ಕೇಳುವ ಮೊದಲೇ ತಮಿಳುನಾ​ಡಿ​ಗೆ ನೀರು: ಕಾಂಗ್ರೆಸ್‌ ಸರ್ಕಾರದ ಸಿ.ಟಿ.​ರ​ವಿ ಕಿಡಿ

Published : Sep 01, 2023, 01:06 PM IST
ಕೇಳುವ ಮೊದಲೇ ತಮಿಳುನಾ​ಡಿ​ಗೆ ನೀರು: ಕಾಂಗ್ರೆಸ್‌ ಸರ್ಕಾರದ ಸಿ.ಟಿ.​ರ​ವಿ ಕಿಡಿ

ಸಾರಾಂಶ

ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡದೆ ಇದ್ದರೆ ಕಷ್ಟವಾಗಲಿದೆ. ಬೆಲೆ ಏರಿ​ಕೆ ಹಣದುಬ್ಬರಕ್ಕೆ ಕಾರಣವಾಗಲಿದೆ. ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡುತ್ತಿಲ್ಲ. ದೂರದೃಷ್ಟಿ ಇಲ್ಲದೆ ಸರ್ಕಾರ ನಡೆ​ಸ​ಲಾ​ಗು​ತ್ತಿ​ದೆ. ಗ್ಯಾರಂಟಿ ಜಾರಿ ಮಾಡಿ ರಾಜ್ಯದವನ್ನು ಸಾಲಕ್ಕೆ ತಳ್ಳುತ್ತಿದ್ದಾರೆ ಎಂದ​ ಮಾಜಿ ಸಚಿವ ಸಿ.ಟಿ.​ರವಿ 

ನವ​ದೆ​ಹ​ಲಿ(ಸೆ.01):  ಕಾಂಗ್ರೆ​ಸ್‌ಗೆ ರಾಜ್ಯದ ಹಿತ​ಕ್ಕಿಂತ ‘ಇಂಡಿಯಾ’ ಒಕ್ಕೂಟ ಮುಖ್ಯ​ವಾ​ಗಿ​ದೆ. ಅದಕ್ಕಾಗಿ ಕೇಳುವ ಮೊದಲೇ ತಮಿ​ಳು​ನಾಡಿಗೆ ನೀರು ಹರಿ​ಸಿ​ದೆ ಎಂದು ಮಾಜಿ ಸಚಿವ ಸಿ.ಟಿ.​ರವಿ ಆರೋ​ಪಿ​ಸಿ​ದ​ರು.

ದೆಹ​ಲಿ​ಯಲ್ಲಿ ಗುರು​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿ, ಕಾಂಗ್ರೆಸ್‌ ಸರ್ಕಾರ ಬುಧ​ವಾರ ವೈಭ​ವದ ಸಂಭ್ರಮ(ಗೃಹ​ಲಕ್ಷ್ಮೀ ಗ್ಯಾರಂಟಿ ಉದ್ಘಾ​ಟ​ನೆ ಯೋಜ​ನೆ​) ಮಾಡಿ​ದೆ. ಆದರೆ ರಾಜ್ಯದ ಜನ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ರಾಜ್ಯದಲ್ಲಿ ಶೇ.70ರಷ್ಟು ಮಳೆ ಕೊರ​ತೆ​ಯಾ​ಗಿ​ದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷ ಸಂಭ್ರಮ ಮಾಡುತ್ತಿದೆ. ರಾಜ್ಯದ ಹಿತ ಕಾಪಾಡುವ ಕ್ರಮ ತೆಗೆದುಕೊಳ್ಳಬಹುದಿತ್ತು. ತಮಿ​ಳು​ನಾಡು ಕೇಳುವ ಮೊದಲೇ ನೀರು ಹರಿ​ಸಿ​ದೆ ಎಂದ​ರು.

ಭ್ರಮೆಯಲ್ಲಿರೋ ದುರಂಹಕಾರಿ ಬಳಿ ನಾನು ಮಾತಾಡಲ್ಲ: ಸಿ.ಟಿ.ರವಿ ವಿರುದ್ಧ ರೇಣು ಕಿಡಿ

ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡದೆ ಇದ್ದರೆ ಕಷ್ಟವಾಗಲಿದೆ. ಬೆಲೆ ಏರಿ​ಕೆ ಹಣದುಬ್ಬರಕ್ಕೆ ಕಾರಣವಾಗಲಿದೆ. ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡುತ್ತಿಲ್ಲ. ದೂರದೃಷ್ಟಿ ಇಲ್ಲದೆ ಸರ್ಕಾರ ನಡೆ​ಸ​ಲಾ​ಗು​ತ್ತಿ​ದೆ. ಗ್ಯಾರಂಟಿ ಜಾರಿ ಮಾಡಿ ರಾಜ್ಯದವನ್ನು ಸಾಲಕ್ಕೆ ತಳ್ಳುತ್ತಿದ್ದಾರೆ ಎಂದ​ರು.

ಇದೇ ವೇಳೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಕೇರಳದ ಸಂಸದ. ಅಲ್ಲದೆ, ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ. ಆದರೂ ಅವರು ರಾಜ್ಯ ಸರ್ಕಾ​ರದ ಕಾರ್ಯ​ಕ್ರ​ಮ​ದಲ್ಲಿ ಭಾಗಿ​ಯಾ​ಗಿ​ದ್ದಾರೆ ಎಂದು ಕಿಡಿ​ಕಾ​ರಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್