ಟಿಪ್ಪು ಜಯಂತಿ ವಿವಾದ : ಸರ್ಕಾರದಿಂದ ಹೊಸ ಪ್ಲಾನ್‌?

Published : Nov 11, 2018, 11:04 AM IST
ಟಿಪ್ಪು ಜಯಂತಿ ವಿವಾದ : ಸರ್ಕಾರದಿಂದ ಹೊಸ ಪ್ಲಾನ್‌?

ಸಾರಾಂಶ

ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ.   

ಬೆಂಗಳೂರು :  ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ. 

ಜನ್ಮದಿನದ ಕ್ಯಾಲೆಂಡರ್‌ನಲ್ಲಿ ಆ ದಿನ ಯಾರ ಹೆಸರಿದೆಯೋ ಅವರ ಹೆಸರಿನಲ್ಲಿ ಜಯಂತಿಯನ್ನು ಆಚರಿಸಲಾಗುತ್ತದೆ. ಜಯಂತಿ ಆಚರಿಸುವ ವ್ಯಕ್ತಿಗಳ ಸಾಧನೆಯ ಕುರಿತು ವಿಧಾನಸೌಧದಲ್ಲಿ 5 ನಿಮಿಷ ಭಾಷಣ ಮಾಡಲು ಪ್ರತಿನಿಧಿಯೊಬ್ಬರನ್ನು ಸರ್ಕಾರ ನೇಮಿಸಲಿದೆ. 

ಇದರಿಂದಾಗಿ ಯಾವುದೇ ಜಯಂತಿಯ ವಿವಾದ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ಜಯಂತಿ ಆಚರಣೆಗೆ ಅರ್ಜಿ ಆಹ್ವಾನಿಸಲೂ ಸರ್ಕಾರ ಚಿಂತನೆ ನಡೆಸಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌