ಕಡತಕ್ಕೆ ಸಹಿ ಮಾಡಿ ಬಂದು, ಪೊಲೀಸರಿಗೆ ಶಾಕ್ ಕೊಟ್ಟ ಸಿಎಂ ಹೆಚ್ಡಿಕೆ

Published : Jul 10, 2019, 04:12 PM ISTUpdated : Jul 10, 2019, 04:39 PM IST
ಕಡತಕ್ಕೆ ಸಹಿ ಮಾಡಿ ಬಂದು, ಪೊಲೀಸರಿಗೆ ಶಾಕ್ ಕೊಟ್ಟ ಸಿಎಂ ಹೆಚ್ಡಿಕೆ

ಸಾರಾಂಶ

ಯಾವುದೇ ಮುನ್ಸೂಚನೆ ಇಲ್ಲದೆ ಗೃಹ ಕಚೇರಿ ಕೃಷ್ಣಾಗೆ ಸಿಎಂ ಕುಮಾರಸ್ವಾಮಿ ದಿಢೀರ್ ಭೇಟಿ ನೀಡಿದ್ದು, ಅಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸರು ಅಚ್ಚರಿಗೊಳಗಾಗಿದ್ದಾರೆ.

ಬೆಂಗಳೂರು (ಜು.10): ರಾಜ್ಯದಲ್ಲಿ ಪೊಲಿಟಿಕಲ್ ಹೖಡ್ರಾಮ ನಡೆಯುತ್ತಿರುವಾಗಲೇ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಪೊಲೀಸರಿಗೆ ಶಾಕ್ ಕೊಟ್ಟಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಗೃಹ ಕಚೇರಿ ಕೃಷ್ಣಾಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ಅಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸರು ಅಚ್ಚರಿಗೊಳಗಾಗಿದ್ದಾರೆ.

ಸಾಮಾನ್ಯವಾಗಿ ಸಿಎಂ ಗೃಹ ಕಚೇರಿಗೆ ಬರುವಾಗ ಅಲ್ಲಿನ ಸಿಬ್ಬಂದಿಗೆ ಮುಂಚಿತವಾಗಿಯೇ ಸೂಚನೆ ಸಿಕ್ಕಿರುತ್ತದೆ. ಈ ಬಾರಿ ಸಿಎಂ ಕೃಷ್ಣಾಗೆ ಬರೋದು ಪೊಲೀಸರಿಗೆ ಗೊತ್ತೇ ಇರಲಿಲ್ಲ. ಪೊಲೀಸರಿಗೆ ಯಾವುದೇ ಮೆಸೇಜ್ ಕೊಡದೇ ದಿಢೀರ್ ಆಗಿ ಸಿಎಂ ಭೇಟಿ ನೀಡಿದ್ದಾರೆ. ಸಿಎಂ ದಿಢೀರ್ ಭೇಟಿ ಕೊಟ್ಟ ಕಾರಣ ಗೃಹ ಕಚೇರಿ ಕೃಷ್ಣಾದಲ್ಲೂ ಹೆಚ್ಚಿನ ಪೊಲೀಸರು ಇರಲಿಲ್ಲ. ಅನಿರೀಕ್ಷಿತವಾಗಿ ಸಿಎಂ ಅವರನ್ನು ನೋಡಿ ಗಾಬರಿಗೊಂಡ ಪೊಲೀಸರು ಸಡನ್ ಆಗಿ ಗೇಟ್ ತೆರೆದಿದ್ದಾರೆ. ಈ ಮೊದಲು ಸಿಎಂ ಬರ್ತಾರೆ ಅನ್ನೋ ಮಾಹಿತಿ ಸಿಕ್ಕಿದಾಗ ಭದ್ರತಾ ಪೊಲೀಸರು ಮುಂಚಿತವಾಗಿ ಕಚೇರಿ ಗೇಟ್ ಓಪನ್ ಮಾಡಿಡುತ್ತಿದ್ದರು.

ಸರ್ಕಾರ ಉರುಳೋ ಭೀತಿ: ಕಡತಗಳಿಗೆ ಸಹಿ ಹಾಕೋದ್ರಲ್ಲಿ ಸಿಎಂ ಫುಲ್ ಬ್ಯುಸಿ

ಆದರೆ ಇಂದು ಅನಿರೀಕ್ಷಿತವಾಗಿ ಬಂದಿದ್ದು, ಸಿಎಂ ಕುಮಾರಸ್ವಾಮಿ ‌ನಡೆಯಿಂದ ಪೊಲೀಸರು ಕಂಗಾಲಾಗಿದ್ದಾರೆ. ಈ ಘಟನೆಯ ಬೆನ್ನಲ್ಲೇ 
ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಸಿಎಂ ತೀವ್ರ ತಲೆಕೆಡಿಸಿಕೊಂಡಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಪೂರ್ವನಿಗದಿಯಂತೆ ಸಿಎಂ ಕಾರು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ರಾಜಭವನದತ್ತ ತೆರಳಬೇಕಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ