Covid Crisis: ರಾಜ್ಯದಲ್ಲಿ 15,000ಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸ್‌..!

Kannadaprabha News   | Asianet News
Published : Feb 05, 2022, 05:25 AM IST
Covid Crisis: ರಾಜ್ಯದಲ್ಲಿ 15,000ಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸ್‌..!

ಸಾರಾಂಶ

*  ನಿರಂತರವಾಗಿ ಕುಸಿಯುತ್ತಿರುವ ಪಾಸಿಟಿವಿಟಿ ದರ *  1.23 ಲಕ್ಷಕ್ಕೆ ಕುಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ  *  ಕಲಬುರಗಿಯಲ್ಲಿ 9 ವರ್ಷದ ಬಾಲಕ ಸಾವು

ಬೆಂಗಳೂರು(ಫೆ.05):  ರಾಜ್ಯದಲ್ಲಿ(Karnataka) ಕೋವಿಡ್‌-19(Covid-19) ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಶುಕ್ರವಾರ 14,950 ಹೊಸ ಪ್ರಕರಣಗಳು ವರದಿಯಾಗಿದೆ. 53 ಮಂದಿ ಮೃತರಾಗಿದ್ದಾರೆ. 40,599 ಮಂದಿ ಚೇತರಿಸಿಕೊಂಡಿದ್ದಾರೆ. ಪಾಸಿಟಿವಿಟಿ ದರ(Positivity Rate) ಕೂಡ ನಿರಂತರವಾಗಿ ಕುಸಿಯುತ್ತಿದೆ. 1.36 ಲಕ್ಷ ಕೋವಿಡ್‌ ಪರೀಕ್ಷೆ(Covid Test) ನಡೆದಿದ್ದು ಶೇ.10.93ರ ಪಾಸಿಟಿವಿಟಿ ದರ ದಾಖಲಾಗಿದೆ. ಜನವರಿ 12 ರಂದು ಶೇ. 10.96 ಪಾಸಿಟಿವಿಟಿ ದರ ವರದಿಯಾದ ಬಳಿಕ ಮತ್ತೆ ಪಾಸಿಟಿವಿಟಿ ದರ ಶೇ.10ರ ಅಸುಪಾಸಿಗೆ ಬಂದಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1.23 ಲಕ್ಷಕ್ಕೆ ಕುಸಿದಿದೆ. ಬೆಂಗಳೂರು(Bengaluru) ನಗರದಲ್ಲಿ ಅತಿ ಹೆಚ್ಚು 51,645 ಸಕ್ರಿಯ ಪ್ರಕರಣಗಳಿವೆ. ತುಮಕೂರು 6,223, ಮೈಸೂರು 5,724, ಧಾರವಾಡ ಜಿಲ್ಲೆಯಲ್ಲಿ 4,574 ಸಕ್ರಿಯ ಪ್ರಕರಣಗಳಿವೆ.

Covid Vaccination: ಮಕ್ಕಳ ಲಸಿಕೆಯಲ್ಲಿ ಗದಗ 100% ಸಾಧನೆ: ಡಾ.ಸುಧಾಕರ್‌ ಮೆಚ್ಚುಗೆ

ಶುಕ್ರವಾರ ಬೆಂಗಳೂರು ನಗರದಲ್ಲಿ 6,039, ಮೈಸೂರು 944, ತುಮಕೂರು 656 ಮತ್ತು ಹಾಸನ ಜಿಲ್ಲೆಯಲ್ಲಿ 560 ಹೊಸ ಪ್ರಕರಣ ಪತ್ತೆಯಾಗಿದೆ. ನೂರಕ್ಕಿಂತ ಕಡಿಮೆ ಪ್ರಕರಣ ಯಾದಗಿರಿ (56), ರಾಮನಗರ (65), ಚಿಕ್ಕಮಗಳೂರು (73) ಮತ್ತು ಗದಗ ಜಿಲ್ಲೆಯಲ್ಲಿ (81) ವರದಿಯಾಗಿದೆ.

ಕಲಬುರಗಿಯಲ್ಲಿ 9 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ(Death). ಬೆಂಗಳೂರು ನಗರದಲ್ಲಿ 15, ಮೈಸೂರು 10, ದಕ್ಷಿಣ ಕನ್ನಡ 4, ಬೆಳಗಾವಿ ಮತ್ತು ಶಿವಮೊಗ್ಗ ತಲಾ 3, ಉಡುಪಿ, ರಾಮನಗರ, ಕೊಪ್ಪಳ, ಕಲಬುರಗಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 2, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಹಾಸನ, ಕೋಲಾರ, ಮಂಡ್ಯ ಮತ್ತು ವಿಜಯಪುರಲ್ಲಿ ತಲಾ ಒಂದು ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಟ್ಟು 38.75 ಲಕ್ಷ ಮಂದಿಯಲ್ಲಿ ಈವರೆಗೆ ಸೋಂಕು ದೃಢಪಟ್ಟಿದೆ. 37.13 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,250 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:

ಶುಕ್ರವಾರ 2.29 ಲಕ್ಷ ಮಂದಿ ಕೋವಿಡ್‌ ಲಸಿಕೆ(Vaccine) ಪಡೆದುಕೊಂಡಿದ್ದಾರೆ. 22,251 ಮಂದಿ ಮೊದಲ, 1.88 ಲಕ್ಷ ಮಂದಿ ಎರಡನೇ ಮತ್ತು 18,590 ಮಂದಿ ಮುನ್ನೆಚ್ಚರಿಕಾ ಡೋಸ್‌ ಪಡೆದಿದ್ದಾರೆ. ಒಟ್ಟು 9.67 ಕೋಟಿ ಡೋಸ್‌ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ.

ಕರ್ನಾ​ಟಕ ಸೇರಿ 34 ರಾಜ್ಯ​ಗ​ಳಲ್ಲಿ ಕೋವಿಡ್ ಕೇಸು ಇಳಿಕೆ

ನವ​ದೆ​ಹ​ಲಿ: ಈವ​ರೆಗೆ ದೈನಂದಿ​ನ ಹೆಚ್ಚು ಪ್ರಕ​ರ​ಣ​ಗ​ಳನ್ನು ದಾಖ​ಲಿ​ಸು​ತ್ತಿದ್ದ ಕರ್ನಾ​ಟಕ, ಮಹಾ​ರಾಷ್ಟ್ರ ಸೇರಿ​ದಂತೆ ದೇಶದ 34 ರಾಜ್ಯ​ಗ​ಳಲ್ಲಿ ಕೊರೋನಾ ವೈರ​ಸ್ಸಿನ (Coronavirus) ತೀವ್ರತೆ ಗಣ​ನೀಯ ಪ್ರಮಾ​ಣ​ದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿ​ಟಿ​ವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯ​ಗ​ಳಲ್ಲಿ ಹೆಚ್ಚು ಕೋವಿಡ್‌ ಪ್ರಕ​ರ​ಣ​ಗಳು (Covid Cases) ದಾಖ​ಲಾ​ಗು​ತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿ​ಸಿದೆ.

Covid Crisis: ಬೆಂಗ್ಳೂರಲ್ಲಿ ವಾರದಲ್ಲಿ 2 ಲಕ್ಷ ಮಂದಿ ಗುಣಮುಖ: 92,000 ಕ್ಕಿಳಿದ ಸಕ್ರಿಯ ಕೇಸ್‌

ದೇಶದ ಒಟ್ಟಾರೆ ಜಿಲ್ಲೆ​ಗಳ ಪೈಕಿ 268 ಜಿಲ್ಲೆ​ಗ​ಳಲ್ಲಿ ಕೋವಿಡ್‌ ಪಾಸಿ​ಟಿ​ವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿ​ಣಾ​ಮ​ಕಾರಿ ಲಸಿಕೆ ಅಭಿ​ಯಾ​ನದಿಂದಾಗಿ ಕೋವಿ​ಡ್‌ಗೆ ಬಲಿ​ಯಾ​ಗುವವರ ಸಂಖ್ಯೆ ನಿಯಂತ್ರ​ಣಕ್ಕೆ ಬಂದಿದೆ. 3ನೇ ಅಲೆಯ ವೇಳೆ ಸರಾ​ಸರಿ 44 ವರ್ಷ​ದೊ​ಳ​ಗಿ​ನ​ವರು ಹೆಚ್ಚು ಬಾಧಿ​ತ​ರಾ​ಗಿದ್ದಾರೆ. ಈ ಹಿಂದಿನ 2 ಅಲೆ​ಗಳಲ್ಲಿ 55 ವಯೋ​ಮಾ​ನ​ದ​ವರು ಹೆಚ್ಚು ಬಾಧಿ​ತ​ರಾ​ಗಿ​ದ್ದರು. ಆದಾಗ್ಯೂ, ಕೋವಿ​ಡ್‌​ನಿಂದ ಗುಣ​ಮು​ಖ​ರಾ​ಗಲು ಹೆಚ್ಚು ಔಷಧ ಬಳ​ಕೆ​ಯಾ​ಗಿಲ್ಲ ಎಂಬುದು ಗಮ​ನಾರ್ಹ ಅಂಶ​ವಾ​ಗಿ​ದೆ ಎಂದು ಸರ್ಕಾರ ತಿಳಿ​ಸಿದೆ.

ದೇಶದಲ್ಲಿ 1.72 ಲಕ್ಷ ಕೇಸ್‌, 1008 ಸಾವು: ದೇಶದಲ್ಲಿ ಗುರುವಾರ ಬೆಳಗ್ಗೆ 8ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,72 ಲಕ್ಷ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಬುಧವಾರಕ್ಕಿಂತ ಶೇ.6.8ರಷ್ಟುಹೆಚ್ಚು. ಇನ್ನು ಇದೇ ಅವಧಿಯಲ್ಲಿ ಕೇರಳದ ಹಳೆಯ ಸಾವುಗಳೂ ಸೇರಿ 1008 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.18 ಕೋಟಿಗೆ ಏರಿಕೆಯಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ