ​ತ್ತು ತ​ಜ್ಞರು ​ರಾ​ಜ್ಯದ ಯಾವ ಭಾ​ಗದ ರೈ​ತ​ರು ಯಾವ ಮಾ​ದ​ರಿಯ ಭೂಮಿ ಹೊಂದಿ​ದ್ದಾರೆ. ಅ​ಲ್ಲಿನ ವಾ​ತಾ​ವ​ರಣ ಎಂಥ​ದ್ದು, ಆ ಭೂ​ಮಿ​ಯಲ್ಲಿ ಎಂತಹ ಬೆಳೆ ಸೂಕ್ತ ಎಂಬು​ದನ್ನು ರೈ​ತ​ರಿಗೆ ವಿವರಿಸಲಿದ್ದಾರೆ.

ತೋಟಗಾರಿಕೆಯಿಂದ ರೈತರಿಗೆ ವರ್ಷವಿಡೀ ಭರ್ಜರಿ ಆದಾಯ ..

ರಾಜ್ಯದಲ್ಲಿ ಸು​ಮಾರು 400ಕ್ಕೂ ಹೆಚ್ಚು ತೋ​ಟ​ಗಾ​ರಿಕೆ ಕ್ಷೇ​ತ್ರ​ಗ​ಳಿವೆ. ಇವುಗಳ ಪೈಕಿ ಮೊ​ದಲ ಹಂತ​ದಲ್ಲಿ ಹತ್ತು ತೋಟಗಾರಿಕಾ ಕ್ಷೇ​ತ್ರ​ಗ​ಳಲ್ಲಿ ಕಿ​ಯೋಸ್ಕ್‌ಗ​ಳ​ನ್ನು​ ಅಳವಡಿಸಲಾಗುವುದು. ಈ ಕಿಯೋಸ್ಕ್‌ಗಳ ಮೂಲಕ ರೈ​ತ​ರಿಗೆ ಬೇ​ಕಾದ ಮಾಹಿತಿಗಳನ್ನು ಒ​ದ​ಗಿ​ಸ​ಲಾ​ಗು​ವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೋ​ಟ​ಗಾ​ರಿಕೆ ಕ್ಷೇತ್ರ ಮತ್ತು ನ​ರ್ಸ​ರಿ​ಗ​ಳಲ್ಲಿ ಈ​ಗಾ​ಗಲೇ ರೈ​ತ​ರಿಗೆ ಬೇ​ಕಾದ ಸ​ಸಿ​ಗಳನ್ನು ನೀ​ಡ​ಲಾ​ಗು​ತ್ತಿ​ದೆ. ಆ​ದರೆ, ಐ​ಐ​ಎ​ಚ್‌​ಆರ್‌ ಮತ್ತು ಕೃಷಿ ವಿವಿ ಜೊತೆಗೆ ಹೊಸ ತಂತ್ರ​ಜ್ಞಾ​ನ​ಗಳು ಮತ್ತು ಅ​ಧಿಕ ಇ​ಳು​ವರಿ ಕೊ​ಡುವ ಹೊಸ ತ​ಳಿ​ಗಳ ಬಗ್ಗೆ ಮಾ​ಹಿತಿ ಸಿ​ಗು​ತ್ತಿ​ರ​ಲಿಲ್ಲ. ಇದೀಗ ಈ ಮಾ​ಹಿ​ತಿಯೊಂದಿಗೆ ರೈ​ತ​ರಿಗೆ ಅ​ಗತ್ಯ ತ​ರ​ಬೇ​ತಿ​ಗ​ಳನ್ನು ಕೂಡ ನೀ​ಡ​ಲಾ​ಗು​ವುದು ಎಂದು ತೋಟಗಾರಿಕೆ ಇ​ಲಾಖೆ ನಿ​ರ್ದೇ​ಶಕಿ ಬಿ. ಫೌ​ಜಿಯಾ ತ​ರುನ್ನಂ ತಿ​ಳಿ​ಸಿ​ದರು.

ತೋಟಗಾರಿಕಾ ಕ್ಷೇತ್ರ ಮತ್ತು ನ​ರ್ಸ​ರಿ​ಗ​ಳಲ್ಲಿ ಮಾ​ದರಿ ತಾ​ಕು​ಗ​ಳನ್ನೂ ನಿ​ರ್ಮಿ​ಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಐ​ಐ​ಎ​ಚ್‌​ಆ​ರ್‌​ನೊಂದಿಗೆ ಪ್ರಾ​ಥ​ಮಿಕ ಹಂತದ ಮಾ​ತು​ಕತೆ ನ​ಡೆ​ದಿದೆ ಎಂದು ಅವರು ವಿವರಿಸಿದರು.

ಯಾವ ಮಾಹಿತಿ ಲಭ್ಯ?:

ಈ ಕಿಯೋಸ್ಕ್‌ಗಳಲ್ಲಿ ರೈ​ತ​ರಿಗೆ ಅ​ಧಿಕ ಇ​ಳು​ವರಿ ಕೊ​ಡುವ ಬಿ​ತ್ತನೆ ಬೀ​ಜಗಳು, ಹ​ಣ್ಣಿನ ಸ​ಸಿ​ಗಳು, ಬೆಳೆ ಕೊಯ್ಲು ಮಾ​ಡಲು ಬೇ​ಕಾದ ಯಂತ್ರೋಪಕರಣಗಳ ಮಾ​ಹಿತಿ, ರೈ​ತ ಉ​ದ್ಯ​ಮಿ​ಗ​ಳಿ​ಗಾಗಿ ಹೊಸ ತಂತ್ರ​ಜ್ಞಾ​ನ​ಗಳು, ಅಂತರ ಬೆಳೆ ಬೇ​ಸಾಯ ಪ​ದ್ಧ​ತಿ, ಕೀಟನಾ​ಶ​ಕ​ಗಳನ್ನು ಹೇಗೆ ಬ​ಳ​ಸ​ಬೇಕು ಮತ್ತು ಎ​ಷ್ಟುಪ್ರಮಾಣದಲ್ಲಿ ಬ​ಳ​ಸ​ಬೇ​ಕು ಎಂಬದರ ಕುರಿತ ಮಾ​ಹಿತಿ, ಜೊತೆಗೆ ರೈ​ತ​ರಿಗೆ ಬೇ​ಕಾದ ಪ​ರಿ​ಕ​ರ​ಗಳ ಮಾ​ರಾ​ಟಕ್ಕೂ ವ್ಯ​ವಸ್ಥೆ ಮಾ​ಡ​ಲಾ​ಗು​ವುದು ಎಂದು ಅವರು ತಿಳಿಸಿದ್ದಾರೆ.

ಕೃಷಿ ತಂತ್ರ​ಜ್ಞಾನ ಮತ್ತು ವಿವಿಧ ಬೆಳೆಗಳ ತ​ಳಿ​ಗಳ ಕುರಿತು ಮಾ​ಹಿತಿ ಪ​ಡೆ​ಯಲು ದೂ​ರದ ಪ್ರ​ದೇ​ಶ​ಗ​ಳಿಂದ ರೈ​ತರು ಬೆಂಗ​ಳೂರು ನಗರಕ್ಕೆ ಬರುವುದನ್ನು ತಪ್ಪಿಸಲಾಗುವುದು. ಅಲ್ಲದೆ, ರೈತರಿಗೆ ​ತಾವು ಇ​ರು​ವ​ಲ್ಲಿಗೇ ಮಾ​ಹಿತಿ ತ​ಲು​ಪಿ​ಸು​ವುದು ಅಗ್ರೊ ಕ್ಲೈ​ಮೆ​ಟಿಕ್‌ ವ​ಲ​ಯ​ ಸ್ಥಾ​ಪನೆಯ ಮುಖ್ಯ ಉ​ದ್ದೇಶ.

-ಬಿ.ಫೌ​ಜಿಯಾ ತ​ರುನ್ನಂ, ನಿ​ರ್ದೇ​ಶಕಿ, ರಾಜ್ಯ ತೋಟಗಾರಿಕೆ ಇ​ಲಾಖೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka Rains: ರಾಜ್ಯದಲ್ಲಿ ಆಲಿಕಲ್ಲು ಮಳೆ ಅಬ್ಬರ: ಹಲವು ಜಿಲ್ಲೆಗಳಲ್ಲಿ ಜನರಿಗೆ ಅಚ್ಚರಿ
ಯುಗಾದಿ ಸಂಭ್ರಮಕ್ಕೆ ಸರ್ಕಾರಿ ನೌಕರರಿಗೆ ಕಹಿ, ಹಬ್ಬದ ದಿನವೂ ಕೆಲಸಕ್ಕೆ ಬರುವಂತೆ ಸರ್ಕಾರ ಆದೇಶ!