ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ!

Published : Oct 11, 2020, 07:54 AM ISTUpdated : Oct 11, 2020, 08:17 AM IST
ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ!

ಸಾರಾಂಶ

ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ| 16000 ಅಡಿ ಎತ್ತರದಲ್ಲಿ 8 ಗಂಟೆ ಹಾರಾಟ| ಯುದ್ಧ ಸ್ಥಳದಿಂದ ತಕ್ಷಣದ ಮಾಹಿತಿ ಲಭ್ಯ

ನವದೆಹಲಿ(ಅ.11): ಗಡಿಯಲ್ಲಿ ನೆರೆದೇಶಗಳ ಅತಿಕ್ರಮಣಕಾರಿ ನೀತಿ ಹೆಚ್ಚುತ್ತಿರುವಾಗಲೇ, ನೆರೆಮನೆಯ ವೈರಿ ಚೀನಾದ ಗಡಿ ಚಲನವಲನಗಳ ಮೇಲೆ ಕಣ್ಗಾವಲು ಇಡಲು ನೆರವಾಗುವ ಸ್ವದೇಶಿ ಡ್ರೋನ್‌ ‘ರುಸ್ತುಂ 2’ ಅನ್ನು ಭಾರತ ಶುಕ್ರವಾರ ಯಶಸ್ವಿಯಾಗಿ ಪರೀಕ್ಷಿಸಿದೆ.

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆ ವೇಳೆ ಈ ಮಾದರಿ ಡ್ರೋನ್‌ 16000 ಅಡಿ ಎತ್ತರದಲ್ಲಿ ಸತತ 8 ಗಂಟೆಗಳ ಕಾಲ ಹಾರಾಡುವ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ವರ್ಷಾಂತ್ಯಕ್ಕೆ ಇದೇ ಡ್ರೋನ್‌ 26000 ಅಡಿ ಎತ್ತರದಲ್ಲಿ 18 ತಾಸುಗಳ ಹಾರಾಟದ ಪರೀಕ್ಷೆ ಒಳಪಡಲಿದೆ.

‘ರುಸ್ತುಂ 2’ ಡ್ರೋನ್‌ ತನ್ನೊಂದಿಗೆ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌, ಎಲೆಕ್ಟ್ರಾನಿಕ್‌ ಇಂಟೆಲಿಜೆನ್ಸ್‌ ಸಿಸ್ಟಮ್‌, ಸಿಚುವೇಷನ್‌ ಅವೇರ್‌ನೆಸ್‌ ಸಿಸ್ಟಮ್‌ ಸೇರಿದಂತೆ ಸಂದರ್ಭಕ್ಕೆ ತಕ್ಕ ಗುಪ್ತಚರ ಉಪಕರಣ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಯುದ್ಧದಂಥ ಸಂದರ್ಭದಲ್ಲಿ ಕ್ಷಣಕ್ಷಣದ ಮಾಹಿತಿ ರವಾನೆಗೆ ಉಪಗ್ರಹ ಸಂಪರ್ಕ ವ್ಯವಸ್ಥೆಯನ್ನೂ ಹೊಂದಿದೆ.

ಸದ್ಯಕ್ಕೆ ರುಸ್ತುಂ 2 ಇನ್ನೂ ಮಾದರಿ ಹಂತದಲ್ಲಿದೆಯಾದರೂ ಅದರ ಎಲ್ಲಾ ವ್ಯವಸ್ಥೆಗಳು ವಿಶ್ವದ ಅತ್ಯಾಧುನಿಕ ಯುದ್ಧ ಡ್ರೋನ್‌ಗಳಲ್ಲಿ ಒಂದಾದ, ಹಾಲಿ ಭಾರತೀಯ ಸೇನೆಯ ಬಳಕೆಯಲ್ಲಿರುವ ಇಸ್ರೇಲ್‌ ನಿರ್ಮಿತ ಹೆರೋನ್‌ಗೆ ಸರಿಸಮಾನವಾಗಿದೆ. ಹೀಗಾಗಿಯೇ ಈ ಬೆಳವಣಿಗೆಯನ್ನು ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗಿದೆ.

1959ರಲ್ಲಿ ತಾನು ಏಕಪಕ್ಷೀಯವಾಗಿ ಘೋಷಿಸಿದ್ದ ಗಡಿ ರೇಖೆಯನ್ನೇ ಮಾನ್ಯಮಾಡಲು ಸಿದ್ಧ ಎಂಬ ಇತ್ತೀಚಿನ ಚೀನಾ ಹೇಳಿಕೆ ಹಿನ್ನೆಲೆಯಲ್ಲಿ ರುಸ್ತುಂ 2 ಯೋಜನೆ ಪೂರ್ಣಕ್ಕೆ ಕೇಂದ್ರ ತೇಜಿ ನೀಡಿತ್ತು ಎನ್ನಲಾಗಿದೆ. ಮತ್ತೊಂದೆಡೆ ಚೀನಾ ಈಗಾಗಲೇ ತನ್ನ ಬಳಿ ಇಂಥ ಸಶಸ್ತ್ರ ಡ್ರೋನ್‌ಗಳನ್ನು ಹೊಂದಿದ್ದು, ಭಾರತದ ಗಡಿಯಲ್ಲಿ ಬಳಸುತ್ತಿದೆ. ಜೊತೆಗೆ ಪಾಕಿಸ್ತಾನಕ್ಕೂ 4 ಡ್ರೋನ್‌ ನೀಡಿದೆ.

ಇಸ್ರೇಲ್‌ಗೆ ಬೇಡಿಕೆ:

ಈ ನಡುವೆ ಹಾಲಿ ತನಗೆ ನೀಡಿರುವ ಹೆರೋನ್‌ ಡ್ರೋನ್‌ಗಳನ್ನು ಪ್ರಸಕ್ತ ಸಮಯದ ಬೇಡಿಕೆಗೆ ಅನುಗುಣವಾಗಿ ಉನ್ನತೀಕರಿಸಿಕೊಡುವಂತೆ ಮತ್ತು ಅದಕ್ಕೆ ಆಗಸದಿಂದ ಭೂಮಿಗೆ ಹಾರಿಸಬಹುದಾದ ಕ್ಷಿಪಣಿ ಹಾಗೂ ಲೇಸರ್‌ ನಿರ್ದೇಶಿಸಿತ ಬಾಂಬ್‌ಗಳನ್ನು ಅಳವಡಿಸಿಕೊಡುವಂತೆಯೂ ಶೀಘ್ರವೇ ಇಸ್ರೇಲ್‌ಗೆ ಭೇಡಿಕೆ ಸಲ್ಲಿಸಲು ಭಾರತದ ರಕ್ಷಣಾ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!