ಹಾಲು, ಅಲ್ಕೋಹಾಲ್ ಆಯ್ತು, ಇದೀಗ ಸರಕು ವಾಹನಗಳ ಮೇಲಿನ ತೆರಿಗೆ ಡಬಲ್‌!

Published : Jul 22, 2023, 06:41 AM IST
ಹಾಲು, ಅಲ್ಕೋಹಾಲ್ ಆಯ್ತು, ಇದೀಗ ಸರಕು ವಾಹನಗಳ ಮೇಲಿನ ತೆರಿಗೆ ಡಬಲ್‌!

ಸಾರಾಂಶ

ರಾಜ್ಯ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆಯಿತು.

ವಿಧಾನ ಪರಿಷತ್‌ (ಜು.22) :  ರಾಜ್ಯ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆಯಿತು.

ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧೇಯಕ ಮಂಡಿಸಿದರು. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರ ಗೈರು ಹಾಜರಿಯಲ್ಲಿ ವಿಧೇಯಕ ಅಂಗೀಕರಿಸಲಾಯಿತು.

ಒಟ್ಟಾರೆ ತೂಕವು 1500 ಕಿ.ಗ್ರಾಂ.ಗಳಿಂದ 12 ಸಾವಿರ ಕಿ.ಗ್ರಾಂ. ಇರುವ ಸರಕು ವಾಹನಗಳಿಗೆ ವಿಧಿಸುವ ಪೂರ್ಣಾವಧಿ ತೆರಿಗೆ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

 

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ವಿಮೆ: ಇಷ್ಟು ಬೃಹತ್‌ ಮೊತ್ತದ ಪರಿಹಾರ ದೇಶದಲ್ಲೇ ಮೊದಲು..!

ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸರಕು ವಾಹನಗಳ ಒಟ್ಟಾರೆ ತೂಕವು 1500- 2 ಸಾವಿರ ಕಿ.ಗ್ರಾಂ. ಮೀರದಿದ್ದರೆ ಅವುಗಳಿಗೆ 20 ಸಾವಿರ ರು. (ಈ ಹಿಂದೆ 10 ಸಾವಿರ ರು. ಇತ್ತು), 2 ಸಾವಿರ ಕಿ.ಗ್ರಾಂ.ನಿಂದ 3 ಸಾವಿರ ಕಿ.ಗ್ರಾಂ. ಮೀರದಿದ್ದರೆ 30 ಸಾವಿರ ರು. (15 ಸಾವಿರ ರು. ಇತ್ತು), 3 ಸಾವಿರ ಕಿ.ಗ್ರಾಂ.ನಿಂದ 5500 ಕಿ.ಗ್ರಾಂ. ಮೀರದಿದ್ದರೆ 40 ಸಾವಿರ ರು. (20 ಸಾವಿರ ರು. ಇತ್ತು), ಪೂರ್ಣಾವಧಿ ತೆರಿಗೆ ಪಾವತಿಸಬೇಕು. 5000 ಕಿ.ಗ್ರಾಂ.ನಿಂದ 7500 ಕಿ.ಗ್ರಾಂ. ಮೀರದಿದ್ದರೆ 60 ಸಾವಿರ ರು., 750 ಕಿ.ಗ್ರಾಂ.ನಿಂದ 9500 ಕಿ.ಗ್ರಾಂ. ಮೀರದಿದ್ದರೆ 80 ಸಾವಿರ ರು., 9500 ಕಿ.ಗ್ರಾಂ.ನಿಂದ 12 ಸಾವಿರ ಕಿ.ಗ್ರಾಂ. ಮೀರದಿದ್ದರೆ ಒಂದ ಲಕ್ಷ ರು. ಪೂರ್ಣಾವಧಿ ತೆರಿಗೆ ಪಾವತಿಸಬೇಕು.

ಸಂಚಾರಿ ಕ್ಯಾಂಟೀನ್‌, ಸಂಚಾರಿ ಗ್ರಂಥಾಲಯ ವಾಹನ, ಸಂಚಾರಿ ಕಾರ್ಯಾಗಾರ, ಸಂಚಾರಿ ಕ್ಲಿನಿಕ್‌, ಎಕ್ಸ್‌ರೇ ವಾಹನ, ಕ್ಯಾಷ್‌ ವಾಹನಗಳನ್ನು ಒಳಗೊಂಡ ಸರಕು ವಾಹನಗಳ ಪೈಕಿ 5,500 ಕೆ.ಜಿ.ಯಿಂದ 12 ಸಾವಿರ ಕೆ.ಜಿ.ವರೆಗಿನ ವಾಹನಗಳಿಗೆ ವಿಧಿಸಲಾಗುತ್ತಿದ್ದ 1,800 ರು. ತ್ರೈಮಾಸಿಕ ತೆರಿಗೆಯನ್ನು ಕೈಬಿಡಲಾಗಿದೆ. ಹಾಗೆಯೇ ಶಾಲೆಗಳ ಒಡೆತನದಲ್ಲಿರುವ ಮತ್ತು ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಪ್ರಯಾಣಕ್ಕಾಗಿ ಮಾತ್ರ ಓಮ್ನಿ ಬಸ್‌ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಸುತ್ತಿದ್ದರೆ ಫೆä್ಲೕರ್‌ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 20 ರು.ನಿಂದ 100 ರು.ಗಳಿಗೆ ಹೆಚ್ಚಿಸಲಾಗಿದೆ.

ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿರುವ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರಯಾಣದ ಸಲುವಾಗಿ ಮಾತ್ರ ಓಮ್ನಿ ಬಸ್‌ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಸುತ್ತಿದ್ದರೆ ಫೆä್ಲೕರ್‌ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 80 ರು.ಗಳಿಂದ 200 ರು.ಗಳೆ ಏರಿಕೆ ಮಾಡಲಾಗಿದೆ.

ವಿಪಕ್ಷಗಳಿಗೆ ಹೊಟ್ಟೆಯುರಿ, ಹೀಗಾಗಿ ಕಲಾಪಕ್ಕೆ ಬರ್ತಿಲ್ಲ: ಸಿಎಂ ಸಿದ್ದರಾಮಯ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌