ಮೋದಿಗೆ ಮತ ನೀಡಿದರೆ, ಮದುವೆಗೆ ಉಡುಗೊರೆ ಕೊಟ್ಟಂತೆ!

Published : Nov 17, 2018, 02:13 PM IST
ಮೋದಿಗೆ ಮತ ನೀಡಿದರೆ, ಮದುವೆಗೆ ಉಡುಗೊರೆ ಕೊಟ್ಟಂತೆ!

ಸಾರಾಂಶ

ಮಂಗಳೂರಿನ ಪದವಿನಂಗಡಿಯ ಭಟ್ರಕುಮೇರು ನಿವಾಸಿಯಾಗಿರುವ ಜಯಂತಿ ಎಂಬವರ ಮಗ ಪ್ರವೀಣ್ ಎಂಬವರೇ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಅಭಿಮಾನ ಮೆರೆದವರು. ಇನ್ವಿಟೇಷನ್‌ನಲ್ಲಿ 'ತಮ್ಮ ಸಂತಸದ ನಗುಮುಖದ ಆಗಮನವೇ ಆಶೀರ್ವಾದ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಬೆಂಬಲಿಸಿ ನೀಡುವ ಮತವೇ ಉಡುಗೊರೆ' ಎನ್ನುವ ಮೂಲಕ ಉಡುಗೊರೆ ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ವಧು-ವರನಿಗೆ ಗಿಫ್ಟ್ ಕೊಡುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಇತ್ತೀಚೆಗೆ ಈ ಆಚರಣೆ ಬದಲಾಗಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಆಗಮನವೇ ಉಡುಗೊರೆ, ಆಶೀರ್ವಾದವೇ ಉಡುಗೊರೆ ಎಂದು ಹಾಕುವ ಮೂಲಕ ಗಿಫ್ಟ್ ಬೇಡ ಎಂಬ ಸೂಚನೆ ನೀಡಲಾಗುತ್ತದೆ. ಆದರೀಗ ತುಳುನಾಡಿನ ಭಾವಿ ಪತಿ-ಪತ್ನಿ ಇವೆಲ್ಲವನ್ನು ಮೀರಿ ಒಂದು ಹೆಜ್ಜೆ ಮುಂದೆ ಹೋಗಿದ್ದು, 2019ರಲ್ಲಿ ಮೋದಿಗೆ ಮತ ನೋಡಿ ಅದುವೇ ನೀವು ನಮಗೆ ನೀಡುವ ಉಡುಗೊರೆ ಎನ್ನುವ ಮೂಲಕ ಎಚ್ಚೆರನ್ನೂ ಅಚ್ಚರಿಗೀಡು ಮಾಡಿದ್ದಾರೆ.

ಮಂಗಳೂರಿನ ಪದವಿನಂಗಡಿಯ ಭಟ್ರಕುಮೇರು ನಿವಾಸಿಯಾಗಿರುವ ಜಯಂತಿ ಎಂಬವರ ಮಗ ಪ್ರವೀಣ್ ಎಂಬವರೇ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಅಭಿಮಾನ ಮೆರೆದವರು. ಇನ್ವಿಟೇಷನ್‌ನಲ್ಲಿ 'ತಮ್ಮ ಸಂತಸದ ನಗುಮುಖದ ಆಗಮನವೇ ಆಶೀರ್ವಾದ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಬೆಂಬಲಿಸಿ ನೀಡುವ ಮತವೇ ಉಡುಗೊರೆ' ಎನ್ನುವ ಮೂಲಕ ವಸ್ತು, ಧನ ರೂಪದ ಉಡುಗೊರೆ ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಪ್ರವೀಣ್ ಮೋದಿಯ ಬಹುದೊಡ್ಡ ಅಭಿಮಾನಿ. ಯಾವುದೇ ಪಕ್ಷ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳದ ಪ್ರವೀಣ್ ಮೋದಿಇ ಆಡಳಿತಕ್ಕೆ ಮಾರು ಹೋಗಿದ್ದಾರೆ. ಹೀಗಾಗಿ ತಮ್ಮ ಮದುವೆ ಕೊನೆಯ ಪುಟವಿಡೀ ನೆಚ್ಚಿನ ನಾಯಕನ ಆಡಳಿತಾವಧಿಯ ಸಾಧನೆಗಳನ್ನು ತಿಳಿಸಿಕೊಡಲು ಮೀಸಲಿಟ್ಟಿದ್ದಾರೆ. ಇ್ಲಲಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಪ್ರಮುಖ ಯೋಜನೆಗಳ ವಿವರಗಳನ್ನು ನೀಡಿದ್ದಾರೆ. 

ಸದ್ಯ ಈ ಮೋದಿ ಅಭಿಮಾನಿಯ ಮದುವೆ ಆಮಂತ್ರಣ ಪತ್ರಿಕೆ ವಾಟ್ಸಪ್, ಪೇಸ್‌ಬುಕ್, ಟ್ವಿಟರ್‌ಳಲ್ಲಿ ವೈರಲ್ ಆಗುತ್ತಿದ್ದು, ಡಿಸೆಂಬರ್ 31 ರಂದು ಹೇಮಲತಾರೊಂದಿಗೆ ವಿವಾಹವಾಗಲಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ