ರಮ್ಯಾ ಮೇಲೆ ಮಂಡ್ಯ ಹೈಕ್ಳಿಗೆ ಸಿಟ್ಟು: ಬರ್ತ್ ಡೇ ಪಾರ್ಟಿಗೆ ಬಿತ್ತು ಪೆಟ್ಟು!

By Web DeskFirst Published Nov 29, 2018, 2:06 PM IST
Highlights

ನಟಿ ರಮ್ಯಾ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಕಾರಣ ಸಿಟ್ಟುಗೊಂಡ ಅಭಿಮಾನಿಗಳು ಅವರ ಹುಟ್ಟುಹಬ್ಬ ಸಂಭ್ರಮಾಚರಣೆಗೂ ಬ್ರೇಕ್ ಹಾಕಿದ್ದಾರೆ.

ಮಂಡ್ಯ[ನ.29]: ಇಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹುಟ್ಟು ಹಬ್ಬ. ಆದರೆ ಪ್ರತಿ ಬಾರಿ ರಮ್ಯಾ ಹುಟ್ಟೂರು ಮಂಡ್ಯದಲ್ಲಿ ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿ ಅಭಿಮಾನಿಗಳು ಈ ಬಾರಿ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸಿಲ್ಲ. 

ಇದನ್ನೂ ಓದಿ: ಅಂಬಿ ಅಭಿಮಾನಿಗಳ ಆಕ್ರೋಶ; ರಮ್ಯಾ ಮನೆಗೆ ಪೊಲೀಸ್ ರಕ್ಷಣೆ

'ಮಂಡ್ಯದ ಗಂಡು' ಅಂಬರೀಶ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗದ ರಮ್ಯಾ ವಿರುದ್ದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸೌಜನ್ಯಕ್ಕಾದರೂ ಅಂಬಿ ಅಂತಿಮ ದರ್ಶನಕ್ಕೆ ರಮ್ಯಾ ಬರಬೇಕಿತ್ತೆಂಬ ಮಾತುಗಳು ಸದ್ದು ಮಾಡಿದ್ದವು. ರಮ್ಯಾ ಈ ನಡೆ ಅವರ ಅಭಿಮಾನಿಗಳಲ್ಲೂ ಬೇಸರ ಮೂಡಿಸಿತ್ತು. ಸದ್ಯ ಇದೇ ಕಾರಣದಿಂದ ಅಭಿಮಾನಿಗಳು ರಮ್ಯಾ ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕಿದ್ದಾರೆ.

ಇದನ್ನೂ ಓದಿ: ಮಂಡ್ಯ ಜನರ ಪಾಲಿಗೆ ರಮ್ಯಾ ಇನ್ನಿಲ್ಲವಂತೆ!

ಪ್ರತಿ ವರ್ಷ ರಮ್ಯಾ ಮನೆ ಬಳಿಯೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು ಅದರೆ ಈ ಬಾರಿ ಮಂಡ್ಯದ ಸುಭಾಷ್ ನಗರದಲ್ಲಿರುವ ಮನೆ ವಠಾರವೂ ಖಾಲಿ ಹೊಡೆಯುತ್ತಿದೆ. 

click me!