
ಮಲ್ಲಿಕಾರ್ಜುನ ಹೊಸಮನಿ
ಜಮಖಂಡಿ(ಅ.30): ಗಣಿಧಣಿ ಜನಾರ್ಧನ್ ರೆಡ್ಡಿ ಮೇಲೆ ತಮಗೇಕೆ ಕೋಪ ಇದೆ ಎಂಬ ರಹಸ್ಯವನ್ನು ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಬಿಚ್ಚಿಟ್ಟಿದ್ದಾರೆ.
ಜಮಖಂಡಿಯ ಕುರುಬ ಸಮಾಜದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಳ್ಳಾರಿಯಲ್ಲಿ ತಾವು ಸಭೆ ನಡೆಸಲು ರೆಡ್ಡಿ ಸಹೋದರರು ಜಾಗ ಸಿಗದಂತೆ ಮಾಡಿದ್ದರು ಎಂದು ಹೇಳಿದ್ದಾರೆ.
ರೆಡ್ಡಿ ಸಹೋದರರಿಗೆ ಹೆದರಿ ಆಗಿನ ಬಳ್ಳಾರಿ ಜಿಲ್ಲಾಧಿಕಾರಿ ಶಾಮಿಯಾನ ಹಾಕಲೂ ಅನುಮತಿ ನೀಡಿರಲಿಲ್ಲ ಎಂದು ಸಿದ್ದು ಹಳೆಯ ದಿನಗಳನ್ನು ನೆನೆದಿದ್ದಾರೆ. ಅಲ್ಲದೇ ಗಣಿಗಾರಿಕೆ ನಡೆಯುವ ಜಾಗದಲ್ಲಿ ಭಾಷಣಕ್ಕೆ ಹೋದಾಗ ರೌಡಿಗಳನ್ನು ಕಳುಹಿಸಿ ಬೆದರಿಕೆಯೊಡ್ಡುವ ಪ್ರಯತ್ನ ಕೂಡ ನಡೆದಿತ್ತಂತೆ.
"
ತಾವು ಬಳ್ಳಾರಿಗೆ ಹೋದಾಗ ರೌಡಿಗಳನ್ನು ತಮ್ಮ ಕಾರಿನ ಹಿಂದೆ ಬಿಡಲಾಗಿತ್ತು ಎಂದ ಸಿದ್ದರಾಮಯ್ಯ, ತಾವು ಹಾದು ಹೋಗುಬೇಕಿದ್ದ ರಸ್ತೆಯಲ್ಲಿ ಲಾರಿಯಲ್ಲಿ ಮಣ್ಣು ತಂದು ಸುರಿದು ಅಡ್ಡಗಟ್ಟಿದ್ದರು ಎಂದು ರೆಡ್ಡಿ ಸಹೋದರರ ವಿರುದ್ಧ ಆರೋಪ ಮಾಡಿದರು.
ಆಗಲೇ ರೆಡ್ಡಿ ಸಹೋದರರ ಬಳ್ಳಾರಿ ರಿಪಬ್ಲಿಕ್ ನ್ನು ನಾಶ ಮಾಡಿ ಕಾನೂನು ಸುವ್ಯವಸ್ಥೆ ಸ್ಥಾಪಿಸುವ ನಿರ್ಧಾರ ಮಾಡಿದ್ದಾಗಿ ಸಿದ್ದು ಸಭೆಯಲ್ಲಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ