Covid Crisis: 3ನೇ ಅಲೆಯಲ್ಲಿ ಮೊದಲ ಸಲ 10 ಸಾವಿರಕ್ಕಿಂತ ಕಮ್ಮಿ ಕೇಸ್‌!

Kannadaprabha News   | Asianet News
Published : Feb 07, 2022, 05:47 AM IST
Covid Crisis: 3ನೇ ಅಲೆಯಲ್ಲಿ ಮೊದಲ ಸಲ 10 ಸಾವಿರಕ್ಕಿಂತ ಕಮ್ಮಿ ಕೇಸ್‌!

ಸಾರಾಂಶ

ರಾಜ್ಯದಲ್ಲಿ ಮೂರನೇ ಅಲೆ ಪ್ರಬಲಗೊಂಡ ಬಳಿಕ ಮೊದಲ ಬಾರಿಗೆ ಹತ್ತು ಸಾವಿರಕ್ಕಿಂತ ಕಡಿಮೆ ದೈನಂದಿನ ಪ್ರಕರಣ ವರದಿಯಾಗಿದೆ. ಭಾನುವಾರ 8,425 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 47 ಜನರು ಮೃತರಾಗಿದ್ದಾರೆ. 19,800 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 97,781ಕ್ಕೆ ಇಳಿದಿದೆ.

ಬೆಂಗಳೂರು (ಫೆ.07): ರಾಜ್ಯದಲ್ಲಿ (Karnataka) ಮೂರನೇ ಅಲೆ ಪ್ರಬಲಗೊಂಡ ಬಳಿಕ ಮೊದಲ ಬಾರಿಗೆ ಹತ್ತು ಸಾವಿರಕ್ಕಿಂತ ಕಡಿಮೆ ದೈನಂದಿನ ಪ್ರಕರಣ ವರದಿಯಾಗಿದೆ. ಭಾನುವಾರ 8,425 ಮಂದಿಯಲ್ಲಿ ಸೋಂಕು (Covid-19) ಪತ್ತೆಯಾಗಿದೆ. 47 ಜನರು ಮೃತರಾಗಿದ್ದಾರೆ. 19,800 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 97,781ಕ್ಕೆ ಇಳಿದಿದೆ. ಜನವರಿ 8 ರಂದು 8,906 ಮಂದಿಯಲ್ಲಿ ಸೋಂಕು ಪತ್ತೆಯಾದ ಸರಿ ಸುಮಾರು ಒಂದು ತಿಂಗಳ ಬಳಿಕ ದೈನಂದಿನ ಪ್ರಕರಣ ಮತ್ತೆ ನಾಲ್ಕಂಕಿಗೆ ಇಳಿದಿದೆ. 1.29 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ (Positivity Rate) ಶೇ. 6.51ಕ್ಕೆ ಇಳಿದಿದೆ.

ಸೋಂಕಿನ ಹೊಸ ಪ್ರಕರಣಗಳ ಜೊತೆ ಸಾವು ಕೂಡ ಕಡಿಮೆ ಆಗುತ್ತಿದೆ. ಜನವರಿ 27ರಂದು 5,664 ಮಂದಿ ಕೋವಿಡ್‌ ಪೀಡಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಫೆಬ್ರವರಿ 6ರಂದು 3,728 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 97,781ಕ್ಕೆ ಕುಸಿದಿದೆ. ಕೋವಿಡ್‌-19ರಿಂದ ಬಾಧಿತ ಮಕ್ಕಳು ಅಸುನೀಗುವ ಪ್ರಕರಣ ಹೆಚ್ಚಾಗಿದೆ. ಬಳ್ಳಾರಿಯಲ್ಲಿ 3 ತಿಂಗಳ ಹೆಣ್ಣು ಮಗು ಮತ್ತು ಬೆಂಗಳೂರಿನಲ್ಲಿ ಒಂದು ವರ್ಷದ ಹೆಣ್ಣು ಮಗು ಮರಣವನ್ನಪ್ಪಿದೆ.

Covid Crisis: ಕೊರೋನಾಗೆ 4 ದಿನದ ನವಜಾತ ಶಿಶು ಬಲಿ

ಬೆಂಗಳೂರು ನಗರದಲ್ಲಿ 3,822, ಮೈಸೂರು 582 ಪ್ರಕರಣ ಹೊಸದಾಗಿ ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 17 ಮಂದಿ ಮೃತರಾಗಿದ್ದಾರೆ. ಬಳ್ಳಾರಿಯಲ್ಲಿ 7, ದಕ್ಷಿಣ ಕನ್ನಡ 5, ಮೈಸೂರು 3, ಉಡುಪಿ, ಕಲಬುರಗಿ, ಬೆಳಗಾವಿ, ಬಾಗಲಕೋಟೆ ತಲಾ 2, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಧಾರವಾಡ, ಗದಗ, ಹಾವೇರಿ, ರಾಯಚೂರು ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ಭಾನುವಾರ 33,634 ಮಂದಿ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ.

15,000ಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸ್‌: ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಶುಕ್ರವಾರ 14,950 ಹೊಸ ಪ್ರಕರಣಗಳು ವರದಿಯಾಗಿದೆ. 53 ಮಂದಿ ಮೃತರಾಗಿದ್ದಾರೆ. 40,599 ಮಂದಿ ಚೇತರಿಸಿಕೊಂಡಿದ್ದಾರೆ. ಪಾಸಿಟಿವಿಟಿ ದರ ಕೂಡ ನಿರಂತರವಾಗಿ ಕುಸಿಯುತ್ತಿದೆ. 1.36 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.10.93ರ ಪಾಸಿಟಿವಿಟಿ ದರ ದಾಖಲಾಗಿದೆ. ಜನವರಿ 12 ರಂದು ಶೇ. 10.96 ಪಾಸಿಟಿವಿಟಿ ದರ ವರದಿಯಾದ ಬಳಿಕ ಮತ್ತೆ ಪಾಸಿಟಿವಿಟಿ ದರ ಶೇ.10ರ ಅಸುಪಾಸಿಗೆ ಬಂದಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1.23 ಲಕ್ಷಕ್ಕೆ ಕುಸಿದಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 51,645 ಸಕ್ರಿಯ ಪ್ರಕರಣಗಳಿವೆ. ತುಮಕೂರು 6,223, ಮೈಸೂರು 5,724, ಧಾರವಾಡ ಜಿಲ್ಲೆಯಲ್ಲಿ 4,574 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ಬೆಂಗಳೂರು ನಗರದಲ್ಲಿ 6,039, ಮೈಸೂರು 944, ತುಮಕೂರು 656 ಮತ್ತು ಹಾಸನ ಜಿಲ್ಲೆಯಲ್ಲಿ 560 ಹೊಸ ಪ್ರಕರಣ ಪತ್ತೆಯಾಗಿದೆ. ನೂರಕ್ಕಿಂತ ಕಡಿಮೆ ಪ್ರಕರಣ ಯಾದಗಿರಿ (56), ರಾಮನಗರ (65), ಚಿಕ್ಕಮಗಳೂರು (73) ಮತ್ತು ಗದಗ ಜಿಲ್ಲೆಯಲ್ಲಿ (81) ವರದಿಯಾಗಿದೆ.

Covid Crisis: ಕರ್ನಾ​ಟಕ ಸೇರಿ 34 ರಾಜ್ಯ​ಗ​ಳಲ್ಲಿ ಕೋವಿಡ್ ಕೇಸು ಇಳಿಕೆ

ಕಲಬುರಗಿಯಲ್ಲಿ 9 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಬೆಂಗಳೂರು ನಗರದಲ್ಲಿ 15, ಮೈಸೂರು 10, ದಕ್ಷಿಣ ಕನ್ನಡ 4, ಬೆಳಗಾವಿ ಮತ್ತು ಶಿವಮೊಗ್ಗ ತಲಾ 3, ಉಡುಪಿ, ರಾಮನಗರ, ಕೊಪ್ಪಳ, ಕಲಬುರಗಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 2, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಹಾಸನ, ಕೋಲಾರ, ಮಂಡ್ಯ ಮತ್ತು ವಿಜಯಪುರಲ್ಲಿ ತಲಾ ಒಂದು ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಟ್ಟು 38.75 ಲಕ್ಷ ಮಂದಿಯಲ್ಲಿ ಈವರೆಗೆ ಸೋಂಕು ದೃಢಪಟ್ಟಿದೆ. 37.13 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,250 ಮಂದಿ ಮರಣವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ