ಅನ್ನಕ್ಕಾಗಿ ಕ್ಷೌರಿಕನಾದ ನಾಟಕಕಾರನಿಗೆ ರಾಜ್ಯೋತ್ಸವ ಪುರಸ್ಕಾರ!

By Web DeskFirst Published Nov 29, 2018, 12:17 PM IST
Highlights

ಅನ್ನಕ್ಕಾಗಿ ಕ್ಷೌರಿಕ ವೃತ್ತಿ ಹಾಗೂ ಬ್ರೈನ್‌ ಟ್ಯೂಮರ್‌ ಕಾಯಿಲೆ ಇವೆರಡರ ನಡುವೆ ಸಾಹಸ ಜೀವನವನ್ನು ನಡೆಸುತ್ತಿರುವ ನಾಟಕ ರಚನೆಕಾರ ಎಸ್‌. ಎನ್‌. ರಂಗಸ್ವಾಮಿಯವರಿಗೆ ರಾಜ್ಯೋತ್ಸವ ಪುರಸ್ಕಾರ ಒಲಿದು ಬಂದಿದೆ.

ದಾವ​ಣ​ಗೆರೆ[ನ.29]: ಒಂದೆಡೆ ತುತ್ತು ಅನ್ನಕ್ಕಾಗಿ ಕ್ಷೌರಿಕ ವೃತ್ತಿ, ಮತ್ತೊಂದೆಡೆ ಬಾಧಿಸುತ್ತಿರುವ ಬ್ರೈನ್‌ ಟ್ಯೂಮರ್‌ ಕಾಯಿಲೆ. ಇವೆರಡರ ನಡುವೆ ಸಾಹಸ ಜೀವನವನ್ನು ನಡೆಸುತ್ತಿರುವ ಅದ್ಭುತ ನಾಟಕ ರಚನೆಕಾರನೊಬ್ಬನಿಗೆ ರಾಜ್ಯೋತ್ಸವ ಪುರಸ್ಕಾರ ಒಲಿದು ಬಂದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿಯ ಎಸ್‌. ಎನ್‌. ರಂಗಸ್ವಾಮಿ ಈ ಅಪರೂಪದ ಸಾಧಕ.

ನಾಲ್ಕು ದಶ​ಕ​ಗಳ ಹಿಂದೆ ಮುಳು​ಗು​ತ್ತಿದ್ದ ನಾಟಕ ಕಂಪ​ನಿ​ಯೊಂದಕ್ಕೆ ಭರ್ಜರಿ ಆದಾಯ ತಂದು​ಕೊಡುವಂತಹ ಅದ್ಭು​ತ ನಾಟ​ಕ​ ರಚಿ​ಸಿ​ಕೊ​ಟ್ಟಿದ್ದರು. ಅಲ್ಲದೆ ತಾನೇ ಬರೆದ ನಾಟ​ಕ​ವನ್ನು ಕಾಸು ಕೊಟ್ಟು ನೋಡಿ​ದ್ದಂತಹ ಕಲಾ ಪ್ರೋತ್ಸಾ​ಹಕ. ಆದರೆ ಇಂದು 70ರ ಇಳಿ ವಯ​ಸ್ಸಿ​ನ​ಲ್ಲಿ ಕುಟುಂಬದ ನೊಗ ಹೊರ​ಬೇ​ಕಾದ ಅನಿ​ವಾ​ರ್ಯತೆ. ಚಿರಡೋಣಿ ಗ್ರಾಮದ ಪುಟ್ಟಶೆಡ್ಡಿನಂತಹ ಕ್ಷಾೌರದಂಗಡಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಇವರದ್ದು ನಿತ್ಯ ಕಣ್ಣೀರಿನ ಬದುಕು.

ಬ್ರೈನ್‌ ಟ್ಯೂಮರ್‌ಗೆ ಅವರಿಗೆ ಈಗಾಗಲೇ ಮಣಿಪಾಲ ಆಸ್ಪ​ತ್ರೆ​ಯಲ್ಲಿ ಶಸ್ತ್ರ ಚಿಕಿ​ತ್ಸೆ​ ಆಗಿದೆ. ಪ್ರತಿ 3 ತಿಂಗ​ಳಿ​ಗೊಮ್ಮೆ ಮಣಿ​ಪಾಲ ಆಸ್ಪ​ತ್ರೆಗೆ ಹೋಗಿ ತಪಾ​ಸಣೆ ಮಾಡಿ​ಸಿ​ಕೊಂಡು, ಚಿಕಿತ್ಸೆ ಮಾಡಿ​ಸಿ​ಕೊ​ಳ್ಳ​ಬೇಕು. ಇವೆಲ್ಲದರ ನಡುವೆ ಮಾಸಾ​ಶನ ಪಡೆ​ಯು​ವ ಎಲ್ಲಾ ಅರ್ಹತೆ ಇದ್ದರೂ ಜಿಲ್ಲಾ​ಡ​ಳಿತ ಮಾತ್ರ ಇಂತ​ಹ​ದ್ದೊಂದು ಅವ​ಕಾಶ ಮಾಡಿ​ಕೊ​ಟ್ಟಿಲ್ಲ. ಕ್ಷೌರಿಕ ವೃತ್ತಿ ಮಾಡ​ಬೇಕು. ತನ್ನ ಚಿಕಿ​ತ್ಸೆಗೆ, ಕುಟುಂಬ ನಿರ್ವ​ಹ​ಣೆಗೆ ಹಣ ಹೊಂದಿ​ಸ​ಬೇ​ಕಾದ ಸ್ಥಿತಿ ರಂಗ​ಸ್ವಾ​ಮಿ​ಯದ್ದು.

ನಾಟಕ ರಚನೆಯಲ್ಲಿ ಎತ್ತಿದ ಕೈ

ನಾಲ್ಕು ದಶ​ಕ​ಗಳ ಹಿಂದೆ ಪ್ರಸಿದ್ಧ ನಾಟಕ ಕಂಪ​ನಿಯೊಂದು ಸಂಕಷ್ಟಕ್ಕೆ ಸಿಲು​ಕಿತ್ತು. ಅಂದು ರಂಗ​ಸ್ವಾಮಿ ‘ದುಡುಕಿ ಹೋದ ಮಗ-ಹುಡುಕಿ ಬಂದ ಸೊಸೆ’ ಎಂಬ ನಾಟ​ಕ​ ಬರೆ​ದು ನಾಟಕ ಕಂಪನಿಗೆ ನೀಡಿದ್ದರು. ಆ ನಾಟಕ ವೃತ್ತಿ ರಂಗ​ಭೂಮಿ ಚರಿ​ತ್ರೆ​ಯಲ್ಲೇ ದಾಖಲೆ ಮಾಡು​ತ್ತದೆ. ಬೆಳ​ಗಾವಿ ಗಡಿ​ನಾ​ಡಿ​ನಲ್ಲಿ 400 ಭರ್ಜರಿ ಪ್ರಯೋಗ ಕಾಣು​ತ್ತದೆ. ಇಂದಿಗೂ ಆ ನಾಟ​ಕಕ್ಕೆ ಅದೇ ಮಹ​ತ್ವ​ವಿದೆ. ಅದ​ರಿಂದ ನಾಟಕ ಕಂಪ​ನಿಗೆ ಭರ​ಪೂರ ಆದಾಯ ಬರು​ತ್ತದೆ. ಆದರೆ ರಂಗಸ್ವಾಮಿ ಮಾತ್ರ ಆ ಕಂಪನಿ ಮಾಲೀಕರಿಗೆ ಕೊಟ್ಟಮಾತಿನಂತೆ ಆ ನಾಟಕವನ್ನು ಬೇರೆ ಯಾರಿಗೂ ನೀಡಲಿಲ್ಲ. ಮಾತ್ರವಲ್ಲ ಮುದ್ರಿಸಲೂ ಇಲ್ಲ. ಒಂದುವೇಳೆ ಈ ಎರಡರಲ್ಲಿ ಒಂದು ಕೆಲಸ ಮಾಡಿದ್ದರೂ ಅವರು ಭರಪೂರ ಹಣ ಗಳಿಸಬಹುದಿತ್ತು.

click me!