ಬಾಣಸಿಗನಿಗೆ ಮೊದಲು ಪ್ರಸಾದ ತಿನ್ನಿಸಿ, ನಂತರ ಭಕ್ತರಿಗೆ ವಿತರಣೆ!

Published : Dec 20, 2018, 07:58 AM IST
ಬಾಣಸಿಗನಿಗೆ ಮೊದಲು ಪ್ರಸಾದ ತಿನ್ನಿಸಿ, ನಂತರ ಭಕ್ತರಿಗೆ ವಿತರಣೆ!

ಸಾರಾಂಶ

ದೇವನಹಳ್ಳಿ ತಹಸೀಲ್ದಾರ್‌ ಪ್ರಯೋಗ: ಬಾಣಸಿಗನಿಗೆ ಮೊದಲು ಪ್ರಸಾದ ತಿನ್ನಿಸಿ, ನಂತರ ಭಕ್ತರಿಗೆ ವಿತರಣೆ!

ದೇವನಹಳ್ಳಿ[ಡಿ.20]: ವೈಕುಂಠ ಏಕಾದಶಿಯ ಪ್ರಯುಕ್ತ ವಿತರಿಸಬೇಕಾಗಿದ್ದ ಪ್ರಸಾದವನ್ನು ಪರಿಶೀಲಿಸಿದ ತಾಲೂಕು ಆಡಳಿತ ಅದನ್ನು ತಯಾರಿಸಿದ ಬಾಣಸಿಗರಿಗೆ ಮೊದಲು ತಿನ್ನಿಸಿ ಬಳಿಕ ಸಾರ್ವಜನಿಕ ವಿತರಣೆಗೆ ಅನುವು ಮಾಡಿಕೊಟ್ಟಿರುವ ಪ್ರಸಂಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಸುಳ್ವಾಡಿಯಲ್ಲಿ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಇಲ್ಲಿನ ತಹಸೀಲ್ದಾರ್‌ ಅವರು ಆಹಾರ ಸುರಕ್ಷತೆ ಮತ್ತು ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿ ತಾಲೂಕಿನ ಎಲ್ಲ ದೇವಾಲಯಗಳಲ್ಲಿ ಭಕ್ತರಿಗೆ ವಿತರಿಸಲಾಗುವ ಪ್ರಸಾದವನ್ನು ಪರಿಶೀಲಿಸಿ ನಂತರ ವಿತರಣಾ ವ್ಯವಸ್ಥೆ ಮಾಡಿ ಎಂಬ ಸೂಚಿಸಿದ್ದರು.

ಆ ಪ್ರಕಾರ ಭಕ್ತರಿಗಾಗಿ ಸಿದ್ಧಪಡಿಸಲಾಗಿದ್ದ ಲಡ್ಡು ಮತ್ತಿತರ ಆಹಾರವನ್ನು ಮೊದಲು ಬಾಣಸಿಗರಿಗೆ ತಿನ್ನಿಸಿ, ನಂತರ ತನಿಖಾಧಿಕಾರಿಗಳ ತಂಡ ತಿಂದು ಪರೀಕ್ಷಿಸಿದ ಬಳಿಕ ಭಕ್ತರಿಗೆ ವಿತರಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಾಫಿಕ್ ಸಮಸ್ಯೆ ಮಾತ್ರವಲ್ಲ, ಇಂಗಾಲ ಹೊರಸೂಸುವಿಕೆಯಲ್ಲಿ ಕೂಡ ದೇಶದಲ್ಲೇ ಅಗ್ರ ಸ್ಥಾನ ಪಡೆದ ಬೆಂಗಳೂರು!
ಕನ್ನಡದ 'ತ್ರಿಮೂರ್ತಿ'ಗಳ ಸಂಗಮಕ್ಕೆ ಸಾಕ್ಷಿಯಾಗಲಿದ್ದಾರೆ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್