ಜ.22 ರಂದು ರಜೆ ಬೇಕೋ ಬೇಡ್ವೋ?: ನಾನೂ ಹಿಂದೂನೇ, ಆದರೆ ನನಗೆ ರಜೆ ಬೇಡ ಎಂದ ಮಹಿಳೆ!

Published : Jan 20, 2024, 09:41 PM ISTUpdated : Jan 20, 2024, 09:48 PM IST
ಜ.22 ರಂದು ರಜೆ ಬೇಕೋ ಬೇಡ್ವೋ?:  ನಾನೂ ಹಿಂದೂನೇ, ಆದರೆ ನನಗೆ ರಜೆ ಬೇಡ ಎಂದ ಮಹಿಳೆ!

ಸಾರಾಂಶ

ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ದೇಶಾದ್ಯಂತ ರಾಮಭಕ್ತರು ಕಾಯುತ್ತಿದ್ದಾರೆ. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಭಾರತೀಯರಿಗೆ ದೊಡ್ಡಹಬ್ಬವೆಂದೇ ಹೇಳಲಾಗುತ್ತಿದೆ. ಹೀಗಾಗಿ ಅಂದು ಸರ್ಕಾರಿ ರಜೆ ಘೊಷಿಸುವಂತೆ ಹಿಂದೂಗಳು ಒತ್ತಾಯಿಸುತ್ತಿದ್ದಾರೆ. 

ಬೆಂಗಳೂರು (ಜ.20): ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ದೇಶಾದ್ಯಂತ ರಾಮಭಕ್ತರು ಕಾಯುತ್ತಿದ್ದಾರೆ. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಭಾರತೀಯರಿಗೆ ದೊಡ್ಡಹಬ್ಬವೆಂದೇ ಹೇಳಲಾಗುತ್ತಿದೆ. ಹೀಗಾಗಿ ಅಂದು ಸರ್ಕಾರಿ ರಜೆ ಘೊಷಿಸುವಂತೆ ಹಿಂದೂಗಳು ಒತ್ತಾಯಿಸುತ್ತಿದ್ದಾರೆ. 

ಕೇಂದ್ರ ಸರ್ಕಾರ ಅದಾಗಲೇ ರಾಮಮಂದಿರ ಉದ್ಘಾಟನೆಗೆ ಅರ್ಧ ದಿನ ರಜೆ ಘೊಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ರಜೆ ಘೋಷಣೆ ಮಾಡುವ ಬಗ್ಗೆ ಸರ್ಕಾರ ಇನ್ನು ತೀರ್ಮಾನ ಕೈಗೊಳ್ಳದಿರುವ ಬಗ್ಗೆ ಸಿಎಂ ಸಿದ್ದರಾಮಯ್ಯರೇ ಹೇಳಿದ್ದಾರೆ. ಹೀಗಿರುವಾಗ ಸಿಲಿಕಾನ್ ಸಿಟಿ ಜನರಿಗೆ ಜ.22 ರಂದು ರಜೆ ಬೇಕೋ ಬೇಡವೋ ಎಂಬ ಬಗ್ಗೆ ತಿಳಿಯುವ ಪ್ರಯತ್ನ ಮಾಡಲಾಗಿದೆ. ಬಹುತೇಕರು ರಜೆ ಬೇಕು ಎಂದು ಒತ್ತಾಯಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯರನ್ನೇ ಕರೆದಿಲ್ಲ; ಇದು ಕನ್ನಡಿಗರಿಗೆ ಮಾಡಿದ ಅವಮಾನ : ಚಲುವರಾಯಸ್ವಾಮಿ

ಜನವರಿ 22 ರಂದು ರಜೆ ಬೇಕೋ ಬೇಡ್ವೋ?

ಬೆಂಗಳೂರಿನಲ್ಲಿ ಬಹುತೇಕರು ರಜೆ ನೀಡುವಂತೆ ಒತ್ತಾಯಿಸಿದ್ದಾರೆ. ರಾಮ ನಮ್ಮ ದೇವರು. ಜ.22 ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಕಣ್ಣುತುಂಬಿಕೊಳ್ಳಬೇಕು ಹೀಗಾಗಿ ರಜೆ ಬೇಕೇಬೇಕು ಎನ್ನುತ್ತಿದ್ದಾರೆ.

ರಜೆ ಬೇಕೋ ಬೇಡ್ವೋ? ಎಂಬ ಬಗ್ಗೆ ಎಳೆನೀರು ಮಾರುವ ಬಡ ವ್ಯಾಪಾರಿಯೊಬ್ಬರನ್ನು ಏಷಿಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿ ಮಾನತಾಡಿಸಿದಾಗ, ಆ ದಿನ ನಾನು ಅನ್ನದಾನ ಮಾಡಿಸ್ತಿದೀನಿ ರಜೆ ಬೇಕು ಎಂದು ಮನವಿ ಮಾಡಿದರು. ಒಂದು ದಿನ ವ್ಯಾಪಾರ ಹೋದ್ರೆ ಹೋಗುತ್ತೇರಿ. ಇವತ್ತು ಅಯೋಧ್ಯೆ ಎಷ್ಟು ಅಭಿವೃದ್ಧಿ ಆಗಿದೆ. ಆ ದಿನ ನಾವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಬೇಕು. ಅಧಿಕಾರಿಗಳನ್ನು, ನಾಯಕರನ್ನು ನಾವು ಆರಿಸಿ ಕಳ್ಸಿದೀವಿ. ನಾವು ಹೇಳಿದ ಹಾಗೆ ರಜೆ ಕೊಡ್ಬೇಕು ಎಂದ ಎಳನೀರು ಮಾರುವ ಹಿರಿಯ ನಾಗರಿಕ.

ನಾನೂ ಹಿಂದೂನೇ ನನಗೆ ರಜೆ ಬೇಡ ಎಂದ ಮಹಿಳೆ!

ಜ.22 ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇಲ್ಲಿ ರಜೆ ಯಾಕೆ ಮಾಡಬೇಕು? ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ಆಫೀಸ್ಗೆ ಹೋದ್ರೆ ಆಯ್ತು ನಂಬಿಕೆ ಅನ್ನೋದು ಮನಸ್ಸಿನಲ್ಲಿರಲಿ, ಕೆಲಸದ ಮೇಲೆ ಬೇಡ. ಒಂದು ದಿನ ರಜೆ ತಗೊಳೋದ್ರಿಂದ ಎಕಾನಮಿ ಬಿದ್ದೋಗುತ್ತೆ ಎಂದು ಮಹಿಳೆಯೊಬ್ಬರು ರಜೆ ಬೇಡ ಎಂದಿದ್ದಾರೆ.

ಜ.22 ರಂದು ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಸರ್ಕಾರಿ ರಜೆ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಸಿಎಂ

ನಮ್ಮಲ್ಲಿ ವೋಟ್ ಮಾಡೋಕೆ ಯಾರೂ ಇಷ್ಟು ಇಂಟ್ರೆಸ್ಟ್ ತೋರ್ಸಲ್ಲ. ಗ್ಯಾರಂಟಿ ಯೋಜನೆಯಲ್ಲಿ ಫ್ರೀ ಕೊಟ್ಟಿದ್ದನ್ನು ಯಾರೂ ಪ್ರಶ್ನೆ ಮಾಡ್ತಿಲ್ಲ. ಇಂಡಿಪೆಂಡೆನ್ಸ್ ಡೇ ದಿನ ರಜೆ ಕೊಟ್ರೆ ರೆಸಾರ್ಟ್ ಫುಲ್ ಆಗುತ್ತೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳ್ಕೊಳೋರು ಯಾರೂ ಇಲ್ಲ. ಅಬ್ದುಲ್ ಕಲಾಂ ಹೇಳಿದ್ದಾರೆ ಸ್ಪೆಷಲ್ ದಿನ ಒಂದು ಗಂಟೆ ಹೆಚ್ಚು ಕೆಲಸ ಮಾಡಿ ಅಂತಾ. ಹೀಗಾಗಿ ಯಾವುದೇ ಕಾರಣಕ್ಕೂ ಈ ದಿನ ರಜೆ ಬೇಡ ಎಂದ ಶಾಂತಾ ಎಂಬ ಮಹಿಳೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ