ಇ-ಸ್ವತ್ತು ತಂತ್ರಾಂಶ ದೋಷ ಸತ್ಯ: 15 ದಿನಗಳಲ್ಲಿ ಪರಿಹಾರ: ಸಚಿವ ಪ್ರಿಯಾಂಕ್‌ ಖರ್ಗೆ

Published : Mar 18, 2026, 08:42 PM IST
priyank kharge

ಸಾರಾಂಶ

ಇ-ಸ್ವತ್ತು ನೀಡುವ ತಂತ್ರಾಂಶದಲ್ಲಿ ನ್ಯೂನ್ಯತೆ ಆಗಿರುವುದು ಸತ್ಯ. ಪ್ರಸ್ತುತ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದು, 15 ದಿನಗಳಲ್ಲಿ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ವಿಧಾನಪರಿಷತ್ತು (ಮಾ.18): ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ಆಸ್ತಿಗಳಿಗೆ ಇ-ಸ್ವತ್ತು ನೀಡುವ ತಂತ್ರಾಂಶದಲ್ಲಿ ನ್ಯೂನ್ಯತೆ ಆಗಿರುವುದು ಸತ್ಯ. ಪ್ರಸ್ತುತ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದು, 15 ದಿನಗಳಲ್ಲಿ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಗಮನ ಸೆಳೆಯುವ ಸೂಚನೆ ಪ್ರಸ್ತಾಪಿಸಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಇ-ಸ್ವತ್ತು ತಂತ್ರಾಂಶದಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ ಇದೆ ಎಂದು ಹೇಳಿದರು. ಇದಕ್ಕೆ ಸಚಿವರು ಉತ್ತರಿಸಿದರು.

ಜತೆಗೆ ವಸತಿ ಯೋಜನೆಯ ಫಲಾನುಭವಿಗಳಿಗೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣಕ್ಕೂ ಮುನ್ನ ಗ್ರಾಪಂ​​ಗಳಲ್ಲಿ ಇ-ಸ್ವತ್ತು 11-ಎ ನಮೂನೆ ಪಡೆಯುವುದು ಕಡ್ಡಾಯ. ಇದು ಇಲ್ಲದಿದ್ದರೆ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. 2-3 ಗುಂಟೆ ಕೃಷಿ ಭೂಮಿಯಲ್ಲಿ ಮನೆ ಕಟ್ಟಲು ಇ-ಸ್ವತ್ತು ಅವಕಾಶ ನೀಡುತ್ತಿಲ್ಲ. ಗುಂಟೆ, ಸೆಂಟ್‌ ಬದಲು ಚದರಡಿ ಲೆಕ್ಕದಲ್ಲಿ ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಿದೆ. ಇದರಿಂದ ಬಡವರು ಸರ್ವೆ ನಂಬರ್‌ ಜಾಗದಲ್ಲಿ ಮನೆ ಕಟ್ಟಡಲು ಸಮಸ್ಯೆಯಾಗಿದೆ ಎಂದು ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ಇ-ಸ್ವತ್ತು ತಂತ್ರಾಂಶದಲ್ಲಿ ನ್ಯೂನ್ಯತೆಗಳು ಸತ್ಯ. ಅದನ್ನು ಬಗೆಹರಿಸಲು ಈ ಹಿಂದೆ ಎರಡು ತಿಂಗಳ ಸಮಯಾವಕಾಶ ಕೇಳಿದ್ದೆ. ಈಗ ಬಹುತೇಕ ಸಮಸ್ಯೆ ಬಗೆಹರಿದಿದ್ದು, ಇನ್ನು 15 ದಿನಗಳಲ್ಲಿ ಸಂಪೂರ್ಣ ಸುಧಾರಿಸಲಾಗುವುದು ಎಂದು ಹೇಳಿದರು. ಇನ್ನು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಕೊರತೆಯಿಂದ ವಸತಿ ಯೋಜನೆ ಫಲಾನುಭವಿಗಳಿಗೆ ಕೃಷಿ ಭೂಮಿಯಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ 11-ಎ ನಮೂನೆ ನೀಡುವ ಕುರಿತು ವಸತಿ ಹಾಗೂ ಕಂದಾಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಇ-ಸ್ವತ್ತು ತಂತ್ರಾಂಶದಲ್ಲಿ 11ಎ ನಡಿ 1,39,562 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 1.21 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 11ಬಿ ನಮೂನೆಯಡಿ 51,559 ಅರ್ಜಿಗಳ ಪೈಕಿ 20 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕ್ರಯಪತ್ರ ಇಲ್ಲದೆ ಇ-ಖಾತೆ ಕಷ್ಟ

ಇದೇ ವೇಳೆ ಯತೀಂದ್ರ ಅವರು, ಈ ಹಿಂದೆ ಹಳ್ಳಿಗಳಲ್ಲಿ ಲಕ್ಷಾಂತರ ಜನ ಸರ್ವೆ ನಂಬರ್‌ ಭೂಮಿಯಲ್ಲಿ ನಿವೇಶನಗಳನ್ನು ಖರೀದಿಸಿದ್ದಾರೆ. ಅವರ ಬಳಿ ನೋಂದಣಿಯಾದ ಕ್ರಯಪತ್ರ, ಇಸಿ ಇರುವುದಿಲ್ಲ. ಮೂಲ ದಾಖಲೆಗಳಲ್ಲಿ ಮೂಲ ಮಾಲೀಕರ ಹೆಸರೇ ಬರುತ್ತಿರುತ್ತದೆ. ಅಂತಹವರಿಗೆ ಇ-ಖಾತಾ ನಿರಾಕರಿಸಲಾಗುತ್ತಿದ್ದು, ಹತ್ತಾರು ವರ್ಷದಿಂದ ವಾಸಿಸುತ್ತಿರುವವರಿಗೆ ಇ-ಖಾತಾ ಅವಕಾಶ ನೀಡಬೇಕು ಎಂದರು. ಇದಕ್ಕೆ ಪ್ರಿಯಾಂಕ್‌, ಕ್ರಯಪತ್ರ ಇಲ್ಲದಿದ್ದರೆ ಕಷ್ಟವಾಗುತ್ತದೆ. ಇದನ್ನು ಪರಿಶೀಲಿಸಲಾಗುವುದು ಎಂದಷ್ಟೇ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುಗಾದಿ ಸಂಭ್ರಮಕ್ಕೆ ಸರ್ಕಾರಿ ನೌಕರರಿಗೆ ಕಹಿ, ಹಬ್ಬದ ದಿನವೂ ಕೆಲಸಕ್ಕೆ ಬರುವಂತೆ ಸರ್ಕಾರ ಆದೇಶ!
ರಸ್ತೆಯಲ್ಲಿ ಗಲಾಟೆ : ಡ್ರೈವರ್‌ಗೆ ಹೊಡೆಯುವುದನ್ನು ತಡೆಯಲು ಹೋದ ತಾಯಿಯನ್ನೇ ಕೆಳಗೆ ತಳ್ಳಿದ ಮಗ